ಭಟ್ಕಳ: ತಾಲೂಕಿನ ಐತಿಹಾಸಿಕ ಸ್ಥಳ ಸೊಡಿಗದ್ದೆ ಮಹಾಸತಿ ಅಮ್ಮನವರ ದೇವಸ್ಥಾನದ ಜಾತ್ರೆಯಲ್ಲಿ ಸಚಿವ ಮಂಕಾಳು ವೈದ್ಯ ಪಾಲ್ಗೋಂಡು ಶ್ರೀ ದೇವಿಯ ಕ್ರಪೆಗೆ ಪಾತ್ರರಾದರು
ಭಟ್ಕಳ ತಾಲೂಕಿನ ಶಕ್ತಿ ಸ್ಥಳವಾದ ಸೋಡಿಗದ್ದೆ ಮಹಾಸತಿ ಅಮ್ಮನವರ ಜಾತ್ರೆ ಅತಿ ವಿಜ್ರಂಬಣೆಯಿಂದ ನಡೆಯುತ್ತಿದ್ದು ಸಚಿವ ಮಂಕಾಳ ವೈದ್ಯರು ಅಮ್ಮನ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಿ ಶ್ರೀದೇವಿಯ ಕ್ರಪೇಗೆ ಪಾತ್ರರಾದರು
ಈ ಸಂದರ್ಬದಲ್ಲಿ ಅವರು ಮಾತನಾಡುತ್ತ ಇಂದು ಸೋಡಿಗದ್ದೆ ಅಮ್ಮನ ಶಕ್ತಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದ್ದೆನೆ ಇದು ಪುರಾತನ ಶಕ್ತಿ ಸ್ಥಳವಾಗಿದೆ ಮಹಾಸತಿ ಅಮ್ಮ ಭಕ್ತಿಯಿಂದ ಶರಣಾದವರನ್ನು ಅಮ್ಮ ಕೈ ಹಿಡಿದು ಕಾಪಾಡಿದ್ದಾಳೆ ಮಹಾಸತಿ ಸರ್ವರಿಗು ಸದ್ಬುದ್ದಿಯನ್ನು ಕೊಟ್ಟು ಕಾಪಾಡಲಿ ಎಂದು ಹೇಳಿದರು
ಈ ಸಂದರ್ಬದಲ್ಲಿ ದೇವಸ್ಥಾನ ಕಮೀಟಿಯು ಸಚಿವ ಮಂಕಾಳು ವೈದ್ಯರನ್ನು ಸನ್ಮಾನಿಸಿ ಗೌರವಿಸಿತು
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಕಾರ್ಯದರ್ಶಿ ಸುರೇಶ ನಾಯ್ಕ ಹಾಗು ಕಾಂಗ್ರೇಸ್ ಪಕ್ಷದ ಇತರ ಪದಾದಿಕಾರಿಗಳು ಕಾರ್ಯಕರ್ತರು ಹಾಗು ಇನ್ನಿತರರು ಉಪಸ್ಥಿತರಿದ್ದರು .