ಕುಟುಂಬ ಸಹಿತ ಅಯ್ಯೋದ್ಯಾ ಪ್ರಭು ಶ್ರೀ ರಾಮನ ದರುಶನ ಪಡೆದ ಸಚಿವ ಮಾಂಕಾಳು ವೈದ್ಯ

ಬ್ರಮ್ಮಾನಂದ ಸ್ವಾಮೀಗಳೊಂದಿಗೆ  ಮರ್ಯಾದಾ ಪುರುಷೋತ್ತಮನ ದರ್ಶನ ಪಡೆದ ಸಚಿವರು

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಚಿವ ಮಾಂಕಾಳು ವೈದ್ಯರು ಕುಟುಂಬ ಸಹಿತ    ಶ್ರೀ ರಾಮ ಜನ್ಮ ಭೂಮಿಗೆ ಭೇಟಿ ನೀಡಿ ಮರ್ಯಾದಾ ಪುರುಷೋತ್ತಮ   ಪ್ರಭು ಶ್ರೀ ರಾಮನ ದರ್ಶನ ಮಾಡಿ ರಾಜ್ಯದ ಅಭಿವೃದ್ಧಿಯ ಪ್ರಾರ್ಥನೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಧರ್ಮಸ್ಥಳ,ಕನ್ಯಾಡಿ ಶ್ರೀ ರಾಮ ಕ್ಷೇತ್ರ ಶ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದದಿಂದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ “ಶ್ರೀ ರಾಮ ಕ್ಷೇತ್ರ ಮಠ”ದ ಜಾಗವನ್ನು ಗುರುಗಳೊಂದಿಗೆ ವೀಕ್ಷಿಶಿದರು

ಅಯೋಧ್ಯ ಪ್ರಭು ರಾಮಚಂದ್ರನ ದರ್ಶನದ ಬಗ್ಗೆ ಅವರು ಮಾತನಾಡಿ ನಾನು ಕುಟುಂಬ ಸಹಿತ ಭಗವಂತನ ದರ್ಶನ ಮಾಡಿದ್ದೇನೆ ಆ  ಭಗವಂತ ಎಲ್ಲಾ ದೇಶ ವಾಸಿಗಳಿಗೆ ಒಳ್ಳೆಯದನ್ನೇ ಮಾಡಲಿ ಸರ್ವೇಜನ ಸುಖಿನೋ ಭವಂತು ಸನ್ಮಮಂಗಳಾoತು ಎಂದು ಹೇಳಿದರು

ಈ ಸಂದರ್ಭದಲ್ಲಿ ಅವರ ಪತ್ನಿ ಫುಷ್ಪಲತಾ ವೈದ್ಯ ಸುಪುತ್ರಿ ಬೀನಾ ವೈದ್ಯ ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top