75 ನೆ ವರ್ಷದ ಅಮೃತ ಮಹೋತ್ಸಕ್ಕೆ ಆಹ್ವಾನ ಇತ್ತ ಶಿಕ್ಷಕ ವೃಂದ ಹಾಗು ಎಸ್ ಡಿ ಎಮ್ ಸಿ ಮತ್ತು ಹಳೆ ವಿಧ್ಯಾರ್ಥಿಗಳ ಸಂಘ
ದಿನಾಂಕ 10/02/2024 ರಂದು ಭಟ್ಕಳ ತಾಲೂಕ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 75 ನೇ ವರ್ಷದ ಅಮೃತ ಮಹೋತ್ಸವ ನಡೆಯಲಿದ್ದು ಹಳೆಯ ವಿಧ್ಯಾರ್ಥಿಗಳು ಹಾಗು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ನಾಯ್ಕ ಹೇಳಿದರು
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಇದೆ ಬರುವ ಶನಿವಾರ ಅಂದರೆ 10/02/2024 ರಂದು ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕೇರಿ ತನ್ನ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೆವೆ ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯರು ವಿವೇಕ ಎನ್ನುವ ಕೊಠಡಿಯನ್ನು ಉದ್ಗಾಟಿಸಲಿದ್ದಾರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ ವಹಿಸಲಿದ್ದಾರೆ , ಅನೇಕ ದಾನಿಗಳು ಶಾಲೆಗಾಗಿ ದಾನಗಳನ್ನು ಮಾಡಿದ್ದು ಅವರೆಲ್ಲರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಲ್ಲಾ ಹಳೆ ವಿದ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕು ಎಂದು ಹೇಳಿದರು
ಈ ಸಂದರ್ಬದಲ್ಲಿ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ನಾಯ್ಕ ಮಾತನಾಡಿ ನಮ್ಮ ಶಾಲೆಯ ಅಭಿವೃದ್ದಿಯೆ ನಮ್ಮ ಗುರಿ 10 ನೇ ತಾರೀಖಿಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲರು ಹಾಜರಿದ್ದು ತನುಮನ ಧನಗಳಿಂದ ಸಹಕರಿಸ ಬೇಕು ಎಂದು ಹೇಳಿದರು
ಶಾಲಾ ಮುಖ್ಯೋಪದ್ಯಾಪಕರಾದ ಎಮ್ ಎನ್ ನಾಯ್ಕ ಅವರು ಮಾತನಾಡಿ ನಮ್ಮ ಶಾಲೆ 75 ವರ್ಷ ಪೂರೈಸಿದೆ ಅದರ ಪ್ರಯುಕ್ತ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಶಾಲಾ ಅಭಿವೃದ್ದಿಗಾಗಿ ಎಲ್ಲರು ಶ್ರಮಿಸುತ್ತಿದ್ದಾರೆ ಸಾರ್ವಜನಿಕರು ಹಾಗು ಹಳೆ ವಿಧ್ಯಾರ್ಥಿಗಳು ನಮಗೆ ಸಹಕಾರ ನೀಡಬೇಕು ಎಂದು ಹೇಳಿದರು
ಈ ಸಂದರ್ಬದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಹಳೆ ವಿಧ್ಯಾರ್ಥಿ ಸಂಘದ ಕಜಾಂಚಿಗಳು ಶಿಕ್ಷಕರು ಆದ ರಮೇಶ ನಾಯ್ಕ, ಕಾರ್ಯದರ್ಶಿ ನಾಗೇಂದ್ರ ನಾಯ್ಕ,
ಸಂಘಟನಾ ಕಾರ್ಯದರ್ಶಿ ದಾಮೋದರ ನಾಯ್ಕ, ಸಂಘದ ಸದಸ್ಯರಾದ ಶ್ರೀದರ ಮೊಗೇರ್, ಮಂಜುನಾಥ ಜಟ್ಟಪ್ಪ ನಾಯ್ಕ , ಮುಂಜುನಾಥ ಕ್ರಷ್ಣಪ್ಪ ನಾಯ್ಕ, ದತ್ತ ನಾಯ್ಕ ಕಲ್ಬಂಡಿ , ಹಾಗು ಇನ್ನಿತರರು ಉಪಸ್ತಿತರಿದ್ದರು