ಉತ್ತರ ಕನ್ನಡ ಪ್ರಸಿದ್ದ ಜಾತ್ರೆ ಸೋಡಿಗದ್ದೆ ಜಾತ್ರೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ

ಜಾತ್ರಾ ಪ್ರಯುಕ್ತ ನಡೆಯಲಿರುವ ಬಹಿರಂಗ ಅಂಗಡಿ ಮಳಿಗೆ ಹರಾಜಿನಲ್ಲಿ ಬಾಗವಹಿಸುವಂತೆ ಕಮಿಟಿ ವತಿಯಿಂದ ಕರೆ

ಭಟ್ಕಳ ತಾಲೂಕಿನ ಪ್ರಸಿದ್ದ ಜಾತ್ರೆ ಸೋಡಿಗದ್ದೆ ಮಹಾಸತಿ ಅಮ್ಮನ ಜಾತ್ರೆ ಇದೆ ಬರುವ ಜನವರಿ 23ರ ರಿಂದ 31ರ ವರೆಗೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಡಳಿತ ಕಮಿಟಿ ಅಧ್ಯಕ್ಷ ಭಾಸ್ಕರ್ ನಾಯ್ಕ ಹೇಳಿದರು

ತಾಲೂಕಿನ ಖಾಸಗಿ ಹೋಟೆಲ್ ಒಂದರಲ್ಲಿ ಸೋಡಿಗದ್ದೆ ಮಹಾಸತಿ ಅಮ್ಮನವರ ಜಾತ್ರಾ ಮಹೋತ್ಸವದ ಕುರಿತು ಕರೆದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದೆ ಬರುವ ಜನವರಿ 23 ರಿಂದ 31 ರ ವರೆಗೆ ಸೊಡಿಗದ್ದೆ ಜಾತ್ರೆ ನಡೆಯಲಿದೆ ಜಾತ್ರ ಪೂರ್ವದಲ್ಲಿ ದಿನಾಂಕ 09/01/24 ರಂದು ಜಾತ್ರಾ ಪ್ರಯುಕ್ತ ನಡೆಯಲಿರುವ ಅಂಗಡಿ ಮಳಿಗೆಗಳ ಬಹಿರಂಗ ಹರಾಜಿನಲ್ಲಿ ಸಾರ್ವಜನಿಕರು ಬಾಗವಹಿಸಬೇಕು ಹಾಗೆ 23 ರಂದು ಹಾಲು ಹಬ್ಬ 24 ಕ್ಕೆ ಗೆಂಡ ಸೇವೆ ನಡೆಯಲಿದೆ 26 ಮತ್ತು 27 ಕ್ಕೆ ತುಲಾಬಾರ ಸೇವೆ ನಡೆಯಲಿದೆ ಸರ್ವ ಭಕ್ತಾಧಿಗಳಿ ದೇವಿಯ ಜಾತ್ರೆಯಲ್ಲಿ ಬಾಗವಹಿಸಿ ದೇವಿಯ ಕ್ರಪೇಗೆ ಪಾತ್ರರಾಗಬೇಕು ಎಂದು ಕೇಳಿಕೊಂಡರು.

ಈ ಸಂದರ್ಬದಲ್ಲಿ ಕಮಿಟಿಯ ವಿವಿದ ಪದಾದಿಕಾರಿಗಳು ಹಬ್ಬದ ಬಗ್ಗೆ ವಿವರವನ್ನು ನೀಡಿದರು.

ಸುದ್ದಿ ಗೋಷ್ಟಿ ಯಲ್ಲಿ ಉಪಾಧ್ಯಕ್ಷ ಲಕ್ಷ್ಮಿನಾರಾಯಣ, ಕಾರ್ಯದರ್ಶಿ ರಮೇಶ ದೇವಾಡಿಗ, ಕಜಾಂಚಿ ದೇವಾನಂದ, ಸದಸ್ಯರಾದ ನಾಗರಾಜ ನಾಯ್ಕ ತಿಮ್ಮಪ್ಪ ನಾಯ್ಕ ಲೋಹಿತ ನಾಯ್ಕ, ಮಾದೇವ ನಾಯ್ಕ ಚೋಳರಾಜ ಮೊಗೇರ್ ರಾಜೇಶ ಮೊಗೇರ್ ದೇವಿದಾಸ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top