ಸಾರ್ವಜನಿಕರಿಂದ ಡಾ: ಬಾಲಚಂದ್ರ ಮೆಸ್ತಾ ಅವರ ನಿಸ್ವಾರ್ಥ ಸೇವೆಯ ಗುಣಗಾನ
ಮುಂದಿನ ಬಾರಿ ನಾವು ರಾಜ್ಯದಲ್ಲಿ ಮೊದಲ ಸ್ಥಾನವನ್ನು ಪಡೆಯುವ ಗುರಿ ಹೊಂದಿದ್ದೆವೆ : ಡಾ ಬಾಲಚಂದ್ರ ಮೆಸ್ತಾ
ಡಾ : ಬಾಲಚಂದ್ರ ಮೆಸ್ತ ಅವರ ಕಠಿಣ ಪರಿಶ್ರಮ ಸೇವಾ ಮನೊಭಾವದ ಕಾರಣ ಭಟ್ಕಳ ಶಿರಾಲಿ ಆಸ್ಪತ್ರೆಯು ಕಾಯಕಲ್ಪದಲ್ಲಿ ಇಡಿ ರಾಜ್ಯದಲ್ಲೆ ಐದನೆ ಸ್ಥಾನ ಪಡೆದು ಕೊಂಡಿದ್ದು ನ್ಯಾಷನಲ್ ಸರ್ಟಿಪೈಡ್ ಆಗಿದೆ ಎಂದು ತಿಳಿದು ಬಂದಿದ್ದು ಶಿರಾಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾಃ ಮೆಸ್ತಾ ಅವರು ಮಾಧ್ಯಮದವರ ಮುಂದೆ ತಮ್ಮ ಸಂತೋಷವನ್ನು ಹಂಚಿಕೊಂಡರು.
ಡಾ: ಬಾಲಚಂದ್ರ ಮೆಸ್ತಾ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ ನಮ್ಮ ಆಸ್ಪತ್ರೆ ಕಾಯಕಲ್ಪದಲ್ಲಿ ಇಡಿ ರಾಜ್ಯದಲ್ಲೆ ಐದನೆ ಸ್ಥಾನವನ್ನು ಪಡೆದುಕೊಂಡಿದೆ ಹಿಂದೆ ನಾವು 15 ನೆ ಸ್ಥಾನವನ್ನು ಪಡೆದುಕೊಂಡಿದ್ದೆವು ನಂತರ 9 ನೇ ಸ್ಥಾನವನ್ನು ಈ ಭಾರಿ 5 ನೇ ಸ್ಥಾನವನ್ನು ಪಡೆದುಕೊಂಡಿದ್ದೆವೆ ನಮ್ಮ ಪರಿಶ್ರಮ ಸೇವಾ ಮನೊಬಾವನೆ ಹೀಗೆ ಮುಂದುವರಿಯುತ್ತದೆ ಮುಂದಿನ ಭಾರಿ ನಾವು ಇಡಿ ರಾಜ್ಯಕ್ಕೆ ಮೊದಲನೆ ಸ್ಥಾನವನ್ನು ಪಡೆದುಕೊಳ್ಳುವ ವಿಶ್ವಾಸ ನಮಗಿದೆ ನಮ್ಮ ಈ ಸಾದನೆಗೆ ನಮ್ಮ ಸಹೊದ್ಯೊಗಿಗಳು ಸಿಬ್ಬಂದಿವರ್ಗದವರು ಮತ್ತು ಮಾಧ್ಯಮದವರು ಹಾಗೆ ಸಾರ್ಜನಿಕರ ಸಹಕಾರವೆ ಕಾರಣ ನಮ್ಮ ಆಸ್ಪತ್ರೆ ನ್ಯಾಷನಲ್ ಸರ್ಟಿಪೈಡ್ ಆಗಿದ್ದು ಕೆಲವೆ ಕೆಲವು ಆಸ್ಪತ್ರೆಗಳಲ್ಲಿ ನಮ್ಮ ಆಸ್ಪತ್ರೆಯು ಒಂದು ಎಂದು ಅವರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು