ಬಿಜೆಪಿ ಭಟ್ಕಳ ಮಂಡಳದ ವತಿಯಿಂದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ

ಭಟ್ಕಳ : ತಾಲೂಕಿನ ಬಿಜೆಪಿ ಮಂಡಳದ ವತಿಯಿಂದ ದೇಶದಲ್ಲಿ ಅಮೃತ ಉದ್ಯಾನವನ ನಿರ್ಮಿಸುವ ನಿಟ್ಟಿನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕಿನಾಧ್ಯಂತ ಇರುವ ಹೊರಾಟಗಾರರು ಮತ್ತು ಮಾಜಿ ಸೈನಿಕರ ಮನೆಗಳಿಂದ ಮಣ್ಣನ್ನು ಸಂಗ್ರಹಿಸುವ ಮೂಲಕ ನನ್ನ ಮಣ್ಣು ನನ್ನ ದೇಶ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಬದಲ್ಲಿ ಭಾರತಿಯ ಜನತಾ ಪಾರ್ಟಿಯ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡುತ್ತ ಅಮೃತ ಉದ್ಯಾನವನ ನಿರ್ಮಾಣದ ಹಿನ್ನೆಲೆಯಲ್ಲಿ ನಾವು ಭಟ್ಕಳದಾಧ್ಯಂತ ಎಲ್ಲಾ ಗ್ರಾಮ ಪಂಚಾಯತ್ ಹಾಗು ಬೂತ್ಗಳ ವ್ಯಾಪ್ತಿಯ ಹುತಾತ್ಮರು ಮತ್ತು ಮಾಜಿ ಸೈನಿಕರು ಹೊರಾಟಗಾರರ ಮನೆಗಳಿಂದ ಮಣ್ಣನ್ನು ಸಂಗ್ರಹಿಸಲಾಗುತ್ತದೆ ನಮ್ಮ ಕಾರ್ಯಕರ್ತರ ಸೇವಾ ಮನೊಭಾವದ ಕೆಲಸಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೆವೆ ಎಂದು ಹೇಳಿದರು

ಭಟ್ಕಳ ಮಂಡಳದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡುತ್ತ ಅಮೃತ ಉದ್ಯಾನವನ ನಿರ್ಮಾಣದ ಹಿನ್ನೆಲೆಯಲ್ಲಿ ಪ್ರದಾನ ಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟ ಹಿನ್ನೆಲೆಯಲ್ಲಿ ದೇಶದಾಧ್ಯಂತ ಎಲ್ಲಾ ಭಾಗದಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ಕಳುಹಿಸಲಾಗುತ್ತಿದ್ದೆ ಕಾರಣ ನಮ್ಮ ತಾಲೂಕಿನ ಮೂಲೆ ಮೂಲೆಗಳಿಂದ ಮಣ್ಣನ್ನು ಸಂಗ್ರಹಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಬದಲ್ಲಿ ಹಿಂದೂ ಹೊರಾಟಗಾರರು ಬಿಜೆಪಿ ಮುಖಂಡರು ಆಗಿದ್ದ ದಿವಂಗತ ಡಾ ಯು ಚಿತ್ತರಂಜನ್ ಮತ್ತು ದಿವಂಗತ ತಿಮ್ಮಪ್ಪ ನಾಯ್ಕ ಅವರ ಮನೆಗೆ ತೆರಳಿ ಮಣ್ಣನ್ನು ಸಂಗ್ರಹಿಸಲಾಯಿತು ಕಾರ್ಯಕ್ರದ ರೂಪುರೇಶೆಗಳನ್ನು ಬಿಜೆಪಿ ಯುವಮುಖಂಡರು ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಭಟ್ಕಳ ತಾಲೂಕ ಸಂಚಾಲಕ ಶ್ರೀನಿವಾಸ ನಾಯ್ಕ ಮುಟ್ಟಳ್ಳಿಯವರು ವಹಿಸಿಕೊಂಡಿದ್ದರು ಎಂದು ಸೂತ್ರದ ಮೂಲಕ ತಿಳಿದುಬಂದಿದೆ

ಈ ಸಂದರ್ಬದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತರಾಮ್ ಭಟ್ಕಳ ಮಂಡಳದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ದೈಮನೆ, ಮಾಜಿ ಸೈನಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಶ್ರೀಕಾಂತ ನಾಯ್ಕ ಹಾಗು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top