ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮರ್ಪಣೆ ಹಾಗು ರಾಜ್ಯ ಮಟ್ಟದ ಕಲಾತಂಡದ ಆರ್ಕೆಸ್ಟ್ರಾ ಹಾಗು ಡಾನ್ಸ ಕಾರ್ಯಕ್ರಮಕ್ಕೆ ಕ್ಷಣಗಣನೆ

ಕಾರ್ಯಕ್ರಮಕ್ಕೆ ಶುಭಕೋರಿದ ಸಚಿವ ಮಂಕಾಳು ವೈದ್ಯ

ಭಟ್ಕಳ: ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮರ್ಪಣಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಗಣ್ಯಾತಿಗಣ್ಯರು ಹಾಜರಿದ್ದ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಚಿವ ಮಂಕಾಳು ವೈದ್ಯರು ಕರೆ ನೀಡಿದರು

ಹೌದು ವೀಕ್ಷಕರೆ ಭಟ್ಕಳ ತಾಲೂಕಿನಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿ ಕಾರ್ಯಕ್ರಮದ ನಿದಿ ಸಮರ್ಪಣಾ ಕಾರ್ಯಕ್ರಮದ ಪ್ರಯುಕ್ತ ರಾಜ್ಯ ಮಟ್ಟದ ಕಲಾತಂಡದ ಆರ್ಕೆಸ್ಟ್ರಾ ಹಾಗು ಡಾನ್ಸ ಕಾರ್ಯಕ್ರಮ ನಾಳೆ ಅಂದರೆ ಶನಿವಾರ ಸಂಜೆ 5 30 ರ. ಸುಮಾರಿಗೆ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಉದ್ಗಾಟಿಸಲಿದ್ದು ಪತ್ರಕರ್ತರ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗು ಗಣ್ಯಾತಿಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಸಹಾಯ ಹಸ್ತವನ್ನು ಚಾಚಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕು ಎಂದು ಸಚಿವ ಮಂಕಾಳು ವೈದ್ಯರು ಹೇಳಿದರು

ಕಾರ್ಯಕ್ರಮದ ಬಗ್ಗೆ ಖ್ಯಾತ ಕವಿಗಳು ಬರಹಗಾರರು ಸಾಹಿತಿಗಳು ಆದ ಜಮಿರುಲ್ಲಾ ಷರೀಪ್ ಮಾತನಾಡಿ ಈ ಪತ್ರಕರ್ತರ ಕಾರ್ಯಕ್ರಮ ಒಂದು ಅಭೂತಪೂರ್ವವಾದ ಕಾರ್ಯಕ್ರಮವಾಗಿದ್ದು ಸಮಾಜದ ಅಂಕುಡೊಂಕನ್ನು ತಿದ್ದುವ ಪತ್ರಕರ್ತರು ಸಮಾಜದಲ್ಲಿ ಕ್ಷೇಮದಿಂದ ಅಭಿವೃದ್ದಿಯನ್ನು ಹೊಂದುವುದು ಅತಿ ಮುಖ್ಯವಾದದ್ದು ಇಂತಹ ಕಾರ್ಯಕ್ರಮಕ್ಕೆ ಎಲ್ಲರು ಸಹಕಾರವನ್ನು ನೀಡುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು

ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರು ಪಧಾಧಿಕಾರಿಗಳು ಸರ್ವ ಸದಸ್ಯರು ನಾಳೆ ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ

WhatsApp
Facebook
Telegram
error: Content is protected !!
Scroll to Top