ನಾಯಕರುಗಳು ಭಟ್ಕಳದ ಹೆಸರನ್ನು ಹೇಳಿಕೊಂಡು ಅಧಿಕಾರ ಹಿಡಿದರೆ ಹೊರತು ಅವರ ಅಭಿವೃದ್ದಿ ಕಾರ್ಯ ಮಾತ್ರ ಶೂನ್ಯ
ಜಿಲ್ಲೆಯಲ್ಲಿ ಅನಂತ ಮೂರ್ತಿ ಹೆಗಡೆಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರ ಆಗ್ರಹ
ಭಟ್ಕಳ: ಮುಂಬರುವ ಕೆಂದ್ರದ ಚುನಾವಣೆಗೆ ಜಿಲ್ಲೆಯಲ್ಲಿ ಈ ಭಾರಿ ಹೊಸಬರಿಗೆ ಅವಕಾಶವನ್ನು ನೀಡಬೇಕು ಅನಂತ ಮೂರ್ತಿ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ಕಾರ್ಯಕರ್ತರಾದ ನಾವು ಬೆಂಬಲಿಸುತ್ತೆವೆ ಎಂದು ಬಿಜೆಪಿ ಕಾರ್ಯಕರ್ತ ವಿವೇಕ ನಾಯ್ಕ ಹೇಳಿದರು
ಅವರು ಭಟ್ಕಳದ ಖಾಸಗಿ ಹೊಟೆಲ್ ಒಂದರಲ್ಲಿ ಕರೆದ ಪತ್ರಿಕಾಗೊಷ್ಟಿಯೊಂದರಲ್ಲಿ ಮಾತನಾಡುತ್ತ ಜಿಲ್ಲೆ ಅಭಿವೃದ್ದಿ ಶೂನ್ಯವಾಗಿದ್ದು ಹಿಂದೂತ್ವದ ಅಡಿಯಲ್ಲಿ ಕಾರ್ಯಕರ್ತರಾದ ನಾವು ಯಾವಾಗಲು ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೆವೆ ಆದರೆ ನಮ್ಮ ಜಿಲ್ಲೆ ಅಭಿವೃದ್ದಿ ಶೂನ್ಯವಾಗಿದ್ದು ಯುವಕರಿಗೆ ಯುವಕ ಯುವತಿಯರು ಉದ್ಯೋಗದ ಕೊರತೆಯನ್ನು ಅನುಭವಿಸುತ್ತಿದ್ದಾರೆ . ಭಟ್ಕಳದ ಹೆಸರನ್ನು ಹೇಳಿಕೊಂಡು ಎಲ್ಲಾ ನಾಯಕರು ಅಧಿಕಾರವನ್ನು ಹಿಡಿದಿದ್ದಾರೆ ಆದರೆ ಅವರು ಭಟ್ಕಳಕ್ಕೆ ಕೊಟ್ಟ ಕೊಡುಗೆ ಶೂನ್ಯವಾಗಿರುತ್ತದೆ ಚುನಾವಣೆ ಬಂದಾಗ ಕೆಲವು ನಾಯಕರಿಗೆ ಭಟ್ಕಳ ಮತ್ತು ಉತ್ತರಕನ್ನಡ ಜಿಲ್ಲೆಯ ನೆನಪಾಗುತ್ತದೆ ಹಿಂದೆ ಚುನಾವಣೆ ಸಂದರ್ಬದಲ್ಲಿ ಉತ್ತರ ಕನ್ನಡದಲ್ಲಿ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್ ಮಾಡಿಕೊಡುವುದಾಗಿ ಆಶ್ವಾಸನೆ ಕೊಟ್ಟುಹೊದರೆ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಲಿಲ್ಲ ಕಾರಣ ಈ ಬಾರಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶವನ್ನು ನೀಡಬೇಕು ಜಿಲ್ಲೆಯ ಅನಂತ ಮೂರ್ತಿ ಅವರಿಗೆ ಈ ಬಾರಿ ಟಿಕೆಟ್ ಅನ್ನು ನೀಡಬೇಕು ಅವರು ಜಿಲ್ಲೆಯಲ್ಲಿನ ಟಿಕೆಟ್ ಆಕಾಕ್ಷಿಗಳ ಸಾಲಿನಲ್ಲಿ ಮುಂಚುಣಿಯಲ್ಲಿದ್ದಾರೆ ಆದ್ದರಿಂದ ಈ ಬಾರಿ ಟಿಕೆಟ್ ಅನಂತ ಮೂರ್ತಿ ಹೆಗಡೆಯವರಿಗೆ ನೀಡಬೇಕು ಎಂದು ಆಗ್ರಹಿಸಿದರು .
ಒಂದು ಭಾರಿ ಬಿಜೆಪಿ ಅನಂತಮೂರ್ತಿ ಹೆಗಡೆ ಅವರಿಗೆ ಟಿಕೆಟ್ ನೀಡದೆ ಅವರು ಸ್ವತಂತ್ರವಾಗಿ ನಿಂತಲ್ಲಿ ತಾವು ಅವರನ್ನು ಬೆಂಬಲಿಸುತ್ತರೋ ಎಂಬ ಪತ್ರಕರ್ತರ ಪ್ರಶ್ನೇಗೆ ಇಲ್ಲಾ ಅವರು ಬಿಜೆಪಿ ಇಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ದಿಸಿದರೆ ಮಾತ್ರ ನಾವು ಅವರನ್ನು ಬೆಂಬಲಿಸುತ್ತೆವೆ ಇಲ್ಲವಾದಲ್ಲಿ ಬೆಂಬಲಿಸಲಾರೆವು ಎಂದು ಹೇಳಿದರು
ಈ ಸಂದರ್ಬದಲ್ಲಿ ಕಾರ್ಯಕರ್ತರಾದ ಪಾಂಡು ನಾಯ್ಕ ಶ್ರೀದರ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು