ದೇವಿಗೆ ಬೆಳ್ಳಿ ಕವಚ ಸಮರ್ಪಿಸಿದ ಕೊಟೇಶ್ವರದ ಜನತೆ
ಭಟ್ಕಳ : ತಾಲೂಕಿನ ಕೊಟೇಶ್ವರ ಕೊರಗರಕೇರಿಯಲ್ಲಿ ನೆಲೆನಿಂತ ಇತಿಹಾಸ ಪ್ರಸಿದ್ದ ಚೌಡೇಶ್ವರಿ ದೇವಿಯ ವರ್ದಂತಿ ಉತ್ಸವವು ಅತಿ ವಿಜ್ರಂಬಣೆಯಿಂದ ನಡೆದಿದ್ದು ಸ್ಥಳಿಯ ಭಕ್ತಜನರು ಶ್ರೀದೇವಿಗೆ ಬೆಳ್ಳಿ ಕವಚವನ್ನು ಸಮರ್ಪಿಸಿ ಮಾತೆಯ ಕ್ರಪೆಗೆ ಪಾತ್ರರಾದರು
ವರ್ದಂತಿ ಉತ್ಸವವು ಅತಿ ವಿಜ್ರಭಣೆಯಿಂದ ನಡೆದಿದ್ದು ಈ ಸಂದರ್ಬದಲ್ಲಿ ಕಲಾಭಿವೃದ್ದಿ ಹೊಮ ಸತ್ಯನಾರಾಯಣ ಪೂಜೆ ಅನ್ನ ಸಂತರ್ಪಣೆ ಹೀಗೆ ಅನೇಕ ದೈವಿಕ ಕಾರ್ಯಗಳು ನಡೆದವು ಈ ಸಂದರ್ಬದಲ್ಲಿ ಸಭಾ ಕಾರ್ಯಕ್ರಮವು ಕೂಡ ನಡೆಯಿತು
ಕಾರ್ಯಕ್ರಮದ ಮೊದಲು ದೇವಿಯ ಮೂರ್ತಿಯನ್ನು ತಾಲೂಕಿನಾಧ್ಯಂತ ಮೇರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು
ಮುಖಂಡರು ಹಾಗು ನ್ಯಾಯವಾದಿಗಳು ಆದ ರವಿಂದ್ರ ಮಂಗಳ ಅವರು ಮಾತನಾಡಿ ಇಂದು ನಮ್ಮ ಗ್ರಾಮದಲ್ಲಿ ಚೌಡೆಶ್ವರಿಯ ವರ್ದಂತಿ ಉತ್ಸವ ತುಂಬ ಉತ್ತಮವಾಗಿ ನಡೆಯಿತು ಹೀಗೆ ನಾವು ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೆ ಇರಬೇಕು ನಮ್ಮ ಸಮಾಜದ ಯುವಕರು ಮುಖ್ಯವಾಹಿನಿಗೆ ಬರಬೇಕು ನಮ್ಮ ಯುವಕರು ಹಿಂಜರಿಕೆ ಕಿಳರಿಮೆಗಳನ್ನು ಮೆಟ್ಟಿ ಸಮಾಜದಲ್ಲಿ ಗೌರವಯುತ ಸ್ಥಾನಗಳನ್ನು ಅಲಂಕರಿಸಬೇಕು ನಾನು ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಡೆದು ಇಂದು ವಕೀಲನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆನೆ ನಮ್ಮ ಸಮಾಜದ ಯುವಕರು ನನ್ನಂತೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವಕೀಲ ವೃತ್ತಿಗೆ ಬಂದು ನಮ್ಮ ಸಮಾಜದ ಅಭಿವೃದ್ದಿಗೆ ಶ್ರಮೀಸ ಬೇಕು ಎಂದು ಹೇಳಿದರು
ಈ ಸಂದರ್ಬದಲ್ಲಿ ಕೊಟೇಶ್ವರ ಗ್ರಾಮದ ಸಮಸ್ಥ ನಾಗರಿಕರು ಮುಖಂಡರು ಭಟ್ಕಳ ತಾಲೂಕ ಸಾರ್ವಜನಿಕರು ಉಪಸ್ಥಿರಿದ್ದರು