ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವ ಮಂಕಾಳು ವೈದ್ಯರಿಂದ ಜನತಾ ದರ್ಶನ

ಸರಕಾರದ ಐದು ಗ್ಯಾರಂಟಿ ಯೋಜನೆ ಸಮಗ್ರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದ ಸಚಿವರು

ಉತ್ತರ ಕನ್ನಡ : ಜಿಲ್ಲೆಯ ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ತಮ್ಮ ಕಛೇರಿಯಲ್ಲಿ ಸಚಿವ ಮಂಕಾಳು ವೈದ್ಯರು ಜನತಾ ದರ್ಶನ ಕಾರುಕ್ರಮ ಹಮ್ಮಿಕೊಂಡು ಜನ ಸಾಮಾನ್ಯರ ಕುಂದುಕೊರತೆಯನ್ನು ಆಲಿಸಿ ಸ್ಥಳದಲ್ಲಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರವನ್ನು ಒದಗಿಸಿದರು . ಸಂದರ್ಬದಲ್ಲಿ ಸರಕಾರದ ಐದು ಗ್ಯಾರಂಟಿ ಯೋಜನೆ ಸಮಗ್ರ ಮಾಹಿತಿ ಪುಸ್ತಕ ಬಿಡುಗಡೆ ಮಾಡಿದರು

ಸಚಿವ ಮಂಕಾಳು ವೈದ್ಯರು ಯಾವಾಗಲು ತಮ್ಮ ಕ್ಷೇತ್ರದ ಜನಸಾಮಾನ್ಯರ ಸಮಸ್ಯೆ ಮತ್ತು ಕುಂದುಕೊರತೆಯನ್ನು ನಿವಾರಿಸುವ ದೃಷ್ಟಿಯಿಂದ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೆ ಬರುತ್ತಿದ್ದು ಪ್ರತಿಭಾರಿಯಂತೆ ಈ ಬಾರಿಯು ಕೂಡ ಭಟ್ಕಳ ಹೊನ್ನಾವರದ ತಮ್ಮ ಕಛೇರಿಯ ಜನತಾ ಧರ್ಶನ ಕಾರ್ಯಕ್ರಮ ಹಮ್ಮಿಕೊಂಡು ತಮ್ಮ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದರು ಸ್ಥಳದಲ್ಲಿ ಪರಿಹರಿಸಲು ಸಾದ್ಯವಿಲ್ಲದ ಸಮಸ್ಯೆಗಳನ್ನು ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವಂತೆ ತಾಕಿತು ಮಾಡಿದರು

ಹೊನ್ನಾವರದ ತಮ್ಮ ಕಚೇರಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಜಿಲ್ಲಾ ಮಟ್ಟದಲ್ಲಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಾಗಿ ಸಮಗ್ರ ಮಾಹಿತಿಯನ್ನು ಒಳಗೊಂಡ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು ಈ ಕಿರು ಪುಸ್ತಕವು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಯಶೋಗಾಥೆ, ಅನಿಸಿಕೆ ಸೇರಿದಂತೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವಂತೆ ರೂಪಿಸಲಾಗಿದೆ‌.

ಈ ಸಂದರ್ಬದಲ್ಲಿ ಮಂಕಿ ಬ್ಲಾಕ್‌ ಕಾಂಗೇಸ್‌ ಅಧ್ಯಕ್ಷ ಗೊವಿಂದ ನಾಯ್ಕ ಭಟ್ಕಳ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ ಕಾರ್ಯದರ್ಶಿ ಸುರೇಶ ನಾಯ್ಕ ವೆಂಕಟರಮಣ ಮೊಗೇರ್‌ ಮುಂಡಳ್ಳಿ ಜಾಲಿ ಪಟ್ಟಣ ಪಂವಾಯತ್‌ ಸ್ಥಾಯಿ ಸಮೀತಿ ಅಧ್ಯಕ್ಷ ಈಶ್ವರ ಮೋಗೇರ್‌ ಸದಸ್ಯ ರಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top