ದಶಕಗಳ ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಶಾಶ್ವತ ಪರಿಹಾರ

ಭಟ್ಕಳ ತಾಲೂಕಿನ ಮಂಕಿಯಲ್ಲಿ ಎಂಡೋಸಲ್ಫಾನ್ ಪೀಡಿತರ ಆಸ್ಪತ್ರೆ ನಿರ್ಮಾಣವಾಗಲಿದೆ ಃ ಸಚಿವ ಮಂಕಾಳ ವೈದ್ಯ ಹೇಳಿಕೆ

, ಭಟ್ಕಳ: ಎಂಡೋಸಲ್ಫಾನ್ ಪೀಡಿತರಿಗೆ ಆರೋಗ್ಯ ಸೇವೆ ಒದಗಿಸಲು ಭಟ್ಕಳ-ಹೊನ್ನಾವರ ಮದ್ಯದ ಪ್ರದೇಶವಾದ ಮಂಕಿಯಲ್ಲಿ ಸರಕಾರದ ವತಿಯಿಂದ 15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಅವರು ತಾಲೂಕಾ ಆಸ್ಪತ್ರೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಎಂಡೋಸಲ್ಫಾನ್ ಪೀಡಿತರ ಗುರುತಿಸುವಿಕೆ ಮತ್ತು ಅವರಿಗೆ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಶಾಸಕನಿದ್ದಾಗ ಎಂಡೋಸಲ್ಫಾನ್ ಪೀಡಿತರ ಸಮೀಕ್ಷೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 1452 ಜನರನ್ನು ಅಂದು ಗುರುತಿಸಲಾಗಿದ್ದು ಅವರಲ್ಲಿ 768 ಜನರು ಭಟ್ಕಳ ತಾಲೂಕಿನಲ್ಲಿಯೇ ಇದ್ದರು. ಎಂಡೋಸಲ್ಫಾನ್ ಪೀಡಿತರಿಗೆ ಮಾಸಿಕ ರೂ. 1200 ಹಾಗೂ ರೂ. 4000 ಪರಿಹಾರ, ಜೊತೆಗೆ ಉಚಿತ ಔಷಧಿ, ವಿಕಲಚೇತನರು ಜೊತೆಗೆ ಓರ್ವರಿಗೆ ಉಚಿತ ಪ್ರಯಾಣ ಎಲ್ಲ ಸೌಲಭ್ಯ ನೀಡುವುದರೊಂದಿಗೆ ಬೆಳಕೆಯಲ್ಲಿ ಹಗಲು ಆರೈಕೆ ಕೇಂದ್ರವನ್ನು ತೆರೆಯಲು ಯೋಜಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮತ್ತೆ ಅವರ ಯೋಗಕ್ಷೇಮ ವಿಚಾರಿಸಲು ನಾನೇ ಬರಬೇಕಾಯಿತು. ಎಂಡೋಸಲ್ಫಾನ್

ಪೀಡಿತರನ್ನು ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ ಎಂದ ಅವರು, ಅವರ ಕಷ್ಟ, ಅವರ ತಂದೆ ತಾಯಿಯವರ ಕಷ್ಟವನ್ನು ಅರಿತೇ ಮಂಕಿಯಲ್ಲಿ ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಹೇಳಿದರು.

ತಾಲೂಕು, ಜಿಲ್ಲೆ, ರಾಜ್ಯದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ಸರಕಾರದಿಂದ ಸೂಕ್ತ ಸೌಲಭ್ಯ, ಶಿಕ್ಷಣ ಮತ್ತು ಚಿಕಿತ್ಸೆ ದೊರಕಿಸಿಕೊಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಎಂಡೋಸಲ್ಫಾನ್ ಜಿಲ್ಲಾ ಮೇಲ್ವಿಚಾರಣಾ ಅಧಿಕಾರಿ ಡಾ. ಸತೀಶ ಶೇಟ್ ಎಂಡೋ ಸಲ್ವಾನ್ ಸಿಂಪರಣೆ, ಕಾಯಿಲೆ, ಸಮೀಕ್ಷೆ, ಪರಿಹಾರೋಪಾಯಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್, ತಹಸೀಲ್ದಾರ ತಿಪ್ಪೇಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಉಪಸ್ಥಿತರಿದ್ದರು. 2.8. వి.డా ಮೊಗೇರ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಂಡೋಸಲ್ಫಾನ್ ಪೀಡಿತರಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಯಿತು.

WhatsApp
Facebook
Telegram
error: Content is protected !!
Scroll to Top