ಮುಖ್ಯಾಧಿಕಾರಿ ಹಾಗು ತಹಶಿಲ್ದಾರರಿಗೆ ಮನವಿ
ಭಟ್ಕಳ ತಾಲೂಕಿನ ಜಾಲಿಪಟ್ಟಣ ಪಂಚಾಯತ್ ತಾಲೂಕಿನ ಕಡವಿನಕಟ್ಟೆ ಕಂಡೆಕೊಡ್ಲು , ವೆಂಕಟಾಪುರ ಪ್ರದೇಶದ ಅಭಿವೃದ್ದಿಯ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳಿಯ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ್ ಹಾಗು ತಾಲೂಕ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು
ಭಟ್ಕಳ ತಾಲೂಕಿನ ಕಡವಿನಕಟ್ಟೆ ವ್ಯಾಪ್ತಿಯ ಕಡವಿನಕಟ್ಟೆ ವಾರ್ಡಿನಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಬೇಸಿಗೆಯಲ್ಲಿ ಅಕ್ಕಪಕ್ಕದ ಜಮೀನಿನ ಮಾಲಿಕರು ತಮಗೆ ಬೇಕಾದ ಸಾಮಗ್ರಿಗಳನ್ನು ಒಯ್ಯಲು ಇದೇ ಹಳ್ಳದಲ್ಲಿ ಮಣ್ಣನ್ನು ತುಂಬಿಕೊಂಡು ರಸ್ತೆ ಮಾಡಿಕೊಂಡು ತಮ್ಮ ಸಾಮಗ್ರಿಗಳನ್ನು ಒಯ್ಯುತ್ತಾರೆ. ಆದರೆ ಮಳೆಗಾಲ ಪ್ರಾರಂಭವಾದ ನಂತರ ಈ ಮಣ್ಣನ್ನು ಅಲ್ಲಿಂದ ತೆಗೆಯದೇ ಹಾಗೇ ಬಿಟ್ಟಿದ್ದು, ಕಳೆದ ವರ್ಷವೂ ಕೂಡ ಇದೇ ರೀತಿ ಮಣ್ಣನ್ನು ಹಾಗೇ ಬಿಟ್ಟಿದ್ದರಿಂದ ಮಳೆಯ ನೀರು ರಭಸಕ್ಕೆ ಅಕ್ಕಪಕ್ಕದ ತಗ್ಗಿನಲ್ಲಿ ಇರುವ ಮನೆಗಳಿಗೆ ನೀರು ಸಹಿತ ಮಣ್ಣು, ಕಲ್ಲುಗಳು ನುಗ್ಗಿ ಲುಕ್ಸಾನು ಉಂಟು ಮಾಡಿರುತ್ತದೆ. ಈ ವರ್ಷವೂ ಕೂಡ ಇದೇ ರೀತಿ ಹಾಕಿರುವ ಮಣ್ಣನ್ನು ಮಳೆಗಾಲದ ಪೂರ್ವದಲ್ಲಿ ಖುಲ್ಲಾಪಡಿಸಿಕೊಡುವಂತೆ ಸಂಬಂಧಪಟ್ಟ ಮುಖ್ಯಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕ ಮಾಡಿ. ತಾವು ಕೂಡ ಖುದ್ದಾಗಿ ಬಂದು ಪರಿಶೀಲನೆ ಮಾಡಿ, ಖುಲ್ಲಾಪಡಿಸಿಕೊಡುತ್ತೇನೆಂದು ಭರವಸೆ ನೀಡಿ ಹೋಗಿದ್ದು ಅಲ್ಲಿಂದ 20 ದಿನಗಳು ಕಳೆದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಹೀಗಾಗಿ ಪುನಃ ತಮ್ಮ ಬಳಿಗೆ ಈ ವಿಷಯವನ್ನು ಗಮನಕ್ಕೆ ತಂದಿರುತ್ತೇನೆ. ತಾವು ಈ ಕುರಿತು ತುರ್ತಾಗಿ ಮಣ್ಣನ್ನು ಖುಲ್ಲಾಪಡಿಸಬೇಕಾಗಿ ಮತ್ತು ಕಡವಿನಕಟ್ಟಿ ವಾರ್ಡಿನ ರಸ್ತೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಹೂಳು, ಕಸಕಡ್ಡಿಗಳು ತುಂಬಿದ್ದು, ಇದನ್ನು ಖುಲ್ಲಾಪಡಿಸುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕಾಗಿ ಈ ಮೂಲಕ ಸಾರ್ವಜನಿಕರ ಪರವಾಗಿ ಒತ್ತಾಯಿಸುತ್ತಿದ್ದೇನೆ.
ಅಲ್ಲದೆ ಕಂಡೆಕೊಡು ಕಡವಿಕಟ್ಟೆ ರಸ್ತೆಯ ಅಕ್ಕ-ಪಕ್ಕದಲ್ಲಿ ಕಾಡು ಮರಗಳು ಒರಗಿ ನಿಂತಿದ್ದು, ಅಲ್ಲದೇ ಈ ಮರಗಳಿಗೆ ತಾಗಿಕೊಂಡು 11 ಕೆ.ವಿ. ಲೈನು ಹಾದು ಹೋಗಿರುತ್ತದೆ ಕಾರಣ ಈ ಮರಗಳು ವಿದ್ಯುತ್ ಲೈನಿಗೆ ತಾಗಿಕೊಂಡಿದ್ದು, ಇತ್ತೀಚಿಗೆ ಬಂದ ಮರ ಬಿದ್ದು, 3 ವಿದ್ಯುತ್ ಕಂಬಗಳು ಮುರಿದು ಹೋದ ಉದಾಹರಣೆ ಇದೆ. ಈ ಘಟನೆಯಿಂದ ಜೀವಹಾನಿಯಾಗದೇ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಜೀವಹಾನಿಯಾಗದೇ ಇರುವ ಹಾಗೇ ಈಗಾಗಲೇ ರಸ್ತೆಗೆ ತೊಂದರೆಯಾಗುವಂತೆ ಮತ್ತು ವಿದ್ಯುತ್ ಲೈನಿಗೆ ತೊಂದರೆಯಾಗದಂತೆ ಒರಗಿರುವ ಕಾಡು ಮರಗಳನ್ನು ಖುಲ್ಲಾಪಡಿಸಿ ಸಾರ್ವಜನಿಕರ ಜೀವ ಕಾಪಾಡಬೇಕೆಂದು ಈ ಮೂಲಕ ಸಾರ್ವಜನಿಕರ ಪರವಾಗಿ ಒತ್ತಾಯಿಸುತ್ತಿದ್ದೇನೆ.
ಗ್ರಾಮ ಪಂಚಾಯತದಿಂದ ಪಟ್ಟಣ ಪಂಚಾಯತ ಆಗಿ ಮೇಲ್ದರ್ಜೆಗೇರಿ 8 ವರ್ಷಗಳು ಕಳೆದರೂ ಕೂಡ ಇವತ್ತಿನವರೆಗೆ ಕಡವಿನಕಟ್ಟೆ ವಾರ್ಡಿಗೆ ಕಸವಿಲೇವಾರಿ ಕುರಿತು ತಮ್ಮ ವಾಹನ ಬರುತ್ತಿಲ್ಲ, ಆದರೆ ಕಡವಿನಕಟ್ಟೆ ವಾರ್ಡಿನ ನಾಗರಿಕರು ತಮ್ಮ ಪಟ್ಟಣ ಪಂಚಾಯತ ತೆರಿಗೆ ಭರಣ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ? ಹೀಗಾಗಿ ತಾವು ತಮ್ಮ ಪಟ್ಟಣ ಪಂಚಾಯತದ ಕಸವಿಲೇವಾರಿ ವಾಹನವನ್ನು ನಮ್ಮ ಕಡವಿನಕಟ್ಟೆ ವಾರ್ಡಿಗೆ ಪ್ರತಿ ನಿತ್ಯ ಕಳಿಸುವ ವ್ಯವಸ್ಥೆ ಮಾಡಬೇಕಾಗಿ ಈ ಮೂಲಕ ಸಾರ್ವಜನಿಕರ ಪರವಾಗಿ ಒತ್ತಾಯಿಸುತ್ತಿದ್ದೆವೆ ಎಂದು ಮನವಿ ನೀಡಿದರು
ಈ ಸಂದರ್ಬದಲ್ಲಿ ವಿನಾಯಕ ನಾಯ್ಕ , ರಮೇಶ ನಾಯ್ಕ ಪರಮೇಶ್ವರ ನಾಯ್ಕ ಪ್ರಮೋದ , ರಾಜು ನಾಯ್ಕ ಚಂದ್ರ ನಾಯ್ಕ ಇನ್ನಿತರರು ಉಪಸ್ಥಿತರಿದ್ದರು