ಚನ್ನಪಟ್ಟಣ ಹನುಮಂತ ದೇವಸ್ಥಾನ ದಲ್ಲಿ ಪುರಾಣ ಸೇವೆ

ಭಟ್ಕಳ : ನಗರದ ಪ್ರತಿಷ್ಠಿತ ದೇವಸ್ಥಾನವಾದ ಶ್ರೀ ಚನ್ನಪಟ್ಟಣ ಹನೂಮಂತ ದೇವರ ಸನ್ನಿಧಾನದಲ್ಲಿ ಶ್ರಾವಣ ಮಾಸದಲ್ಲಿ ಜರಗುವಂತಹ ಪುರಾಣ ಸೇವೆ ನಾಳೆಯಿಂದ 5 ದಿನಗಳ ಪರ್ಯಂತ ನಡೆಯಲಿದೆ.

ದಿನಾಂಕ 23-08-2022 ಮಂಗಳವಾರದಿಂದ ರಿಂದ 26-08-2022 ಶುಕ್ರವಾರದವರೆಗೆ ರವರೆಗೆ ಸಂಜೆ 5-30 ರಿಂದ 7-30 ರವರೆಗೆ ಹಾಗೂ 27 -08-2022 ಶನಿವಾರದಂದು 10 ರಿಂದ 12 ಗಂಟೆವರೆಗೆ ಸುಂದರ ಕಾಂಡದ ಪ್ರವಚನದ ಮಂಗಲೋತ್ಸವ ನಡೆಯಲಿದೆ. ಬೆಂಗಳೂರಿನ ವಿದ್ವಾನ್‌ ಬ್ರಹ್ಮಣ್ಯತೀರ್ಥಾಚಾರ್ಯ ಇವರು ಸುಂದರಕಾಂಡದ ಪ್ರವಚನವನ್ನು ನೆರವೇರಿಸಿ ಕೊಡಲಿರುವರು. ದಿನಾಂಕ 27-08-2022 ರಶನಿವಾರ ಸುಂದರಕಾಂಡದ ಮಂಗಲೋತ್ಸವ ಜರುಗಿ ನಂತರ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಕೊವಿಡ್‌- 19 ರ ಕಾರಣದಿಂದಾಗಿ ಕಳೆದರೆಡು ವರ್ಷಗಳಿಂದ ಪುರಾಣ ಸೇವೆ ಹಾಗೂ ಮಂಗಲೋತ್ಸವದ ಸಂತರ್ಪಣೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ . ಈ ವರ್ಷದಿಂದ ಮತ್ತೆ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೋಡಬೇಕಾಗಿ ಆಡಳಿತ ಸಮಿತಿಯವರು ವಿನಂತಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top