ಭಟ್ಕಳ: ಮುರ್ಡೇಶ್ವರದಲ್ಲಿ ಕಳೆದ ವರ್ಷದಿಂದ ಆರಂಭವಾಗಿದ್ದ ಮಹಾ ಶಿವರಾತ್ರಿ ಜಾಗರಣೆ ಉತ್ಸವವನ್ನು ಈ ಬಾರಿಯೂ ವಿಜೃಂಬಣೆಯಿAದ ಆಚರಿಸಲು ಸಿದ್ದತೆ ನಡೆಸಿದ್ದು ಸ್ಥಳೀಯರು ಸಹಕಾರ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿನಂತಿಸಿದರು.
ಅವರು ಬುಧವಾರ ತಾಲೂಕು ಆಡಳಿತ ಸೌಧದಲ್ಲಿ ಮಹಾಶಿವರಾತ್ರಿ ಉತ್ಸವದ ಸಿದ್ದತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ವರ್ಷದಂತೆ ಈ ವರ್ಷವೂ ದೇವಸ್ಥಾನವನ್ನು ನಸುಕಿನ ಜಾವ ೪.೦೦ಗಂಟೆಗೆ ತೆರಯಲು ಆಡಳಿತ ಮಂಡಳಿಯವರಿಗೆ ವಿನಂತಿಸಿಲಾಗಿದೆ.
ಇದರಿಂದ ಪಾದಯಾತ್ರೆ ನಡೆಸಿ ಬರುವ ಭಕ್ತರು ಬೆಳಿಗ್ಗೆಯಿಂದಲೆ ದೇವರ ದರ್ಶನ ಮಾಡಬಹದು. ಶಿರೂರು, ಭಟ್ಕಳ, ಉತ್ತರಕೊಪ್ಪ, ಮಂಕಿ ಹೊನ್ನಾವರದಿಂದ ಬರುವ ಭಕ್ತರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲು ಕನಿಷ್ಟ ೨೦ ಬಸ್ಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಶಿವರಾತ್ರಿಯ ಜಾಗರಣೆ ನಡೆಸುವ ಉದ್ದೇಶದಿಂದ ಸಂಜೆ ೬ ಗಂಟೆಯಿAದ ಬೆಳಗಿನ ಜಾವ ೬ ಗಂಟೆಯವರೆಗೆ ರಾಜ್ಯದ ಪ್ರಸಿದ್ದ ಕಲಾವಿದರಿಂದ ಭಕ್ತಿ ಸಿಂಚನ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದ್ದು ಶುಕ್ರವಾರದ ಒಳಗೆ ತಹಸೀಲ್ದಾರ ಅಥವಾ ಎಸಿ ಕಚೇರಿಯಲ್ಲಿ ಹೆಸರು ನೊಂದಾಯಿಸಬೇಕು. ಭಕ್ತಿ ಕಾರ್ಯಕ್ರಮ ಬಿಟ್ಟರೆ ಇನ್ಯಾವುದೆ ವಿಧಧ ಕಾರ್ಯಕ್ರಮಗಳಿಗೆ ಆಸ್ಪದವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷಿö್ಮÃ ಪ್ರಿಯಾ ಮಾತನಾಡಿ ಶಿವರಾತ್ರಿ ದಿವಸ ಸರಬರಾಜು ಆಗುವ ಆಹಾರದ ಗುಣಮಟ್ಟ ಮೊದಲೆ ಪರೀಕ್ಷಿಸಬೇಕು, ನೀರಿನ ಶುಧ್ದತೆ, ಸ್ಥಳದ ಸ್ವಚತೆ, ವಿದ್ಯತ್ ಸಂಪರ್ಕ, ಸುರಕ್ಷತೆ ವ್ಯವಸ್ಥೆ, ಅಗ್ನಿಶ್ಯಾಮಕ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರೀಶಿಲನೆ ನಡೆಸಿ ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಸ್ಪಿ ಎಂ ನಾರಾಯಣ ಮಾತನಾಡಿ ಕಳೆದ ಬಾರಿ ಶಿವನ ಮೂರ್ತಿಯನ್ನು ವಿಕೃತಗೊಳಿಸಿ ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳನ್ನು ತಾನೆ ಬಂದು ಬಂಧಿಸಿದ್ದೆ. ಈ ಬಾರಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಯತ್ನ ಮಾಡಿದರೆ ಅವರ ಹೆಡೆಮುರಿ ಕಟ್ಟಲಾಗುವದು. ಕಾರವಾರದ ನೌಕಾನೆಲೆಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಇಬ್ಬರನ್ನು ಬಂಧಿಸಲಾಗಿದೆ. ಕಳ್ಳರ ಗುಂಪಿನ ಕುರಿತು ಪೊಲೀಸ್ ಇಲಾಖೆ ನಿಗಾವಹಿಸಿದೆ, ಮಹಿಳಯರು, ಯುವತಿಯರನ್ನು ಚುಡಾಯಿಸಿದಂತೆ ತಡೆಯಲು ಮಹಿಳಾ ಪೊಲೀಸರು ಮಪ್ತಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾಲ್ತುಳಿತ ನಡೆಯದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಕರಾವಳಿ ಕಾವಲು ಪಡೆಯು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು ಅವರೂ ಕೂಡ ಯಾವುದೆ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಬದಲ್ಲಿ ಪ್ರಭಾರಿ ಸಹಾಯಕ ಆಯುಕ್ತೆ ಕಾವ್ಯಾರಾಣಿ, ತಹಸೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಡಿವೈಎಸ್ಪಿ ಮಹೇಶ ಎಮ್ ಸೇರಿದಂತೆ ಇತರರು ಇದ್ದರು. ರ್ಸಾಜನಿಕರು ತಮ್ಮ ಸಲಹೆ ಸೂಚನೆ ನೀಡಿದರು