ಗೊಂಡ ಸಮಾಜದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಪತ್ರಿಕಾಗೋಷ್ಠಿ ಅಲ್ಲಿ ಗೊಂಡ ಸಮಾಜದ ಆಕ್ರೋಶ
ತಾಲೂಕಿನಲ್ಲಿ ಪರಿಶಿಷ್ಟಪಂಗಡಕ್ಕೆ ಸೇರಿದ ಗೊಂಡ (Gond) ಸಮಾಜವು ೧೫ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ದೇಶಾದ್ಯಂತ ಇರುವ ಗೊಂಡರೊಂದಿಗೆ ಒಡನಾಟವನ್ನು ಹೊಂದಿದ್ದಾರೆ ಹಾಗೆ ನಮ್ಮ ಗೊಂಡ ಸಮಾಜದ ಸಹಾಯಕ್ಕೆ ಎಂ ಎಲ್ಸಿ ಶಾಂತರಂಸಿದ್ಧಿ ಅವರ ವಿರುದ್ಧ ಮಾತನಾಡುದನ್ನು ಸಹಿಸಲಾರೆವು ಎಂದು ಗೊಂಡ ಸಮಾಜದ ಅಭಿವೃದ್ದಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ ಹೇಳಿದರು.
ಅವರು ಕೋಗ್ತಿಯ ಶ್ರೀ ಮಹಾಸತಿ ದೇವಸ್ಥಾನದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ
ಗೊಂಡ (Gond) ಸಮಾಜವು ಭಾರತ ದೇಶಾದ್ಯಂತ ಇರುವ ಗೊಂಡರೊಂದಿಗೆ ಒಡನಾಟವನ್ನು ಹೊಂದಿದೆ. ಅದರಂತೆ ಇತ್ತೀಚಿಗೆ ೨೧ನೇ ರಾಷ್ಟ್ರಮಟ್ಟದ ಗೊಂಡಿ ಸಾಹಿತ್ಯ ಸಮ್ಮೇಳನವನ್ನು ನಾವು ಆಯೋಜಿಸಿದ್ದೆವು. ಈ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಿದ್ದಿ ಬುಡಕಟ್ಟಿನವರಾದ ಶಾಂತಾರಾಮ ಸಿದ್ದಿಯವರು ಭಟ್ಕಳ ತಾಲೂಕಿನಲ್ಲಿ ಗೊಂಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ತೊಂದರೆ ಕುರಿತು ನಮ್ಮಗೊಂಡ ಬುಡಕಟ್ಟಿನ ಪರವಾಗಿ ಮಾತನಾಡಿದ್ದರು. ಆದರೆ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಗೊಂಡ ಬುಡಕಟ್ಟಿನ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರದೆ ಇರುವಂತಹ ಕೆಲವು ವ್ಯಕ್ತಿಗಳು ಶಾಂತಾರಾಮ ಸಿದ್ದಿಯವರು ಹಾಗೂ ನಮ್ಮಗೊಂಡ ಬುಡಕಟ್ಟಿನ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದು ಅವರು ಹೇಳಿದರು.
ಗೊಂಡ ಸಮಾಜ ಶಾಂತಾರಮ ಸಿದ್ದಿಯವರ ಮಾತಿಗೆ ಯಾವತ್ತೂ ಬೆಂಂಬಲವಾಗಿ ನಿಲ್ಲುತ್ತದೆ. ಗೊಂಡ ಬುಡಕಟ್ಟಿನ ಸಮಾಜದ ವಿರುದ್ಧ ಮಾತನಾಡಿದ ವ್ಯಕ್ತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ. ನಮ್ಮಗೊಂಡ ಬುಡಕಟ್ಟು ಜನರ ಮೇಲೆ ಹಲವಾರು ಪಟ್ಟಭದ್ರ ಹಿತಾಶಕ್ತಿಗಳಿಂದ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ನಮ್ಮನ್ನು ಸಮಾಜದ ಮುಖ್ಯವಾಹಿನಿಗೆ ಬರದಂತೆ ತಡೆಯುವ ಪ್ರಯತ್ನಗಳಾಗುತ್ತಿವೆ. ನಮ್ಮ ಸಮಾಜದ ನೌಕರರ ಮೇಲೆ ಹಾಗೂ ರಾಜಕೀಯವಾಗಿ ಮುಂದುವರಿಯುತ್ತಿರುವವರ ಮೇಲೆ ಸುಳ್ಳು ದೂರುಗಳು ದಾಖಲಾಗುತ್ತಿವೆ. ಗೊಂಡ ಬುಡಕಟ್ಟುಗಳಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ನೀಡುವ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಾದ ತಹಶೀಲ್ದಾರ, ಗ್ರಾಮ ಆಡಳಿತಾಧಿಕಾರಿಗಳು. ಕಂದಾಯ ನಿರೀಕ್ಷಕರು, ಉಪವಿಭಾಗದ ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಗೊಂಡ ಸಮಾಜದ ಯುವ ಮುಖಂಡ ಮಂಜುನಾಥ ಗೊಂಡ ಮಾತನಾಡಿ, ೧೯೫೦ರಲ್ಲಿ ನಮ್ಮಗೊಂಡ ಸಮಾಜಕ್ಕೆ ಬುಡಕಟ್ಟಿನ ಪರಿಶಿಷ್ಠ ವರ್ಗದ ಪ್ರಮಾಣಪತ್ರವನ್ನು ನೀಡಲು ಪ್ರಾರಂಭಿಸಲಾಗಿತ್ತು. ಆ ಸಂದರ್ಭದಲ್ಲಿ ಕೂಡ ಉತ್ತರ ಕನ್ನಡದಲ್ಲಿರುವ ಗೊಂಡರೆಲ್ಲರೂ ಪರಿಶಿಷ್ಟ ವರ್ಗದ ಗೊಂಡರು ಎಂದು ಸಂವಿಧಾನದಲ್ಲಿನ ಮೀಸಲು ಪ್ರಕಾರ ಪರಿಶಿಷ್ಟವರ್ಗ ಪ್ರಮಾಣ ಪತ್ರ ನೀಡುವಂತೆ ಆದೇಶ ಆಗಿತ್ತು. ಈ ಆದೇಶ ಗೆಝೇಟಿಯರ್ನಲ್ಲಿ ಪ್ರಕಟವಾಗಿದೆ. ಕಾಲಂ ನಂ ೯ ರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಅಲ್ಲದೇ ೧೯೫೬ ರಲ್ಲಿ ಮೈಸೂರು ಸರಕಾರವು ಭಾರತ ಸರಕಾರದ ಆದೇಶದ ಮೇಲೆ ಮೈಸೂರು ಗಜೆಟಿಯರ್ನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬುಡಕಟ್ಟಿನ ಮತ್ತು ಜಿಲ್ಲೆಗಳ ಯಾದಿಯಲ್ಲಿ ಉತ್ತರ ಕನ್ನಡ (Uttara Kannada) ಗೊಂಡ ಬುಡಕಟ್ಟಿನ ಜನರು ಪರಿಶಿಷ್ಟಿ ಪಂಗಡಕ್ಕೆ ಸೇರಿದವರು ಎಂದು ಪ್ರಕಟಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೊಂಡ ಸಮಾಜದ ಪ್ರಮುಖರಾದ ಸೋಮಯ್ಯ ಗೊಂಡ ಹಾಡುವಳ್ಳಿ, ಬಡಿಯಾ ಗೊಂಡ ಕುಂಟವಾಣಿ, ವೆಂಕಟೇಶ ಗೊಂಡ, ಹೊನ್ನಯ್ಯ ಗೊಂಡ, ರಾಘವೇಂದ್ರ ಗೊಂಡ ಜಾಲಿ, ಸುಕ್ರ ಗೊಂಡ, ಪಾರ್ವತಿ ಗೊಂಡ ಮತ್ತಿತರರು ಉಪಸ್ಥಿತರಿದ್ದರು.
|||