ಬಾವುಕರಾದ ಸಚಿವ ಮಂಕಾಳು ವೈದ್ಯ
ಐ ಆರ್ ಬಿ ಅವೈಜ್ಞಾನಿಕ ಕಾಮಗಾರಿಯೆ ಈ ಅವಘಡಕ್ಕೆ ಕಾರಣ ಮಂಕಾಳ ವೈದ್ಯ ಆಕ್ರೋಶ
ಉತ್ತರ ಕನ್ನಡ: ದಲ್ಲಿ ಅತಿವೃಷ್ಟಿಯಾಗಿದ್ದು ನೇರೆಹಾವಳಿಗಳು ಸಂಬವಿಸಿ ಭೂ ಕುಸಿತಗಳು ಸಂಬವಿಸಿದೆ ಹಾಗೆ ಐ ಆರ್ ಬಿ ಬೇಕಾಬಿಟ್ಟಿ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರಣ ಅಂಕೋಲ ಶಿರೂರಿನ ಭಾಗದ ರಾಷ್ಟೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಅನೇಕ ಸಾವುನೋವುಗಳು ಸಂಬವಿಸಿದೆ ಘಟನಾ ಸ್ಥಳಕ್ಕೆ ಸಚಿವ ಮಂಕಾಳು ವೈದ್ಯರು ಬೇಟಿನಿಡಿದ್ದು ಪರಿಸ್ಥಿತಿ ಅವಲೋಕಿಸುವಾಗ ಸಚಿವ ಮಂಕಾಳು ವೈದ್ಯರು ಸ್ಥಂಬಿಭೂತರಾಗಿದ್ದಲ್ಲದೆ ಒಂದು ಕ್ಷಣ ಬಾವುಕತೆಗೆ ಒಳಗಾಗಿದ್ದು ಐ ಆರ್ ಬಿ ಅವೈಜ್ಞಾನಿಕ ರಾಷ್ಟ್ರಿಯ ಹೆದ್ದಾರಿ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು
ಹೌದು ವಿಕ್ಷಕರೆ ಒಂದು ವರ್ಷಗಳಿಂದ ಸಚಿವ ಮಂಕಾಳು ವೈದ್ಯರು ಐ ಆರ್ ಬಿ ಕಂಪನಿ ನಡೆಸುತ್ತಿರುವ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಹೇಳುತ್ತಲೆ ಬರುತ್ರಿದ್ದರು ಆಕ್ರೋಶವನ್ನು ವೈಕ್ತ ಪಡಿಸುತ್ತಲೆ ಬಂದಿದ್ದರು ಆದರೆ ಈ ರಾಷ್ಡ್ರೀಯ ಹೆದ್ದಾರಿ ಪ್ರಾದಿಕಾರ ಮತ್ತು ಕೆಂದ್ರ ಸಚಿವ ಗಡ್ಕರಿ ಪಾಲುದಾರಿಕೆಯ ಕಂಪನಿ ಐ ಆರ್ ಬಿ ಇದು ಕೆಂದ್ರ ಸರಕಾರದ ಪ್ರೋಜೆಕ್ಟ ಎಂಬ ಉಡಾಪೆ ತೋರಿಸುತ್ತಲೆ ಬರುತ್ತಿತ್ತು ಈ ಹಿಂದೆ ಕಾರವಾರದಲ್ಲಿ ಅಪಾಯದ ಮುನ್ಸುಚನೆಯನ್ನು ಅರಿತ ಸಚಿವ ಮಂಕಾಳು ವೈದ್ಯರು ಅಂಡರ್ ಪಾಸಿಂಗ್ ಟನಲ್ ಬಂದ್ ಮಾಡಿಸಿದ್ದರು ಆದರೆ ಇದೆ ರಾಷ್ಟ್ರೀಯ ಹೆದ್ದಾರಿ ಮತ್ತು ಐ ಆರ್ ಬಿ ಕಂಪನಿ ಸ್ಪರ್ದೆಗೆ ಬಿದ್ದವರಂತೆ ಒತ್ತಡವನ್ನು ತಂದು ಟನಲ್ ಒಪನ್ ಮಾಡಿಸಿದ್ದರು ಆದರೆ ಕೆಲವು ದಿನಗಳ ನಂತರ ಈ ಟನಲ್ನಲ್ಲಿ ಬಂಡೆ ಕುಸಿದು ಬಿದ್ದಿದ್ದು ಅದ್ರಷ್ಟ ವಶಾತ್ ಯಾವುದೆ ಸಾವು ನೋವುಗಳು ಸಂಬವಿಸಿರಲಿಲ್ಲ ಈಗ ಇಡಿ ಜಿಲ್ಲೆಯೆ ಬೆಚ್ಚಿಬೀಳುವಂತ ಘಟನೆ ಅಂಕೋಲದ ಶಿರೂರಿನಲ್ಲಿ ಐ ಆರ್ ಬಿ ಅವೈಜ್ಞಾನಿಕ ಕಾಮಗಾರಿಯ ಕಾರಣ ನಡೆದಿದೆ ಅಂಕೋಲ ಶಿರೂರಿನ ರಾಷ್ಟ್ರ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸುವ ಸಂದರ್ಬದಲ್ಲಿ ಇದೆ ಮಾನಗೆಟ್ಟ ಹೊಣೆಗೆಡಿ ಐ ಆರ್ ಬಿ ಕಂಪನಿ ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೆ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕತ್ತರಿಸಿದೆ ಇವರ ಈ ಹೊಣೆಗೆಡಿತನಕ್ಕೆ ಈಗ ಇಡಿ ಗುಡ್ಡವೆ ಕುಸಿದು ಬಿದ್ದಿದ್ದು ಸಂಚಾರಕ್ಕೆ ಅಡೆತಡೆಯಾಗಿದ್ದಲ್ಲೆ ಅನೇಕ ಅಮಾಯಕ ಜೀವಗಳು ಮಣ್ಣಡಿಯಾಗಿ ತಮ್ಮ ಜೀವವನ್ನು ಕಳೆದುಕೊಂಡಿದೆ ಈಗಾಗಲೆ ಐದು ಮೃತದೇಹಗಳು ದೊರೆತ್ತಿದ್ದು ಇನ್ನು ಅನೇಕರು ಕಳ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದೆ ಈ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮತ್ತು ಐ ಆರ್ ಬಿ ಕಂಪನಿ ಒಟ್ಟಾಗಿ ಸೇರಿ ದೇಶಕಟ್ಟುತ್ತೆವೆ ದೇಶಕಟ್ಟುತ್ತೆವೆ ಎಂದು ಹೇಳಿಕೊಂಡು ಅವೈಜ್ಞಾನಿಕ ಕಾಮಗಾರಿ ನಡೆಸಿ ಕೊಟಿ ಕೋಟಿ ಲೂಟಿ ಮಾಡಿದ್ದಲ್ಲದೆ ಅಮಾಯಯಕ ಜನಸಾಮಾನ್ಯರನ್ನು ಬಲಿಬಡೆದುಕೊಂಡಿದೆ ಈಗಾಗಲೆ ಮಾನಗೇಡಿ ಐ ಆರ್ ಬಿ ಕಂಪನಿ ನಡೆಸಿರುವ ಅವೈಜ್ಞಾನಿಕ ಕಾಮಗಾರಿಯ ಕಾರಣ ರಸ್ತೆ ಅಪಘಾತದಲ್ಲಿ ಅನೇಕ ಅಮಾಯಕ ಜೀವಗಳು ತಮ್ಮ ಅಮೂಲ್ಯವಾದ ಜೀವವನ್ನೆ ಕಳೆದುಕೊಂಡಿದೆ ಅನೇಕ ಕುಟುಂಬಗಳು ತಮ್ಮ ಮಗನನ್ನೊ ಮಗಳನ್ನೊ ಅಪ್ಪನನ್ನೊ ಅಮ್ಮನನ್ನೊ ಸಹೊದರ ಸಹೋದರಿಯರನ್ನೊ ಕಳೆದುಕೊಂಡು ಕಣ್ಣಿರಿನಲ್ಲಿ ಕೈತೋಳೆಯುತ್ತಿದೆ ಆದರು ಕೂಡ ಈ ಐ ಆರ್ ಬಿ ಕಂಪನಿಯ ಹೊಟ್ಟೆ ತುಂಬಿದಂತೆ ಕಾಣುತ್ತಿಲ್ಲ ತಮ್ಮ ಅವೈಜ್ಞಾನಿಕ ಕಾಮಗಾರಿಯನ್ನು ಮುಂದುವರಿಸುವುದರ ಮೂಲಕ ಮಾರಣ ಹೊಮವನ್ನು ಮುಂದುವರಿಸುತ್ತಲೆ ಬಂದಿದೆ ಈಗ ಅಂಕೋಲದ ಶಿರೂರಿನಲ್ಲೂ ಕೂಡ ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ ಘಟನಾ ಸ್ಥಳದಕ್ಕೆ ಸಚಿವ ಮಂಕಾಳು ವೈದ್ಯರು ಬೇಟಿ ನೀಡಿದ ಸಂದರ್ಬದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತ ನಾನು ಒಂದು ವರ್ಷದಿಂದ ಈ ಐಆರ್ಬಿ ಕಂಪನಿ ಕಳಪೆ ಕಾಮಗಾರಿಯವಿರುದ್ದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೆಳುತ್ತಲೆ ಬಂದಿದ್ದೆನೆ ಇಂದು ಇಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದರೆ ಅದಕ್ಕೆ ನೇರಹೊಣೆ ಇದೆ ಐ ಆರ್ ಬಿ ಕಂಪನಿ ನಡೆಸುವ ಅವೈಜ್ಞಾನಿಕ ಕಾಮರಾಗಿಯಾಗಿದೆ ಇದಕ್ಕೆ ಐ ಆರ್ ಕಂಪನಿ ಬೇಲೆ ತೆರಬೇಕಾಗಿದೆ ನನ್ನ ಜಿಲ್ಲೆಯ ಜನರಿಗೆ ಮಾಡಿದ ಅನ್ಯಾಯಕ್ಕೆ ಇವರು ಬೇಲೆಯನ್ನು ಕಟ್ಟಲಿದ್ದಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು