ಒಳ್ಳೆತನ ಯಾವತ್ತಿದ್ದರು ಗೆಲ್ಲುತ್ತದೆ ಸಚಿವ ಮಂಕಾಳು ವೈದ್ಯ
ಭಟ್ಕಳ ಹೃದಯ ಭಾಗವಾದ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಹತ್ತಿರ ಜನವರಿ 14 ರಂದು ವಿನೂತನವಾಗಿ ನಿರ್ಮಿಸಲಾದ ಸೀತಾರಾಮಸೌದ ವ್ಯಾಪಾರಿ ಮಳಿಗೆ ಉದ್ಘಾಟನೆಗೊಂಡಿತು.
ಉಜಿರೆಯ ಶ್ರೀ ರಾಮಕ್ಷೇತ್ರದ ಪರಪೂಜ್ಯ ಗುರುಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಗಳು ಸೀತಾರಾಮಸೌದ ವ್ಯಾಪಾರಿ ಮಳಿಗೆ ಲೊಕಾರ್ಪಣೆ ಮಾಡಿದರು
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಚಿವ ಮಂಕಾಳ ವೈದ್ಯರು ಮಾತನಾಡಿ ಇಂದು ಸೀತಾರಾಮ ಸೌದ ಲೋಕಾರ್ಪಣೆಗೊಂಡಿದೆ ಇದು ಸಂತೋಷದ ಸಂಗತಿ ಈ ಮಳಿಗೆಯಲ್ಲಿ ವ್ಯವಹಾರವನ್ನು ಮಾಡುವ ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಬ್ರಮ್ಹಾನಂದ ಸರಸ್ವತಿ ಸ್ವಾಮಿಜಿಗಳು ಉದ್ಯಮಿ ವಿಠ್ಠಲ್ ನಾಯ್ಕ ರಾಮನ ಪರಮಭಕ್ತರಾಗಿದ್ದು ಶ್ರೀ ರಾಮನ ಹೆಸರಿನಲ್ಲಿ ವ್ಯಾಪಾರಿ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಅವರ ಶ್ರಮ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಯಾಸಿನ್ ಹಸ್ಕೇರಿ, ಉದ್ಯಮಿ ಈರಪ್ಪ ಗರ್ಡಿಕರ, ಕೆಎಸ್ ಆರ್ ಟಿ ಸಿ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ.ಎಚ್. ಮತ್ತು ವ್ಯಾಪಾರಿ ಮಳಿಗೆ ಮಾಲಕ ವಿಠ್ಠಲ್ ನಾಯ್ಕ ಅವರ ಕುಟುಂಬ ವರ್ಗದ ಸಹಿತ ಹಿತೈಸಿಗಳು ಹಾಜರಿದ್ದು ಶುಭ ಕೋರಿದರು.