ವಿಧ್ಯಾರ್ಥಿ ಸಂಸತ್ ಚುನಾವಣೆಯಿಂದ ವಿಧ್ಯಾರ್ಥಿಗಳಲ್ಲಿ ಚುನಾವಣಾ ಜಾಗ್ರತಿ ಮುಡುತ್ತದೆ ಗ್ರಾಂ ಪ ಸದಸ್ಯ ಜಗದೀಶ ನಾಯ್ಕ
ಭಟ್ಕಳ : ತಾಲೂಕಿನ ಬೆಳ್ಕೆ ಸರಕಾರಿ ಪ್ರೌಢಶಾಲೆಯಲ್ಲಿ ದೇವ ನಾಂಪ್ರೀಯ ಸಮಾಜ ವಿಜ್ಞಾನ ಸಂಘದ ನೇತ್ರತ್ವದಲ್ಲಿ ವಿಧ್ಯಾರ್ಥಿಗಳು ಸಂಸತ್ ಚುನಾವಣೆ ನಡೆಸಿ ಚುನಾವಣಾ ಹಬ್ಬ ಆಚರಿಸಿದರು.
ವಿದ್ಯಾರ್ಥಿಗಳು ಮತದಾನ ಮಾಡಿ ತಮ್ಮ ಶಾಲಾ ಮಂತ್ರಿಮಂಡಲದ ನಾಯಕರನ್ನು ಆಯ್ಕೆಮಾಡಿಕೊಂಡಿದ್ದಾರೆ. ಈ ಮೂಲಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದಲ್ಲಿ ಜನನಾಯಕರನ್ನು ಆಯ್ಕೆಮಾಡುವ ಕ್ರಮವನ್ನು ಪ್ರತ್ಯಕ್ಷವಾಗಿ ಕಂಡುಕೊಂಡರು.
ದೇವ ನಾಂಪ್ರೀಯ ಸಮಾಜ ವಿಜ್ಞಾನ ಸಂಘದ ನೇತ್ರತ್ವದಲ್ಲಿ ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ ಶಿಕ್ಷಕ ಚಂದ್ರಶೇಕರ್ ಬೈಲೂರ್ ಹಾಗು ಶಿಕ್ಷಕಿ ಭಾರತಿ ಪಿ ಶಾನಬಾಗ್ ನೇತ್ರತ್ವ ವಹಿಸಿದ್ದರು. ಚುನಾವಣಾ ವಿಕ್ಷಕರಾಗಿ ಬೆಳ್ಕೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ನಾಯ್ಕ ವಹಿಸಿದ್ದರು ಶಿಕ್ಷಕಿ ಶಾಲಿನಿ D P R O ಆಗಿ , ಶಿಕ್ಷಕಿ ರೇಷ್ಮಾ ವಿ ನಾಯಕ , ಪ್ರಶಾಂತಿ ಜಿ ನಾಯ್ಕ , ಹೇಮಾವತಿ ನಾಯ್ಕ ಪಿ ಓ ಕಾರ್ಯನಿರ್ವಹಿಸಿದರೆ , ಕುಮಾರಿ ಸವಿತಾ ಎಂ ನಾಯ್ಕ ಬಿ ಎಲ್ ಓ ಶಿಕ್ಷಕ ಪ್ರಕಾಶ ಶಿರಾಲಿ ಸೆಕ್ಟರ್ ಆಪಿಸರ್ ರಜನಿ ಡಿ ಶೇಟ್ಟಿ ಮೈಕ್ರೋ ಅಬ್ಸರ್ವರ್ ನಾಗಪ್ಪ ಜಿ ಗೌಡಾ ವೀಕ್ಷಕರು ಆದರ್ಶ ಟಿ ಮೊಗೇರ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಮತದಾನ ಮುಗಿದ ನಂತರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮತ ಎಣಿಕೆ ಪ್ರದರ್ಶಿಸಲಾಯಿತು. ಹರ್ಷೀತ ಪದ್ಮಯ್ಯ ನಾಯ್ಕ ಪ್ರಧಾನಮಂತ್ರಿಯಾಗಿ, ಪ್ರದೀಪ ರಮೇಶ ನಾಯ್ಕ ಉಪಪ್ರಧಾನ ಮಂತ್ರಿ, ನಾಗೇಶ ರಾಮ ಗೊಂಡ ಕ್ರೀಡಾ ಮಂತ್ರಿ. ಪುಷ್ಪ ಮಾಸ್ತಯ್ಯ ನಾಯ್ಕ ಸಾಂಸ್ಕೃತಿಕ ಮಂತ್ರಿಯಾಗಿ ರೇಣುಕಾ ಮಾದೇವ ನಾಯ್ಕ ಅಕ್ಷರ ದಾಸೋಹ ಮತ್ರಿ . ಸಮಯ ಪಾಲನಾ ಮಂತ್ರಿಯಾಗಿ ವಿಜಿತ ಮಾದೇವ ನಾಯ್ಕ, ಪ್ರಾರ್ಥನಾ ಮಂತ್ರಿಯಾಗಿ ದೀಕ್ಷೀತ ನಾಗರಾಜ ನಾಯ್ಕ ಜಿ ಎನ್ ಪ್ರತೀಕ ನೀರಾವರಿ ಮಂತ್ರಿಯಾಗಿ , ತನುಜಾ ನಾಗರಾಜ ಜೈನ್ ಪ್ರವಾಸ ಮಂತ್ರಯಾಗಿ ಭವ್ಯ ನಾರಾಯಣ ಗೊಂಡ ಸ್ವಚ್ಚತೆಯ ಮಂತ್ರಿಆಗಿ ಆಯ್ಕೆಯಾಗಿರುತ್ತಾರೆ ಹಾಗೆ ಅಪೇಕ್ಷಾ ಸುಬ್ರಮಣ್ಯ ನಾಯ್ಕ ಅಕ್ಷಯಾ ಮಂಜುನಾಥ ಆಚಾರಿ , ದಿಗಂತ ಈಶ್ವರ ನಾಯ್ಕ , ಮದುಕರ್ ಗಣಪತಿ ನಾಯ್ಕ, ಮೌನೇಶ ಉದಯ್ ಮೊಗೇರ್ , ವೈಷ್ಣವಿ ಜಗದೀಶ ಮೊಗೇರ್ , ನಾಗರಾಜ ತಿಮ್ಮ ಮರಾಠಿ , ಮೇದನಾ ದುರ್ಗಪ್ಪಾ ನಾಯ್ಕ , ಶಶಾಂಕ ಗಣಪತಿ ಗೊಂಡ , ಸಂಜನಾ ಗಜಾನನ ಶೆಟ್ಟಿ , ಹೇಮಂತ ತೇಜಕುಮಾರ್ ಜೈನ್. ಚಂದ್ರಕಲಾ ಪದ್ಮಯ್ಯ ನಾಯ್ಕ, ಪ್ರಜ್ವಲ್ ಮಂಜುನಾಥ ನಾಯ್ಕ, ಸಂಗೀತ ಶೇಷ ಮರಾಠಿ ಇವರುಗಳು ವರ್ಗ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ ,
ಈ ಸಂದರ್ಬದಲ್ಲಿ ಶಿಕ್ಷಕಿ ಭಾರತಿ ಪಿ ಶಾನಬಾಗ್ , ಜಗದೀಶ ನಾಯ್ಕ ,ಚಂದ್ರಶೇಕರ್ ಬೈಲೂರ್, ಎಸ್ ಡಿ ಎಂ ಸಿ ಅಧ್ಯಕ್ಷ ಹೊನ್ನಪ್ಪ ನಾಯ್ಕ, ವಿಧ್ಯಾರ್ಥಿಗಳಾದ ಹರ್ಷೀತಾ , ಪುಷ್ಪ , ಪ್ರೀಯಾ , ಹಾಗು ಪ್ರದೀಪ ಇವರು ವಿಧ್ಯಾರ್ಥಿ ಸಂಸತ್ ಚುನಾವಣೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ಷಪಡಿಸಿದರು