ಹುಟ್ಟುಹಬ್ಬದ ಪ್ರಯುಕ್ತ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುದರ ಮೂಲಕ ಸಮಾಜಕ್ಕೆ ಮಾದರಿಯಾದ ಬೀನಾ ವೈದ್ಯ
ಭಟ್ಕಳ : ಉಸ್ತುವಾರಿ ಸಚಿವರು ಮೀನುಗಾರಿಕೆ ಬಂದರು ಒಳನಾಡ ಜಲಸಾರಿಗೆ ಸಚಿವರಾದ ಮಾಂಕಾಳು ವೈದ್ಯರ ಸುಪುತ್ರಿ ಬೀನಾ ವೈದ್ಯ ಅವರು ತಮ್ಮ ಸಹಸ್ರಾರು ಅಭಿಮಾನಿ ಬಳಗ ಕಾರ್ಯಕರ್ತರ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು
ಬೀನಾ ವೈದ್ಯಾ ಅವರು ತಮ್ಮ ಹುಟ್ಟುಹಬ್ಬವನ್ನು ಸಮಾಜ ಮುಖಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ ಸಚಿವ ಮಾಂಕಾಳು ವೈದ್ಯರು ತಮ್ಮ ಮಗಳ ಹುಟ್ಟುಹಬ್ಬದ ಪ್ರಯುಕ್ತ ಹತ್ತು ದೇವಸ್ಥಾನಗಳ ವರ್ಧತಿಉತ್ಸವಕ್ಕೆ ಧನ ಸಹಾಯ ಐದು ಜನ ವಸತಿ ಮತ್ತು ನಿವೇಶನ ವಂಚಿತರಿಗೆ ನಿವೇಶನ ಮತ್ತು ವಸತಿ, ತಾಲೂಕಿನ ಐವತ್ತು ಬಡಮಕ್ಕಳನ್ನು ದತ್ತು ತೆಗೆದುಕೊಳ್ಳುದು ಆರೋಗ್ಯ ಸಮಸ್ಯೆಯಿಂದ ಪೀಡಿತರಾದವರಿಗೆ ಧನ ಸಹಾಯವನ್ನು ಮಾಡಿದರು
ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಅರಣ್ಯ ರಕ್ಷಣೆಗೆ ಒತ್ತು ಕೊಡುವುದು ಉದ್ದೇಶದಿಂದ ತಮ್ಮ ಹುಟ್ಟು ಹಬ್ಬ ಆಚರಣೆಗೆ ಬಂದ ಪ್ರತಿಯೊಬ್ಬರಿಗೂ ಗಿಡಗಳನ್ನು ವಿತರಿಸುವುದರ ಮೂಲಕ ಜಾಗ್ರತಿ ಮೂಡಿಸಿದರು
ಹೀಗೆ ಸಚಿವರ ಪುತ್ರಿ ತಮ್ಮ ಹುಟ್ಟುಹಬ್ಬವನ್ನು ಸಮಾಜ ಮುಖಿಯಾಗಿ ಆಚರಿಸಿ ಕೊಳ್ಳುದರ ಮೂಲಕ ಸಮಾಜಕ್ಕೆ ಮಾದರಿಯಾದರು
ಈ ಸಂರ್ಭದಲ್ಲಿ ಅವರು ಮಾತನಾಡಿ ಇಂದು ನಾನು ನಮ್ಮ ಪಕ್ಷದ ಕಾರ್ಯಕರ್ತರು ಹಾಗು ಅತ್ಹ್ಮಿಯರ ಜೊತೆಯಲ್ಲಿ ಹುಟ್ಟುಹಬ್ಬವನ್ನು ಆಚರಣೆಯನ್ನು ಮಾಡಿಕೊಂಡಿದ್ದೇನೆ ನನಗೆ ಹಾರ್ಯಸಿದ ಹಿರಿಯರಿಗೆ ಕಿರಿಯರಿಗೆ ತುಂಬು ಹೃದಯದ ಧನ್ಯವಾದಗಳು ನಮ್ಮ ಎಲ್ಲಾ ಹಿರಿಯ ಕಿರಿಯ ಕಾರ್ಯಕರ್ತರಿಗೆ ನಾನು ಚಿರಋಣಿ ನಮ್ಮ ಕಾರ್ಯಕರ್ತರ ಜೊತೆ ನಾವು ಯಾವಾಗಲೂ ಇದ್ದೇವೆ ಎಂದು ಹೇಳಿದರು