ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಶಾಂತಿ ಸಭೆ

ಭಟ್ಕಳ: ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬದ ಪೋಲಿಸ್ ಇಲಾಖೆಯಿಂದ ಢಿಡೀರನೇ ಆಯೋಜಿಸಲಾದ ಶಾಂತಿ ಸಭೆಯು‌ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ‘ನಮ್ಮ ಇಲಾಖೆಯ ಕಾನೂನು ಹಬ್ಬ ಹರಿದಿನಗಳಿಗೆ ಸಂಬಂದಿಸಿದಂತೆ ಯಾವುದೇ ರೀತಿಯ ಅಡೆ-ತಡೆ ಎಂದುಕೊಳ್ಳದೇ ಅದು ನಿಮ್ಮ ಒಳಿತಿಗೆ ಎಂದು ಭಾವಿಸಿ ಸಂಭ್ರಮದಿಂದ ಇಲಾಖೆಗೆ ಅನೂಕೂಲಕರ ರೀತಿಯಲ್ಲಿ ಆಚರಿಸಬೇಕು. ಈ‌ ಬಾರಿ ಮುಖ್ಯವಾಗಿ ಎಲ್ಲೆಲ್ಲಿ ಸಾರ್ವಜನಿಕ ಗಣೇಶೋತ್ಸವ ಕಮಿಟಿಗಳಿರುವ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕಲೇಬೇಕು. ಅಗತ್ಯ ಬಿದ್ದಲ್ಲಿ ಸಿಸಿಟಿವಿ ಅಳವಡಿಕೆಗೆ ಇಲಾಖೆಯು ಸಹಕರಿಸಲಿದೆ ಎಂದ ಅವರು ಇನ್ನು ಗಣೇಶ ಕುರಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಿಲಿಂಡರ್ ಇಟ್ಟುಕೊಳ್ಳಬೇಕು. ಅದರಂತೆ ಗಣೇಶ ಮಂಡಳಿ ಆಯೋಜಕರು ಅಥವಾ ಅವರ ಪರವಾಗಿ ಓರ್ವರನ್ನು ಆಯಾ ಮಂಡಳಿಗಳಿರುವ ಜಾಗದಲ್ಲಿ ನೇಮಿಸಲೇಬೇಕು. ಇನ್ನು ವಿಸರ್ಜನೆ ಮೆರವಣಿಗೆಯಲ್ಲಿಯೂ ಸಹ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಗಮನ ಹರಿಸಬೇಕು ಎಂದರು.

ಮುಖ್ಯವಾಗಿ ಗಣೇಶ ಕುರಿಸುವ ಜಾಗದಲ್ಲಿ ಹೆಚ್ಚಿನ ಬೆಳಕಿನ ವ್ಯವಸ್ಥೆ ಮಾಡಿಕೊಂಡರೆ ಆಯೋಜಕರಿಗೆ ಹಾಗೂ ಪೋಲೀಸ್ ಇಲಾಖೆಗೆ ಸಹಕಾರ ಆಗಲಿದೆ.
ಇವೆಲ್ಲದಕ್ಕು ಸಾರ್ವಜನಿಕರ ಸಹಕಾರವು ಸಹ ಅತೀ ಮುಖ್ಯ. ಎಲ್ಲಾ ಮಂಡಳಿಯಿಂದ ಸ್ವಯಂ ಸೇವಕರನ್ನು ನೇಮಿಸಿ ಅವರಿಗೆ ಅಗತ್ಯ ಗುರುತಿನ ಚೀಟಿ ನೀಡಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಡಿವೈಎಸ್ಪಿ ಕೆ.ಶ್ರೀಕಾಂತ ತಾಲೂಕಿನಲ್ಲಿ ಯಾವೆಲ್ಲ ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ ಎಂಬ ಬಗ್ಗೆ ಪೋಲೀಸ ಇಲಾಖೆಗೆ ಮಂಡಳಿಯವರು ಮಾಹಿತಿ ನೀಡಬೇಕು. ಅದರಂತೆ ಮೈಕ್ ಅಳವಡಿಕೆಗೆ ಸೇರಿದಂತೆ ಮಂಡಳಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಪೋಲಿಸ್ ಇಲಾಖೆಗೆ ನೀಡಿದ್ದಲ್ಲಿ ಬಂದೋಬಸ್ತಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯ ಮತ್ತು ಇನ್ನಿತರ ಪರವಾನಗಿಗೆ ಮಂಡಳಿಯು ಮುಂಚಿತವಾಗಿ ಸಿದ್ದರಿರಬೇಕು. ಎಲ್ಲಿಯು ಸಹ ಡಿ.ಜೆ. ಅಳವಡಿಕೆಗೆ ಪೋಲಿಸ್ ಇಲಾಖೆಯಿಂದ ಅನುಮತಿಯಿಲ್ಲ. ಅದರಂತೆ ಗಣೇಶ ಕುರಿಸುವ ಜಾಗದಲ್ಲಿ ಅಥವಾ ಬೇರೆ ಹಾಕಲಾಗುವ ಪ್ಲೆಕ್ಸ ಮತ್ತು ಬ್ಯಾನರ್ಸಗಳಿಗೆ ಪುರಸಭೆ ಅಥವಾ ಪಟ್ಟಣ ಪಂಚಾಯತಗಳ ಪರವಾನಿಗೆ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ತಹಸೀಲ್ದಾರ ತಿಪ್ಪೇಸ್ವಾಮಿ ಮಾತನಾಡಿ ‘ ಹಬ್ಬದಿಂದ ಯಾವುದೇ ಕಿರಿಕಿರಿಯಾಗದೇ ಸಂತೋಷದಿಂದ ಮಾಡಬೇಕು. ಸರಕಾರದ ಸುತ್ತೋಲೆಯಂತೆ ಪಿಓಪಿ ಗಣಪತಿಯ ಬಳಕೆ ಹಾಗೂ ಅತೀಯಾಗಿ ಬಣ್ಣ ಬಳಿದ ಗಣೇಶ ಮೂರ್ತಿಯನ್ನು ಮಾರುವುದು ಖರೀದಿಸುವುದು ನಿಷೇದ ಎಂಬ ಕಾನುನು ಸಾರ್ವಜನಿಕರು ಪಾಲಿಸಬೇಕು. ಅದರಂತೆ ಎಲ್ಲಾ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಗಣೇಶ ಕುರಿಸುವ ಬಗ್ಗೆ ಪರವಾನಿಗೆ ಪಡೆಯುವುದು ಕಡ್ಡಾಯ. ಗಣೇಶ ಕುರಿಸುವ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದಲ್ಲಿ ನಮ್ಮ ಪರಿಸರಕ್ಕೆ ಉತ್ತಮ ಎಂದು ಹೇಳಿದರು.

ನಂತರ ಗಣೇಶ ಮಂಡಳಿಯ ಆಯೋಜಕರಾದ ಶಂಕರ ಶೆಟ್ಟಿ ಅವರು ಸಾರ್ವಜನಿಕವಾಗಿ ಸಿಸಿಟಿವಿ ಹಾಕಿರುವುದು ಹಾಳಾಗಿದ್ದು ಹಬ್ಬದೊಳಗೆ ಇವುಗಳನ್ನು ಇಲಾಖೆಯ ಮುತುವರ್ಜಿ ವಹಿಸಿ ಸರಿಪಡಿಸಿದ್ದಲ್ಲಿ ಇಲಾಖೆಗೆ ಅನೂಕೂಲ ಎಂದರು.

ಇನ್ನು ಗಣೇಶೋತ್ಸವ ಮಂಡಳಿಯವರಿಗೆ ತಾತ್ಕಾಲಿಕವಾಗಿ ಗಣೇಶ ಕುರಿಸುವ ಜಾಗದಲ್ಲಿ ಸಿಸಿ ಟಿವಿ ಅಳವಡಿಕೆ ಅಸಾಧ್ಯ ಎಂದ ಅವರು ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ನಿಯಂತ್ರಣದ ಕುರಿತಾಗಿ ತಹಸೀಲ್ದಾರ ಅವರು ಕಡ್ಡಾಯ ಕ್ರಮ ಜರುಗಿಸಿದ್ದಲ್ಲಿ ಮಾತ್ರ ಜನರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಿದ್ದಾರೆ ಎಂದರು. ಇದಕ್ಕೆ ತಹಸೀಲ್ದಾರ ಅವರು ಹಬ್ಬದ ಬಳಿಕ ಪ್ಲಾಸ್ಟಿಕ ಬಳಕೆ ನಿಷೇದದ ನಿಯಂತ್ರಣಕ್ಕೆ ಕ್ರಮಕ್ಕೆ ಸೂಚಿಸಲಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕರ ಸಂಘ ಅಧ್ಯಕ್ಷ ಕ್ರಷ್ಣ ನಾಯ್ಕ ಹಬ್ಬದ ಆಚರಣೆಯ ಕುರಿತಾಗಿ‌ ವಿವರಿಸಿದ ಅವರು ಗಣೇಶ ಮಂಡಳಿ ಅವರಿಗೆ ಪರವಾನಿಗೆ ಹಾಗೂ ಇನ್ನಿತರ ವಿಚಾರದಲ್ಲಿ ಜನರಿಗೆ ಒಂದೇ ಸ್ಥಳದಲ್ಲಿ ಎಲ್ಲು ಆಗುವಂತೆ
ಸಿಂಗಲ್ ವಿಂಡೋ ಪರ್ಮಿಶನ್ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು.

ನಂತರ ಮುಸ್ಲಿಂ ಸಮುದಾಯದ ಮುಖಂಡರಾದ ಮುನೀರಿ ಹಾಗೂ ಇನಾಯತುಲ್ಲಾ ಶಾಬಂದ್ರಿ ಅವರು ಹಬ್ಬದ ಶುಭಾಶಯ ಕೋರಿದರು.

WhatsApp
Facebook
Telegram
error: Content is protected !!
Scroll to Top