ಹೊಸತನದ ಕಿಡಿ ಹೊತ್ತಿಸಲಾಗಿದೆ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು : ಶಿವಾನಂದ ನಾಯ್ಕ ಹೇಳಿಕೆ
ಭಟ್ಕಳ : ತಾಲೂಕಿನ ಪುರಾತನ ಶಕ್ತಿ ಸ್ಥಳವಾದ ಚೌತನಿ ಕಾಸ್ಮೂಡಿ ಹನುಮಂತ ದೇವಸ್ಥಾನದ ಪುನಂ ಪ್ರತಿಷ್ಟಾಪನೆ ಅಷ್ಟಬಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜ್ರಂಬಣೆಯಿಂದ ಸಂಪನ್ನವಾಯಿತು
ಹೌದು ವಿಕ್ಷಕರೆ ದಿನಾಂಕ 29/02/2024 ರಿಂದ ಪ್ರಾರಂಬವಾದ ಈ ಕಾರ್ಯಕ್ರಮ ದಿನಾಂಕ 03/03/2024 ರಂದು ಮುಕ್ತಾಯವಾಯಿತು ಈ ಸಂದರ್ಬದಲ್ಲಿ ಸಾವಿರಾರು ಭಕ್ತರು ಶ್ರೀ ಕಾಸ್ಮೂಡಿ ಹನುಮಂತ ದೇವರ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀ ದೇವರ ಕ್ರಪೇಗೆ ಪಾತ್ರರಾಗಿ ಕ್ರತಾರ್ಥರಾದರು ಕಾರ್ಯಕ್ರಮದ ಕೊನೆಯ ದಿನವಾದ 03/03/2024 ರಂದು ವಿಧ್ಯಾರ್ಥಿಗಳಿಗಾಗಿ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಶಿಬಿರ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಸಂದರ್ಬದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾನಂದ ನಾಯ್ಕ ಮಾತನಾಡಿ ಇಂದು ವಿಧ್ಯಾರ್ಥಿಗಳಲ್ಲಿ ಸಾದನೆಯ ಕಿಚ್ಚನ್ನು ಹಚ್ಚಲಾಗಿದೆ ಈ ಕಿಚ್ಚು ನಿಮ್ಮ ಇಡಿ ಜೀವನವನ್ನು ರೂಪಿಸುವ ಕಿಚ್ಚಾಗಿರುತ್ತದೆ ಆದರೆ ವಿಧ್ಯಾರ್ಥಿಗಳಾದ ತಾವು ಇದನ್ನು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ಹೇಳಿದರು
ಈ ಸಂದರ್ಬದಲ್ಲಿ ವಿವಿದ ಸಂಪನ್ಮೂಲ ವ್ಯಕ್ತಿಗಳು ವಿಧ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಪರಿಕ್ಷೇಗಳನ್ನು ಯಾವರೀತಿಯಲ್ಲಿ ಎದುರಿಸಬೇಕು ಎನ್ನುವ ಬಗ್ಗೆ ತಿಳಿಸಿಕೊಟ್ಟರು
ಕಾರ್ಯಕ್ರಮವನ್ನು ಅಂಕೋಲಾ ಶ್ರೀ ರಾಮ್ ಸ್ಟಡಿಸ್ ನಿರ್ದೇಶಕರಾದ ಸೂರಜ್ ನಾಯ್ಕ ಉದ್ಗಾಟಿಸಿದರು
ಜಿಲ್ಲಾ ಜಂಟಿ ನಿರ್ದೇಶಕರಾದ ಶ್ರೀ ನಾಗರಾಜ ನಾಯ್ಕ, ಕ್ಷೇತ್ರ ಶಿಕ್ಷಣಾದಿಕಾರಿ ವಿ ಡಿ ಮೊಗೇರ್ , ಎಕ್ಸಪರ್ಟ ಕಾಲೆಜಿನ ವೈಸ್ ಪ್ರಾಂಶುಪಾಲರಾದ ಗುರುದತ್ತ ನಾಯ್ಕ, ಸಿದ್ದಾರ್ಥಕಾಲೆಜಿನ ಪ್ರಾಂಶುಪಾಲರಾದ ಅರ್ಚನಾ ನಾಯ್ಕ ಜನತಾ ಕಾಲೆಜು ಹೆಮ್ಮಾಡಿ ಉಪನ್ಯಾಸಕರಾದ ಉಮೇಶ ನಾಯ್ಕ, ನ್ಯೂ ಇಂಗ್ಲೀಷ್ ಸ್ಕೂಲ್ ಮುಖ್ಯೋಪದ್ಯಾಪಕರಾದ ಗಣಪತಿ ಶಿರೂರ್ ಮಂತಾದವರು ಉಪಸ್ಥಿತರಿದ್ದರು