ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮಿ, ರಾಜ್ಯಸ್ವ ಅಧಿಕಾರಿ ರಾಘವೇಂದ್ರ, V. A ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತ ರಿಗೆ ದೂರು

ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಮಂಗನಸಾಲು ಎಂಬಲ್ಲಿ ಸರ್ಕಾರಿ ಜಾಗ ಒತ್ತುವರಿ ಬಗ್ಗೆ ದೂರು ನೀಡಿದರು ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕುಂದಾಪುರ ತಹಸಿಲ್ದಾರ್ ಶೋಭಾ ಲಕ್ಷ್ಮಿ, ರಾಜ್ಯಸ್ವ ಅಧಿಕಾರಿ ರಾಘವೇಂದ್ರ, V. A ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತ ರಿಗೆ ದೂರು

ಕುಂದಾಪುರ- ನಾನು ಕಿರಣ್ ಪೂಜಾರಿ ವೃತ್ತಿಯಲ್ಲಿ ಪತ್ರಕರ್ತನಾಗಿದ್ದು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಸಾರ್ವಜನಿಕರ ಕರೆ ಮತ್ತು ದೂರಿನ್ವಯ ಮಾನ್ಯ ಜಿಲ್ಲಾಧಿಕಾರಿಯವರ ಗಮನಕ್ಕೆ ಪ್ರಸತ್ತ ಉಳ್ಳೂರು 74, ಹೊಸಂಗಡಿ, ಯಡಮೊಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಮೂರ್ತಿಯವರು, ರಾಜಸ್ವ ಅಧಿಕಾರಿ ವಂಡ್ಸೆ ರಾಘವೇಂದ್ರ ಮತ್ತು ಕುಂದಾಪುರ ತಹಸೀಲ್ದಾರ್ ರಾದ ಶೋಭಾಲಕ್ಷ್ಮೀರವರು ಸಾಕಷ್ಟು ಕಾನೂನೂ ಬಾಹಿರ ಚಟುವಟಿಕೆಯನ್ನು ಮಾಡಿದ್ದು ಅಕ್ರಮ ಸಕ್ರಮ ಮತ್ತು 94ಸಿಯಲ್ಲಿ ಅಕ್ರಮ ಮಂಜೂರಾತಿ ಮಾಡಿರುವ ಕುರಿತು ಹಲವು ದೂರು ನಮಗೆ ಬಂದಿರುತ್ತದೆ. ದೂರಿನ ವಿವರ ಹೀಗಿದೆೆ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಮತಿ ಗುಲಾಬಿ ಶೆಡ್ತಿ ಮತ್ತು ಅವರ ಗಂಡ ಶ್ರೀಧರ ಶೆಟ್ಟಿ ಮದ್ರೋಳಿ ಮಂಗನಸಾಲು ಎಂಬುವರಿಗೆ ಸಿದ್ದಾಪುರ ಗ್ರಾಮದ ಸರಕಾರಿ ಸ್ಥಳದ ಸರ್ವೆ ನಂಬ್ರ 250/1 ರಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಈಗಾಗಲೇ ಎರಡು ಬಾರಿ ನೋಟಿಸು ನೀಡಿದ್ದರೂ ತಮಗೆ ಸಂಬಂಧವೇ ಇಲ್ಲವೆಂದು ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ. ಮೊದಲನೆ ನೋಟಿಸು ದಿನಾಂಕ 24.08.2020 ರಲ್ಲಿ ಶ್ರೀಧರ ಶೆಟ್ಟಿಯವರ ಹೆಂಡತಿ ಗುಲಾಬಿ ಶೆಡ್ತಿಯವರಿಗೆ ನೀಡಿದ್ದು ಕರ್ನಾಟಕ ಗ್ರಾಮ ಸ್ವರಾಜ್ 1993 ರ ಪ್ರಕಾರ ನೋಟಿಸು ನೀಡಿರುತ್ತಾರೆ. ಆದರೂ ಕೂಡಾ ಆ ಕಟ್ಟಡಕ್ಕೆ ಸ್ಟ್ರಾಬ್ ಹಾಕಿರುತ್ತಾರೆ. ಹಾಗೂ ಎರಡನೇ ನೋಟಿಸು ದಿನಾಂಕ 31.12.2022 ರಂದು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ಕಾಯ್ದೆ 1993 ರ ಪ್ರಕರಣ 64(1) ರಂತೆ ಶ್ರೀಧರ ಶೆಟ್ಟಿ ಬಿನ್ ತೇಜಪ್ಪ ಶೆಟ್ಟಿ ( ಗುಲಾಬಿ ಶೆಡ್ತಿ ಇವರ ಗಂಡ) ನಿಗೆ ನೋಟಿಸು ನೀಡಿದ್ದರೂ ಕೂಡಾ ಸರ್ಕಾರಿ ಸರ್ವೆ ನಂಬ್ರ 250/1 ರಲ್ಲಿ ಬೃಹತ ಆಕಾರದ ಸ್ವಾಬಿನಿಂದ ಕಟ್ಟಡ ನಿರ್ಮಿಸುತ್ತಿದ್ದಾರೆ ಯಾವುದೇ ನೋಟಿಸಿಗೂ ಬಗ್ಗದೆ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದಾರೆ.

ಅಲ್ಲದೆ ಈಗಾಗಲೇ ಶ್ರೀಧರ ಶೆಟ್ಟಿ ಮತ್ತು ಅವರ ಹೆಂಡತಿ ಗುಲಾಬಿ ಶೆಡ್ತಿಯವರು 2006-2007 ನೇ ಇಸವಿಯಲ್ಲಿ ಪಟ್ಟಾ ಸ್ಥಳದ ಸರ್ವೆ ನಂಬ್ರ 253/8 ರ ದಾಖಲೆಯನ್ನು ಗ್ರಾಮಪಂಚಾಯತ್‌ಗೆ ನೀಡಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿಕೊಂಡಿದ್ದು ಇವರು ಸಿದ್ದಾಪುರ ಗ್ರಾಮದ ಸರ್ವೆ ನಂಬ್ರ 253/8 ರಲ್ಲಿ ಯಾವುದೇ ಮನೆ ನಿರ್ಮಾಣ ಮಾಡದೆ ಸರಕಾರದ ಹಣ ದುರುಪಯೋಗ ಮತ್ತು ಅದಕ್ಕೆ ನೀಡಿರುವ ಮನೆ ನಂಬ್ರ 2 – 2094 ಯನ್ನು ಸರ್ಕಾರಿ ಸ್ಥಳ 250/1 ರಲ್ಲಿ ಸಿಮೆಂಟಿನ ಶೆಡ್ಡಿನಿಂದ ರಚಿಸಿದ ಶೆಡ್ಡಿಗೆ ಮನೆ ನಂಬ್ರ ಹಾಕಿಕೊಂಡಿದ್ದು ಇವರು ಇದೇ ಮನೆ ನಂಬ್ರವನ್ನು ಇಟ್ಟುಕೊಂಡು 94C ಅಡಿ ಸುಳ್ಳು ಮಾಹಿತಿ ಅರ್ಜಿ ನೀಡಿರುತ್ತಾರೆ. ಅರ್ಜಿ ಸಂಖ್ಯೆ HST/94C/CR/1386/2014 – 2015 ಆಗಿದ್ದು ಇದೇ ರೀತಿ ಸುಳ್ಳು ಮಾಹಿತಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೆ ಇವರ ವಿರುದ್ದ ಈಗಾಗಲೇ ಅನೇಕ ಇಲಾಖೆಗಳಲ್ಲಿ ದೂರು ದಾಖಲಾಗಿದ್ದು ತನಿಖೆ ಹಂತದಲ್ಲಿರುತ್ತದೆ. ಈ ಎಲ್ಲಾ ವಿಚಾರಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಅದರ ಮೇಲೆ ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರು ಮತ್ತೆ ಅಕ್ರಮ ಕಟ್ಟಡದ ಕಾಮಗಾರಿ ಮುಂದುವರಿಸಿದ ಬಗ್ಗೆ ಸಾರ್ವಜನಿಕರ ಮತ್ತು ಗ್ರಾಮ ಪಂಚಾಯತ್ ದೂರು ನೀಡಿದ ಕಾರಣದಿಂದ ಅದೇ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಅಂತಿಮ ನೋಟಿಸು ದಿನಾಂಕ l4/4/2023 ಕ್ಕೆ ಜಾರಿ ಮಾಡಿದ್ದು ಅಲ್ಲಿಯೂ ಕೂಡ ಭೂ ಕಂದಾಯ ಕಾಯ್ದೆ 1964ರ ಕಲಾಂ 192a ಯಂತೆ ತೆರೆವುಗೊಳಿಸುವ ಬಗ್ಗೆ ಆದೇಶ ಮಾಡಿದ್ದು, ಆದರೂ ಯಾವುದೇ ತೆರವು ಕಾರ್ಯ ಆಗಿರುವುದಿಲ್ಲ. ನಂತರ ದಿನಾಂಕ 31/7/ 2023ರ ನಡವಳಿ ಆದೇಶದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವವರಿಗೆ ಪೂರಕವಾಗಿ ಆದೇಶವನ್ನು ತಿರುಚಿರುವುದು ಕಂಡುಬಂದಿರುತ್ತದೆ. ಈ ಆದೇಶದಲ್ಲಿ ಅಧಿಕ್ರಮಣದಾರರು ನಮೂನೆ 57 ಹಾಗೂ 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಆದುದರಿಂದ ಯಥಾ ಸ್ಥಿತಿ ಕಾಪಾಡಲು ಆದೇಶಿಸಿದ್ದಾರೆ.

ಸರಕಾರದ ನಿಯಮಾವಳಿಯಂತೆ ನಮೂನೆ 57ರ ಅರ್ಜಿಯು ಸುಮಾರು 15 ವರ್ಷದ ಹಿಂದಿನಿಂದಲೂ ಆ ಸ್ಥಳದಲ್ಲಿ ಕೃಷಿ ಮಾಡಿರಬೇಕು ಎಂದು ಇರುತ್ತದೆ. ಮತ್ತು 94ಸಿ ಯಲ್ಲಿ 2015ರ ಹಿಂದಿನ ಮನೆ ಆಗಿರಬೇಕು ಎಂದು ನಿಯಮಾವಳಿ ಹೇಳುತ್ತದೆ. ಆದರೆ ಅತಿಕ್ರಮಣದಾರರು ಕಟ್ಟುತ್ತಿರುವ ಕಟ್ಟಡವು 2020ರ ಕಟ್ಟಡವಾಗಿರುತ್ತದೆ. ಅಲ್ಲದೆ ಈತ ಸರಕಾರದ ಬೆಳಕು ಯೋಜನೆ ಅಡಿ ಇದೇ ಕಟ್ಟಡವನ್ನು ಹಟ್ಟಿ ಎಂದು ತೋರಿಸಿ ಸರಕಾರದ ಬೆಳಕು ಯೋಜನೆ ಫಲಾನುಭವಿಯಾಗಿದ್ದಾನೆ. ಆದರೆ ತಾಹಸಿಲ್ದಾರ್ ಶೋಭಾ ಲಕ್ಷ್ಮಿ ಯವರು ಈ ಎಲ್ಲಾ ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಕ್ರಮ ಕಟ್ಟಡ ಕಟ್ಟುತ್ತಿರುವವರ ಜೊತೆಗೆ ಶಾಮಿಲ್ ಆಗಿ, ತಮ್ಮ ಅಧಿಕಾರವನ್ನು ದುರ್ಬಳಕೆಪಡಿಸಿ ಕೊಂಡು ಆದೇಶ ಮಾಡಿರುತ್ತಾರೆ. ಹಾಗೆ ಇದರಲ್ಲಿ R. I ರಾಘವೇಂದ್ರ ಹಾಗೂ V. A ಚಂದ್ರಶೇಖರ್ ಮೂರ್ತಿ ಸುಳ್ಳು ವರದಿ ಮಾಡಿ 30,40,60 ವರ್ಷದಿಂದ ವಾಸವಾಗಿದ್ದರೆ ಎಂದು ವರದಿ ಮಾಡಿ ನಮೂನೆ 57 ಹಾಗೂ 94c ಇದೆ ಎಂದು ಸುಳ್ಳು ವರದಿ ಮಾಡಿರುತ್ತಾರೆ. ಆದುದರಿಂದ ಈ ಕೂಡಲೇ ಇವರೆಲ್ಲ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಅಕ್ರಮ ಕಟ್ಟಡ ತೆರವುಗೊಳಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

WhatsApp
Facebook
Telegram
error: Content is protected !!
Scroll to Top