ಪತ್ರಕರ್ತ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ
ಭಟ್ಕಳ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ಇನ್ಪೋಸಿಸ್ ಬ್ಲಾಕನಲ್ಲಿ ಗುರುವಾರ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ ‘ ಪತ್ರಿಕೋದ್ಯಮವ ವಿಷಯ ಮತ್ತು ಹುದ್ದೆ ನಿಭಾಯಿಸುವ ಪೂರ್ವದಲ್ಲಿ ನಮ್ಮಲ್ಲಿಯೇ ಗೊಂದಲ ಉಂಟಾಗುತ್ತದೆ. ಪ್ರಜಾಪ್ರಭುತ್ವದ ರಕ್ಷಣೆಗೆ ಕಾವಲುಗಾರರಾಗಿ ಪತ್ರಕರ್ತರ ಪಾತ್ರ ಬಹುಮುಖ್ಯ. ನ್ಯಾಯ ಸತ್ಯದ ಹಾದಿಯಲ್ಲಿ ಸಮಾಜವನ್ನು ಕರೆದೊಯ್ಯುವ ಕಾರ್ಯ ಪತ್ರಕರ್ತರದ್ದಾಗಿದೆ. ತಪ್ಪು ಸರಿಪಡಿಸುವ ಕೆಲಸದ ಜೊತೆಗೆ ಸಮಾಜದ ಜವಾಬ್ದಾರಿವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ಮೂಲಕ ಸಮಾಜ ಬಲಾಢ್ಯವಾಗಬೇಕಾದರೆ ಪತ್ರಕರ್ತರ ಅವಶ್ಯಕತೆ ತುಂಬಾ ಇದೆ. ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಜ್ಲಿಸೆ ಓ ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದ ಅವರು ‘ವಿದ್ಯಾರ್ಥಿಗಳ ಜೊತೆಗೆ ಕಾರ್ಯಕ್ರಮ ಮಾಡುವುದರಿಂದ ಅವರಿಗೆ ಪತ್ರಿಕೋದ್ಯಮ ಬಗ್ಗೆ ಮಾಹಿತಿ ಸಿಗಲಿದೆ. ಪತ್ರಕರ್ತರ ಪೆನ್ನಿನ ಶಾಯಿಯು ವ್ಯಕ್ತಿಯನ್ನು ಯಾವ ರೀತಿಯಲ್ಲಿಯಾದರು ತೋರ್ಪಡಿಸಬಹುದಾಗಿದೆ. ಸರಕಾರದ ಕಾರ್ಯಕ್ರಮ ವನ್ನು ಸಹ ಪತ್ರಕರ್ತರಿಂದಲೇ ಬಡವರಿಗೆ ತಲುಪುವಂತಾಗಿದೆ. ಜೀವನದಲ್ಲಿ ಯಾವತ್ತು ಮುಂದೆ ಧೈರ್ಯ ಮಾಡಿ ಹೋಗಬೇಕು ಆಗ ಮಾತ್ರ ಬದುಕು ಸಾಧಿಸಲು ಸಾಧ್ಯ ಎಂದು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎರಡು ಸಂಘ ಒಟ್ಟಾಗಿ ಮುನ್ನಡೆಯಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು.
ಮುಖ್ಯ ಅತಿಥಿಗಳಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಟ್ರಸ್ಟಿ ನಾಗೇಶ ಭಟ್ ಉಪಸ್ಥಿತರಿದ್ದು ಮಾತನಾಡಿದ ಅವರು ‘2011 ರಲ್ಲಿ ಕೊನೆಯ ಬಿ.ಎ. ಬ್ಯಾಚ್ ಆಗಿತ್ತು. ಈ ಹಿನ್ನೆಲೆ ನಮ್ಮ ಕಾಲೇಜು ಬಿ.ಎ. ಪತ್ರಿಕೋದ್ಯಮ ಆರಂಭಿಸುವ ಚಿಂತನೆ ಮಾಡಿ 6ನೇ ವರ್ಷದಲ್ಲಿ ಮುಂದುವರೆಯುತ್ತಿದೆ. ಶಿರಸಿಯ ನಂತರ ಭಟ್ಕಳದ ನಮ್ಮ ಕಾಲೇಜಿನಲ್ಲಿ ಪತ್ರಿಕೋದ್ಯಮ ಆರಂಭಿಸಿದ ಕಾಲೇಜು. ಇದೊಂದು ಉತ್ತಮ ಸಮಾಗಮ ಕಾರ್ಯಕ್ರಮ ಆಗಿದೆ. ನಮ್ಮ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಸಿಕ್ಕಿದಂತಾಗಿದೆ.
ಭಟ್ಕಳದ ಎಲ್ಲಾ ಪತ್ರಕರ್ತರು ಸಮಾಜದಲ್ಲಿ ಉತ್ತಮ ಘನತೆಯನ್ನು ಹೊಂದಿದ್ದಾರೆ ಮತ್ತು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೇವಲ ಪತ್ರಕರ್ತರಾಗದೇ ಅವರು ಅವರ ಸನ್ನಡತೆ ಮತ್ತು ಜನರೊಂದಿಗಿನ ಬೆರೆಯುವಿಕೆಯನ್ನು ನಾವೆಲ್ಲ ಗಮನಿಸಿದ್ದೇವೆ. ಇದರು ನಮ್ಮಲ್ಲಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ಪಾಠದ ಜೊತೆಗೆ ಅವರಿಗೆ ಸ್ಥಳ ವರದಿ ಮಾಡಲು ಭಟ್ಕಳ ಪತ್ರಕರ್ತರು ಹಾಗೂ ಸಂಘವು ಅವಕಾಶ ಮಾಡಿಕೊಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಲಿದೆ ಎಂದರು.
ಹಿರಿಯ ಪತ್ರಕರ್ತರು ಸಂಘದ ಗೌರವಾಧ್ಯಕ್ಷ ಸತೀಶಕುಮಾರ ನಾಯ್ಕ ಉಪನ್ಯಾಸ ನೀಡಿ ಮಾತನಾಡಿದ ಅವರು ಪತ್ರಿಕಾ ಧರ್ಮದ ಜೊತೆಗೆ ಮಾನವೀಯತೆಯನ್ನು ಗಮನಿಸಿ ವರದಿಗಾರಿಕೆ ಮಾಡಬೇಕು. ಪ್ರಭುದ್ದತೆಯ ಜೊತೆಗೆ ಸಮಾಜದ ಏಳಿಗೆಗೆ ಶ್ರಮಿಸಬೇಕು.
ಅಧ್ಯಕ್ಷತೆಯನ್ನು ವಹಿಸಿ ಭಟ್ಕಳ ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿದ ಅವರು ಪತ್ರಕರ್ತರು ಮತ್ತು ಪತ್ರಿಕೆಗೆ ಮಹತ್ವದ ಸ್ಥಾನ ಇದೆ ಇದು ನಮಗೆ ಹೆಮ್ಮೆಯ ಸಂಗತಿ.
ಸಾಮಾಜಿಕ ಜಾಲತಾಣದ ಅಬ್ಬರದ ನಡುವೆ ಪತ್ರಿಕೆಗೆ ಉನ್ನತ ಮಹತ್ವವಿದೆ. ಇಂದಿನ ಯುವಕರಲ್ಲಿ ಪತ್ರಿಕೆ ಓದುವುದು ಕಡಿಮೆಯಾಗಿದೆ. ಪತ್ರಿಕೆಯ ಮಾಹಿತಿಯಿಂದ ಜ್ಞಾನ ಲಭಿಸಲಿದೆ. ಪತ್ರಿಕೆಯಿಂದ ಉನ್ನತ ಸ್ಥಾನದಲ್ಲಿದ್ದವರು ಅವರು ಸಮಾಜದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ ಸಿಕ್ಕಿದೆ. ನಮ್ಮ ಭಟ್ಕಳದಲ್ಲಿಯೂ ಸಹ ಕೆಲ ಪತ್ರಕರ್ತರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಉದಾಹರಣೆ ಇದೆ. ರಾಜ್ಯ ಮತ್ತು ಕೇಂದ್ರ ಸರಕಾರ ಪತ್ರಕರ್ತರನ್ನು ಕಡೆಗಣಿಸುತ್ತಿದ್ದಾರೆ. ಆರೋಗ್ಯ ಕಾರ್ಡವನ್ನು ಸಹ ಇನ್ನು ತನಕ ಜಾರಿಗೆ ತಂದಿಲ್ಲ. ತಾಲೂಕಾ ಮಟ್ಟದ ವರದಿಗಾರರು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಸರಕಾರಗಳು ಗಮನ ನೀಡಬೇಕು ಎಂದು ಹೇಳಿದರು.
ಶ್ರೀ ಗುರು ಸುಧೀಂದ್ರ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿದರು ಹಾಗೂ ಪ್ರಾಸ್ತಾವಿಕ ಸಂಘದ ಗೌರವಾಧ್ಯಕ್ಷ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಇವರು ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಖಜಾಂಚಿ ಮೋಹನ ನಾಯ್ಕ ಹಾಗೂ ಈಶ್ವರ ನಾಯ್ಕ ಮತ್ತು ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಲಿಡಿಯಾ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಮ್.ಆರ್. ಮಾನ್ವಿ ವಂದಿಸಿದರು.
ಇದೆ ವೇಳೆ ಅಂಕೋಲಾದಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರಿಗಾಗಿ ಒಂದು ನಿಮಿಷ ಮೌನಾಚಾರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು
ಇದೇ ವೇಳೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ವಿತರಕರಾದ ಗಣೇಶ ಮಂಜಯ್ಯ ನಾಯ್ಕರವನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಭಾಗದ ಗಣ್ಯರು, ಶ್ರೀ ಗುರು ಸುಧೀಂದ್ರ ಕಾಲೇಜು ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.