ಶಿರಾಲಿ ಸಾವರ್ಜನಿಕರು ಮತ್ತು ರೈತರಿಂದ ಮನವಿ
ಭಟ್ಕಳ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯ ಕಾರಣದಿಂದ ಶಿರಾಲಿಯಲ್ಲಿ ಮನೆ ಅಂಗಡಿ ಶಾಲೆಗಳಿಗೆ ಚರಂಡಿ ನೀರು ನುಗ್ಗುತ್ತಿದ್ದು ಈ ಸಮಸ್ಯೆಯನ್ನು ಪರಿಹರಿಸಲು ನಿಂತಿರುವ ನೀರನ್ನು ಕ್ರಷೀ ಭೂಮಿಯ ಮೂಲಕ ಹರಿದು ಹೊಗುವಂತೆ ಯೋಜನೆ ತಯಾರಿಸುತ್ತಿದ್ದು ಈ ಯೋಜನೆಯನ್ನು ಕೂಡಲೆ ಕೈ ಬಿಡಬೇಕು ಎಂದು ಭಟ್ಕಳ ತಾಲೂಕಿನ ಶಿರಾಲಿಯ ಸರ್ವಜನಿಕರು ಮತ್ತು ರೈತರು ತಾಲೂಕ ತಹಶಿಲದಾರರಿಗೆ ಮನವಿಯನ್ನು ಸಲ್ಲಿಸಿದರು
ಮನವಿಯಲ್ಲಿ ನಾವು ಬಡ ರೈತರಿದ್ದು ಬೆಸಾಯವನ್ನೆ ನಂಬಿಕೊಂಡು ಬದುಕುತ್ತಿದ್ದೆವೆ ಹೀಗಿರುವಾಗ ತಾವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯ ಕಾರಣ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ನಿಂತಿರುವ ನೀರನ್ನು ನಮ್ಮ ಸಾಗುವಳಿ ಗದ್ದೆಗಳ ಮೂಲಕ ಹರಿದು ಹೋಗಲು ಅನುವು ಮಾಡಿಕೊಡಲು ಪರಿಶೀಲನೆ ನಡೆಸುತ್ತಿರುವ ಬಗ್ಗೆ ನಮಗೆ ಮಾಹೀತಿ ಬಂದಿರುತ್ತದೆ ಇದಕ್ಕೆ ನಮ್ಮ ತಕರಾರು ಇರುತ್ತದೆ ತಾವು ಹಾಗೆ ಮಾಡಿದಲ್ಲಿ ನಮ್ಮ ಸುಮಾರು ೧೦೦ ಕುಟುಂಬ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ ಇಡುವಂತೆ ಮಾಡಲಾಗುತ್ತದೆ ವಿನಃ ಯಾವುದೆ ಸರ್ವಜನಿಕರ ಹಿತಾಸಕ್ತಿ ಕಾಪಾಡಿದಂತೆ ಆಗುವುದಿಲ್ಲಾ ಬದಲಾಗಿ ನಮ್ಮ ನೀವನ ಸಂಕಷ್ಟಕೀಡು ಮಾಡಿದಂತಾಗುತ್ತದೆ ಅಲ್ಲದೆ ವಿನಾಕಾರಣ ಕ್ರಷೀ ಬೂಮಿಗೆ ಕ್ರತಕ ಪ್ರವಾಹ ಸ್ರಷ್ಟಿಸಿದಂತಾಗುತ್ತದೆ ಇದರ ಬದಲಾಗಿ ಈ ನಿಂತ ನೀರನ್ನು ಸರಾಗವಾಗಿ ಹರಿದುಹೊಗಲು ರಸ್ತೆ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ನರ್ಮಿಸಿ ನೀರಕಂಠ ರಸ್ತೆ ಕೂಡು ರಸ್ತೆ ಪಕ್ಕದಲ್ಲಿರುವ ನೀರಿನ ಹಳ್ಳಕ್ಕೆ ಹಾಗು ಚಮಗಾರ ಹಳ್ಳಕ್ಕೆ ಹರಿದುಹೊಗುವಂತೆ ಸೂಕ್ತ ಚರಂಡಿ ವ್ಯವಸ್ತೆ ಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನರ್ಮಿಸಿಕೊಟ್ಟಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದಂತಾಗುತ್ತದೆ ಅಲ್ಲದೆ ಈ ಮೊದಲು ಹಳೆ ರಸ್ತೆ ಇದ್ದಾಗ ಿದೆ ಚರಂಡಿಯ ಮೂಲಕ ನೀರು ಹಳ್ಳವನ್ನು ಸೇರುತ್ತಿತ್ತು ಎಂಬುದು ನಮ್ಮೆರ ಸರ್ವಜನಿಕರ ಒಕ್ಕೋರಲ ಅಬಿಪ್ರಾಯವಾಗಿರುತ್ತದೆ ಕಾರಣ ತಾವು ಸ್ಥಳ ಪರಿಶಿಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯನ್ನು ಸಲ್ಲಿಸಿದರು
ಈಸಂರ್ಬದಲ್ಲಿ ಪುಂಡಲಿಕ್ ನಾಯ್ಕ ರಾಮಚಂದ್ರ ಮಂಜುನಾಥ ಮಾದೇವಿ ನಾಗಪ್ಪ ಲಕ್ಷ್ಮಿ ಶನಿಯಾರ ಜಿ ಎನ್ ರೆವ್ಣಕರ್ ಸುನಿಲಗ ಮುಂತಾದವರು ಉಪಸ್ಥಿತರಿದ್ದರು