ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪರಿಸರ ರಕ್ಷಿಸಿ ಹಾಗು ಸ್ವಚ್ಚತಾ ಆಂದೋಲನ ಕಾರ್ಯಕ್ರಮ

ಭಟ್ಕಳ: ತಾಲೂಕಿನಲ್ಲಿ ಭಗವಾನ್ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪರಿಸರ ರಕ್ಷಿಸಿ ಹಾಗು ಸ್ವಚ್ಚತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು .

ಈ ಸಂದರ್ಬದಲ್ಲಿ ಮುಸ್ಲಿಂ ಮುಖಂಡರು ಜೆಡಿಎಸ್ ಮುಖಂಡರು ಆದ ಇನಾಯತುಲ್ಲಾ ಶಾಬಂದ್ರಿ ಮಾತನಾಡುತ್ತ ಪರಿಸರವನ್ನು ರಕ್ಷಿಸಿ ಉಳಿಸಿ ಬೆಳಸಿಕೊಂಡು ಹೊಗಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೊಗಬೇಕಾಗಿರುವುದು ನಮ್ಮ‌ ಕರ್ತವ್ಯ ಪರಿಸರವನ್ನು ಉಳಿಸಿಬೆಳಸಿಕೊಂಡು ಹೊಗೋಣ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂದ್ಯಾ ಭಟ್ಟ ಮಾತನಾಡುತ್ತ ಮಾನವ ಕುಲ ಪರಿಸರವನ್ನು ಹಾಳುಮಾಡುತ್ತಲೆ ಬಂದಿದ್ದು ಇತ್ತಿಚೆಗೆ ಪರಿಸರ ಇದಕ್ಕೆ ಉತ್ತರವನ್ನು ಕೊಡಲು ಪ್ರಾರಂಬಿಸಿದೆ ಉತ್ತಮ ಉದಾಹರಣೆ ಎಂದರೆ ಕೊರೊನಾ ಮಹಾಮಾರಿ ಮನುಷ್ಯ ಇನ್ನಾದರು ಎಚ್ಚೆತ್ತುಕೊಂಡು ಮುಂದುವರಿಯ ಬೇಕಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಕಾರ್ಯಕ್ರಮದ ರೂವಾರಿಗಳು ಭಗವಾನ ನಿತ್ಯಾನಂದ ಶಕ್ತಿಪಾತ ಯೋಗ ಟ್ರಸ್ಟ್ ಪಾಂಡು ನಾಯ್ಕ ಬೆಳ್ಕೆ ಮಾತನಾಡುತ್ತ ನಾವು ನಮ್ಮನ್ನು ಸಮಾಜಕ್ಕೆ ತೆರೆದುಕೊಳ್ಳಬೇಕಾಗಿದೆ ಸಮಾಜ ಸೇವೆಯ ಕಡೆ ಮುಖ ಮಾಡಬೇಕಾಗಿದೆ ಪರಿಸರ ಸಂರಕ್ಷಣೆಯನ್ನು ಮಾಡಬೇಕಾಗಿದೆ ಈ ಕೆಲಸ ನಮ್ಮ ಟ್ರಷ್ಟ ಮಾಡುತ್ತಲೆ ಬಂದಿದೆ ನಮ್ಮ ಜೊತೆ ಜನಸಾಮಾನ್ಯರು‌ ಕೈಜೊಡಿಸಬೇಕಾಗಿದೆ ಎಂದು ಹೇಳಿದರು

ಈ ಸಂದರ್ಬದಲ್ಲಿ ನಜಿರ್ ಖಾಶಿಂ ರಿಜ್ವಾನ್ ಸಾಬ್ , ಸಬ್ಬಿರ್ ಕುನ್ ನಗಾಡ್ ಮಹಮ್ಮದ್ ನತಾರ್ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top