ಕಾಣೆಯಾದವರಿಗಾಗಿ ಶೋದ ಕಾರ್ಯ
ಸಾವಿನಲ್ಲೂ ರಾಜಕಿಯಕ್ಕೆ ಮುಂದಾಯಿತೆ ರಾಜಕಿಯ ಹಿತಾಸಕ್ತಿಗಳು
ಉತ್ತರ ಕನ್ನಡ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಕೆಲವೊಂದು ರಾಜಕಿಯ ಹಿತಾಸಕ್ತಿಗಳಿಗೆ ಕಾಣೆಯಾದವರ ಚಿಂತೆಗಿಂತ ಸಾವಿನಲ್ಲೂ ಕೆಲವೊಂದು ಹಿತಾಸಕ್ತಿಗಳು ರಾಜಕಿಯ ಮಾಡಲು ಮುಂದಾಗಿರುವುದು ಮೆಲ್ನೊಟಕ್ಕೆ ಕಂಡು ಬರುತ್ತಿದೆ ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ
ಹೌದು ವೀಕ್ಷಕರೆ ತಾಲೂಕಿನ ಅಂಕೋಲದ ಗುಡ್ಡ ಕುಸಿತ ಪ್ರಕರಣ ರಾಜಕಿಯ ತಿರುವನ್ನು ಪಡೆದುಕೊಂಡಂತೆ ಕಾಣುತ್ತಿದೆ ಜಿಲ್ಲಾಡಳಿತ ಪೋಲಿಸ್ ಇಲಾಖೆ ಕುಸಿದು ಬಿದ್ದ ಗುಡ್ಡದ ತೆರವು ಕಾರ್ಯಾಚರಣೆಗೆ ಶತಾಯ ಗತಾಯ ಪ್ರಯತ್ನ ಮಾಡುತ್ತಲೆ ಇದೆ ಕಾಣೆಯಾದವರನ್ನು ಬಹುಬೇಗ ಹುಡುಕಬೇಕು ಎಂಬ ಹಂಬಲ ಯಾರಿಗಿಲ್ಲ ಹೇಳಿ ಯಾರಿಗೂ ಕಾಣೆಯಾದವರನ್ನು ಹುಡುಕದೆ ರಾಜಕಿಯ ಮಾಡಬೇಕೆನ್ನು ದುಷ್ಟತನ ನಮ್ಮ ರಾಜ್ಯವಲ್ಲ ದೇಶದಲ್ಲೆ ಯಾರಿಗೂ ಇಲ್ಲ ಆದರೆ ಕೆಲವೊಂದು ಬುದ್ದಿವಂತ ಹಿತಾಸಕ್ತಿಗಳು ಈ ನತದ್ರಷ್ಟರ ಸಾವಿನ ಪ್ರಕರಣದಲ್ಲೆ ತಮ್ಮ ಬೇಳೆ ಬೇಯಿಸಿಕೊಳ್ಳಲು ನೊಡುತ್ತಿರುವರು ವಿಪರ್ಯಾಸವೆ ಸರಿ
ಹೌದು ನೋಡಿ ವಿಕ್ಷಕರೆ ನಮ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಈ ಪ್ರಕರಣ ನಡೆದ ಪ್ರಾರಂಭದ ದಿನದಲ್ಲೆ ಸ್ಥಳದಲ್ಲೆ ಮೊಕ್ಕಾಮ್ ಹುಡಿ ತಾನೊಬ್ಬ ಸಚಿವ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಮುತುವರ್ಜಿ ವಹಿಸಿ ಅಧಿಕಾರಿಗಳಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನವನ್ನು ನಿಡುತ್ತ ಯಾವುದೆ ಲೊಪವನ್ನುವಾಗದಂತೆ ತೆರವು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದರು ಆದರೆ ಕೆಲವೋಂದು ರಾಷ್ಟ್ರಿಯ ಚಾನಲಗಳ ಮೂಲಕ ಸಚಿವ ಮಂಕಾಳು ವೈದ್ಯರು ಸ್ಥಳಕ್ಕೆ ಬೇಟಿಯನ್ನೆ ನೀಡಲಿಲ್ಲ ಅವರು ಮೂರು ನಾಲ್ಕು ದಿನಗಳ ನಂತರ ಬೇಟಿ ನೀಡಿದ್ದಾರೆ ಎಂದು ಸುಳ್ಳು ಪ್ರಚಾರವನ್ನು ನಡೆಸಲಾಗುತ್ತದೆ ಇದಕ್ಕೆ ಕಾರಣ ಏನು ಇಲ್ಲಿ ವಾಹಿನಿಯ ತಪ್ಪು ಎಂದು ಹೇಳಲಾಗುವುದಿಲ್ಲಾ ಇಲ್ಲಿ ವಾಹಿನಿಯ ಮೂಲಕ ಅಪಪ್ರಚಾರ ನಡೆಸಲಾಗಿದೆ
ಇನ್ನು ಜಿಲ್ಲೆಯಲ್ಲಿ ಎಸ್ ಪಿ ರೆಸ್ಕ್ಯೂ ಟಿಮ್ಗೆ ತಳಿಸಿದರು ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತದೆ ಹಾಗಾದರೆ ಯಾವುದೆ ಸರಕಾರಿ ಕೆಲಸ ಮಾಡುವ ಸಂದರ್ಬದಲ್ಲಿ ಯಾರು ಬೇಕಾದರು ತೆರವು ಕಾರ್ಯಾಚರಣೆ ಮಾಡಲು ಮುಂದಾಗ ಬಹುದೆ ಅದಕ್ಕೂ ಕೂಡ ಒಂದು ಪ್ರೋಟೊಕೊಲಗಳು ಎಂಬುವುದು ಇದೆಯಲ್ಲವೆ ಮೊದಲು ರೆಸ್ಕೂ ಟಿಮ್ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆದುಕೊಳ್ಳಬೇಕು ಒಂದು ವೇಳೆ ಜಿಲ್ಲಾಧಿಜಾರಿಗಳಿಗೆ ಸರಿ ಎನ್ನಿಸಿದರೆ ಒಪ್ಪಿಗೆ ಕೊಟ್ಟು ಕಾರ್ಯಾಚರಣೆಗೆ ಇಳಿಯ ಬಹುದು ಅದನ್ನು ಬಿಟ್ಟು ನಾವು ರಾಷ್ಟ್ರೀಯ ಮಟ್ಟದ ರೆಸ್ಕ್ಯೂ ಟಿಮ್ ನಾವು ಒಮ್ನಿಂದೋಮ್ಮೆಗೆ ಕಾರ್ಯಾಚರಣೆ ಇಳಿದರೆ ಒಂದು ವೇಳೆ ಕಾರ್ಯಾಚರಣೆ ಸಂದರ್ಬದಲ್ಲಿ ದೊಡ್ಡ ಅನಾಹುತಗಳು ಸಂಬವಿಸಿದರೆ ಜಿಲ್ಲಾಧಿಕಾರಿಗಳಿಂದ ಹಿಡಿದು ಜಿಲ್ಲಾ ಎಸ್ ಸಂಬಂದಿಸಿದ ಅಧಿಕಾರಿಗಳ ತಲೆ ದಂಡವಾಗುದು ಪಕ್ಕಾ ಅಂತಹ ಅನಾಹುತ ಒಂದು ವೇಳೆ ಸಂಬವಿಸಿದರೆ ಈಗ ಯಾರು ಅವರಿಗೆ ಅವಕಾಶ ನೀಡಿ ಎಂದು ಬೊಬ್ಬೆ ಹೊಡಿತಿದ್ದಾರೋ ಅವರೆ ಯಾವ ಅರ್ಹತೆಯ ಮೇಲೆ ಅವಕಾಶ ನಿಡಿದ್ದಿರಿ ಎಂದು ಕೂಗಾಡಲು ಪ್ರಾರಂಬಿಸುತ್ತಾರೆ
ಮುಖ್ಯವಾಗಿ ಇಲ್ಲಿ ತೆರವು ಕಾರ್ಯಚರಣೆ ಮಾತ್ರ ನಡೆಸಿದರೆ ಸಾಲದು ತೆರವು ಕಾರ್ಯಾಚರಣೆ ಸಂದರ್ಬದಲ್ಲಿ ಉಳಿದ ಗುಡ್ಡವು ಕುಸಿದು ಅಪಾಯ ಸಂಬವಿಸುವ ಸಾಧ್ಯತೆಗಳು ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ
ಇನ್ಬು ಮುಖ್ಯವಾಗಿ ಗುಡ್ಡ ಕುಸಿತಕ್ಕೆ ಮೂಲ ಕಾರಣವಾದ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಯಾರು ಮಾತನಾಡಲು ತಯಾರಿಲ್ಲ ಯಾಕೆ ಎನ್ನುವುದೆ ಯಕ್ಷಪ್ರಶ್ನೆಯಾಗಿ
ಬಾಯಿ ತೆಗೆದರೆ ಸಚಿವರು ಸ್ಥಳಕ್ಕೆ ಬೇಟಿ ನೀಡಲಿಲ್ಲ
ಸಚಿವ ಮಂಕಾಳ ವೈದ್ಯರ ಮೇಲೆ ಶಾಸಕ ಸತೀಶ ಸೈಲ್ ಗರಂ ಆದರು ಇಂತದ್ದೆ ಕೆಲಸಕ್ಕೆ ಭಾರದ ವಿಷಯಗಳೆ ಹೊರತು ಯಾರಿಗೂ ಇಲ್ಲಿ ಕಾಣೆಯಾದವರ ಬಗ್ಗೆ ಕನಿಕರವಿದ್ದಂತೆ ಕಾಣಿಸುವುದಿಲ್ಲ
ರಾಜಕಿಯ ಮಾಡಬೇಕು ಆದರೆ ಸಾವಿನ ಮನೆಯಲ್ಲಿ ರಾಜಕಿಯ ಮಾಡಬಾರದು ಯಾಕೆಂದರೆ ಇಂದು ಆ ಅಮಾಯಕರಿಗೆ ಆದಂತ ಪರಿಸ್ಥಿತಿ ನಾಳೆ ನಿಮಗೊ ನಿಮ್ಮ ಮಕ್ಕಳಿಗೋ ಆ ಪರಿಸ್ಥಿತಿ ಬರಬಹುದು ಯಾಕೆಂದರೆ ನಾವು ಸಮಾಜಕ್ಕೆ ಏನು ನಿಡುತ್ತೆವೋ ನಮಗೆ ಅದು ದುಪ್ಪಟ್ಟಾಗಿ ಸಿಗುತ್ತದೆ ನೆನಪಿರಲಿ
ಈಗಾಗಲೆ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರವನ್ನು ಘೋಷೀಸಿದ್ದು ತೆರವು ಕಾರ್ಯಾಚರಣೆ ವೇಗ ಹೆಚ್ಚಿಸುವಂತೆ ಆದೇಶಿಸಿದ್ದಾರೆ
ಮುಖ್ಯವಾಗಿ ನಮ್ಮ ಕರಾವಳಿ ಸಮಾಚಾರವು ಕೂಡ ಘಟನಾ ಸ್ಥಳಕ್ಕೆ ಬೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸಾರ್ವಜನಿಕರ ಮುಂದಿಡುವ ಮೂಲಕ ಅಳಿಲು ಸೇವೆಯನ್ನು ಮಾಡಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ
ಏನೆ ಆಗಲಿ ಕಾಣೆಯಾದವರು ಆದಷ್ಟು ಬೇಗ ದೋರಕುವಂತಾಗಲು ಹಾಗೆ ಲಾರಿ ಚಾಲಕ ಅರ್ಜುನ್ ಜೀವಂತವಾಗಿ ಹೊರಬಂದು ಅವರ ಮಡದಿ ಮಕ್ಕಳನ್ನು ಸೇರಿಕೊಳ್ಳುವಂತಾಗಲಿ ಎಂದು ನಮ್ಮ ಕರಾವಳಿ ಸಮಾಚಾರ ದೇವರಲ್ಲಿ ಪ್ರಾರ್ಥಿಸುತ್ತದೆ