ಮುರ್ಡೆಶ್ವರ: ಬೀನಾ ವೈದ್ಯ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಶ್ರೀಯುತ ಕೃಷ್ಣಮೂರ್ತಿ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಯೀಂ ಗೋರಿ, ಬೀನಾ ವೈದ್ಯ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಡಾ.ಜಗನ್ನಾಥ ಗೊಂಡ, ದೈಹಿಕ ಶಿಕ್ಷಕರಾದ ಯೋಗೇಶ ತಾಂಡೇಲ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಬಡ್ಡಿ ಅಂಕಣವನ್ನು ಶ್ರೀಯುತ ಕೃಷ್ಣಮೂರ್ತಿ ಶೆಟ್ಟಿಯವರು ಉದ್ಘಾಟಿಸಿದರು. ಪಂದ್ಯಾವಳಿಯನ್ನು ಉದ್ದೇಶಿಸಿ ಶ್ರೀಯುತ ಜಗನ್ನಾತ ಗೊಂಡ ಹಾಗೂ ಶ್ರೀಯುತ ನಯೀಂ ಗೋರಿಯವರು ಮಾತನಾಡಿದರು.
ನಂತರ ನಡೆದ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಗವಹಿಸಿದ್ದು ಅದರಲ್ಲಿ ಸೃಜನ್ ನಾಯ್ಕ ನಾಯಕನಾಗಿರುವ ‘ಸ್ಟ್ರಾಂಗ್ ಬಾಯ್ಸ್ಸ’ ತಂಡ ಪ್ರಥಮ ಸ್ಥಾನ ಗಳಿಸಿದರು, ತನೋಜ್ ಪೂಜಾರಿ ನಾಯಕನಾಗಿರುವ ‘ಸವೆನ್ ಸ್ಟಾರ್’ ತಂಡ ದ್ವಿತೀಯ ಸ್ಥಾನ ಗಳಿಸಿದರು. ಸಂಕೇತ ಪೂಜಾರಿ ನಾಯಕನಾಗಿರುವ ‘ ರೈಸಿಂಗ್ ಸ್ಟಾರ್’ ತಂಡ ತೃತೀಯ ಸ್ಥಾನ ಗಳಿಸಿದರು. ಬೆಸ್ಟ್ ಆಲ್ ರೌಂಡರ್ ಆಗಿ ಮನೀಷ ನಾಯ್ಕ, ಬೆಸ್ಟ ರೈಡರ್ ಆಗಿ ಆರ್ಷ, ಬೆಸ್ಟ ಡಿಫೆಂಡರ್ ಆಗಿ ತಪ್ಝೀಲ್ ಮಿಂಚಿದರು.
ಕಾರ್ಯಕ್ರಮದ ನಿರೂಪಣೆಯನ್ನು ಐಸಿಎಸ್ಇ ವಿಭಾಗದ 9ನೇ ತರಗತಿ ವಿದ್ಯಾರ್ಥಿಗಳಾದ ಕುಮಾರ ಸಂದೇಶ ಶೆಟ್ಟಿ ಹಾಗೂ ಕುಮಾರಿ ದಿವ್ಯಾ ನಡೆಸಿಕೊಟ್ಟರು.