ಭಟ್ಕಳ : ನಾಮಧಾರಿ ಕುಲಗುರು ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ 5ನೇ ಚಾತುರ್ಮಾಸ ವೃತಾಚರಣೆಯನ್ನು ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ ನಡೆಸಲು ನಿರ್ಧರಿಸಿದ್ದು, ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚಾತುರ್ಮಾಸ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಹೇಳಿದರು.
ಅವರು ಬುಧವಾರ ಪಟ್ಟಣದ ಆಸರಕೇರಿ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕೇವಲ ನಾಮಧಾರಿ ಮಾತ್ರವಲ್ಲದೇ ಜಿಲ್ಲೆಯ ಹಿಂದೂಳಿದ ಸಮಾಜದ ಮಾರ್ಗದರ್ಶಕರೂ ಆಗಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಜೂ.21 ರಿಂದ ಅ.30ರ ತನಕ ಭಟ್ಕಳದಲ್ಲಿ ಚಾತುರ್ಮಾಸ ವೃತಾಚರಣೆ ನಡೆಸುತ್ತೀರುವುದು ನಮ್ಮೆಲ್ಲರಿಗೆ ಹೆಮ್ಮಯ ವಿಷಯವಾಗಿದೆ. ಜಿಲ್ಲೆಯ ನಾಮಧಾರಿಗಳೂ ಸೇರಿದಂತೆ ಹಿಂದೂಳಿದ ಸಮಾಜದವರು ಗುರುವಿನ ಅನುಗ್ರಹ ಪಡೆಯಲು ಸಿಕ್ಕಂತಹ ಅವಕಾಶವಾಗಿದೆ. ಚಾತುರ್ಮಾಸ ಕಾರ್ಯಕ್ರಮವನ್ನು ಭಟ್ಕಳ ಹಾಗೂ ಮಾವಳ್ಳಿ ನಾಮಧಾರಿ ಕೂಟಗಳ ಸಹಯೋಗದಲ್ಲಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರತಿ ದಿವಸ ಗುರುಗಳ ಪಾದಪೂಜೆ, ಸತ್ಸಂಗ, ಅನ್ನಸಂತರ್ಪಣೆ ಹಾಗೂ ರಾತ್ರಿ ಸಾಂಸ್ಕçತೀಕ ಕಾರ್ಯಕ್ರಮಗಳು ನಡೆಯಲಿದೆ ಎಂದರು. ಜೂ.21ರಂದು ಭಟ್ಕಳ ಪಟ್ಟನದ ಆಸರಕೇರಿಯ ವೆಂಕಟ್ರಮಣ ದೇವಸ್ಥಾನದಿಂದ ಶ್ರೀಗಳನ್ನು ಭವ್ಯ ಮರೆವಣಿಗೆಯಲ್ಲಿ ಕರಿಕಲ್ ಧ್ಯಾನಮಂದಿರಕ್ಕೆ ಕರೆದ್ಯೋಯಲಾಗುವುದು. ಅ.30 ರಂದು ಶ್ರೀಗಳ ಚಾತುರ್ಮಾಸ ಸೀಮಾಲ್ಲೋಂಘನಾ ಸಾರದಹೊಳೆಯ ಸಾರದ ನದಿಯ ತಟದಲ್ಲಿ ನಡೆಯಲಿದೆ ಎಂದರು.
ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಮಾತನಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಸಮಸ್ತ ಹಿಂದೂ ಸಮಾಜದವರು ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯವಂತೆ ಕೋರಿದರು. ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ಉತ್ತರ ಕನ್ನಡಜಿಲ್ಲೆಯಲ್ಲಿ ಮೊದಲಬಾರಿಗೆ ಶ್ರೀಗಳು ಚಾತುಮಾರ್ಸ ವೃತಾಚರಣೆ ನಡೆಸಲಿದ್ದು, ಜಿಲ್ಲೆಯ ನಾಮಧಾರಿ ಸಮಾಜದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆಯುವಂತೆ ತಿಳಿಸಿದರು.
ಭಟ್ಕಳ ನಾಮಧಾರಿ ಹೋಬಳಿ ಅಧ್ಯಕ್ಷ ಅರುಣ ನಾಯ್ಕ, ಮಾವಳ್ಳಿ ಹೋಬಳಿ ಅಧ್ಯಕ್ಷ ಆರ್,ಕೆ ನಾಯ್ಕ ಹಾಗೂ ಮಾವಳ್ಳಿ ಹೋಬಳಿ ಮೊಕ್ತೆಸರ ಸುಬ್ರಾಯ ನಾಯ್ಕ ಮಾತನಾಡಿದರು. ಭಟ್ಕಳ ಹಾಗು ಮಾವಳ್ಳಿ ಹೋಬಳಿಯ ನಾಮಧಾರಿ ಪ್ರಮುಖರು ಉಪ