ಭಟ್ಕಳದಲ್ಲಿ ಯುವಕ ಬಾವಿಗೆ ಹಾರಿ ಸಾವು

ಭಟ್ಕಳ: ಶ್ಯಾಮಿಯಾನ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೊರ್ವ ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಶನಲ್ ಕಾಲನಿಯ ಮನೆಯೊಂದರ ಬಾವಿಯಲ್ಲಿ ಹಾರಿ ಸಾವನ್ನು ಕಂಡುಕೊಂಡಿದ್ದಾನೆ


ಹೊನ್ನಾವರ ತಾಲೂಕಿನ ಮಂಕಿಯ ಹರವಾಸೆ ನಿವಾಸಿ ಈಶ್ವರ ದುರ್ಗಯ್ಯ ನಾಯ್ಕ(೩೫) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನು ಶನಿವಾರ ಮುರ್ಡೇಶ್ವರ ಶ್ಯಾಮಿಯಾನ ಕೆಲಸಕ್ಕೆಂದು ತೆರಳಿ ಮನಗೆ ಮರಳಿಲ್ಲ. ಭಾನುವಾರ ಯಾವುದೊ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ನ್ಯಾಶನಲ್ ಕಾಲನಿಯ ಮನೆಯೊಂದರ ಮುಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ದೇವಿದಾಸ ದುರ್ಗಯ್ಯ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

WhatsApp
Facebook
Telegram
error: Content is protected !!
Scroll to Top