ಭಟ್ಕಳದಲ್ಲಿ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ

ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ ಸಚಿವ ಮಂಕಾಳ ವೈದ್ಯ

ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ಹಾಗೂ ಯಿನ್ ಯಾಂಗ್ ಇಂಟರ್ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ ಇಂಡಿಯಾ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 7 ರಂದು ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿ ನಡಯಲಿದೆ ಎಂದು ಇನ್ ಯ್ಯಾಂಗ್ ಇಂಟರ್ನ್ಯಾಷನಲ್ ಮಾರ್ಷಲ್ ಆರ್ಟ್ಸ್ ನ ಸದಸ್ಯರಾದ ನಾಗರಾಜ ದೇವಾಡಿಗ ತಿಳಿಸಿದ್ದಾರೆ.

ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾವಿನಕಟ್ಟೆಯ ಮಂಜುನಾಥ ರಾಯಲ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುವ ಕರಾಟೆ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 800 ಕ್ಕೂ ಹೆಚ್ಚು ಸ್ಪರ್ಧಾಳುಗಳು ಆಗಮಿಸುತ್ತಿದ್ದು. ಹುಡುಗರು ಮತ್ತು ಹುಡುಗಿಯರ ವಿಭಾಗದಲ್ಲಿ ವಿದ್ಯಾರ್ಥಿಗಳ ಎತ್ತರ, ತೂಕ, ಹೊಂದಿರುವ ಬೆಲ್ಟ್ ಆಧರಿಸಿ ಪಂದ್ಯಾಟವನ್ನು ನಡೆಸಲಾಗುತ್ತದೆ. ಗೆದ್ದ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಪಿ ಹಾಗೂ ಗೌರವ ಮೊತ್ತವನ್ನು ನೀಡಲಾಗುತ್ತದೆ. ಅಂದು ಕಾರ್ಯಕ್ರಮದ ಉದ್ಘಾಟಕರಾಗಿ ಸಚಿವರಾದ ಮಂಕಾಳ ವೈದ್ಯ ಆಗಮಿಸಲಿದ್ದು ಎಲ್ ಐ ಸಿ ಭಟ್ಕಳ ಶಾಖೆಯ ಶಾಖಾಧಿಕಾರಿಯಾದ ಗುರುದಾಸ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬುಡೊಕಾನ್ ಕರಾಟೆ ತರಬೇತಿ ಸಂಸ್ಥೆಯ ತರಬೇತುದಾರರಾದ ಪ್ರವೀಣ, ಶೋಟೋಕಾನ ಕರಾಟೆ ತರಬೇತಿ ಸಂಸ್ಥೆಯ ಸದಸ್ಯ ಅಶೋಕ ನಾರಯಣ ನಾಯ್ಕ, ಶೋಟೋಕಾನ್ ಕರಾಟೆ ತರಬೇತಿ ಸಂಸ್ಥೆ ಭಟ್ಕಳದ ಕಾರ್ಯದರ್ಶಿ ವೆಂಕಟೇಶ, ಈಶ್ವರ ನಾಯ್ಕ ಮತ್ತಿತರರು ಹಾಜರಿದ್ದರು.

WhatsApp
Facebook
Telegram
error: Content is protected !!
Scroll to Top