ರೈಲಿಗೆ ತಲೆ ಕೊಟ್ಟು ಸಾವನಪ್ಪಿದ್ದ ಯುವಕ

ಭಟ್ಕಳ: ಭಟ್ಕಳ ದ ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ತೆರಳಿದ ಜೋಗಿ ದೇವಾಡಿಗ ರೈಲಿಗೆ ತಲೆ ಕೊಟ್ಟು ಸಾವನಪ್ಪಿದ್ದಾರೆ.

ಜನತಾ ಕಾಲೋನಿ ಬಳಿಯ ಬಂಗಾರಮಕ್ಕಿ ಕ್ವಾಟರ್ಸನಲ್ಲಿದ್ದ ಜೋಗಿ ದೇವಾಡಿಗ ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ ಕುಡಿಯುವ ಚಟ ಹೊಂದಿದ್ದ ಅವರು ಮಾನಸಿಕವಾಗಿ ಕುಗ್ಗಿದ್ದರು. ಜ 7ರ ರಾತ್ರಿ ಅವರು ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ಹೋಗಿದ್ದು, ರಶಿಕೇಶ-ಕೊಚ್ಚಿವಲ್ ಎಕ್ಸಪ್ರೆಸ್ ರೈಲು ಬರುವುದನ್ನು ನೋಡಿದರು.

ಕಂಬಿಗೆ ತಲೆ ಕೊಟ್ಟ ಅವರಿಗೆ ರೈಲು ಗುದ್ದಿದ್ದು, ಅಲ್ಲಿಯೇ ಸಾವನಪ್ಪಿದರು. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಜೋಗಿ ಅವರ ಸಹೋದರ ಅಣ್ಣಪ್ಪ ದೇವಾಡಿಗ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

WhatsApp
Facebook
Telegram
error: Content is protected !!
Scroll to Top