ಕಾರ್ಯಕ್ರಮವನ್ನು ಉದ್ಗಾಟಿಸಿದ ಸಚಿವ ಮಂಕಾಳು ವೈದ್ಯ
ಭಟ್ಕಳ : ನನ್ನ ಉದ್ದೇಶ ಬಡ ಮೀನುಗಾರರು ನೆಮ್ಮದಿಯಿಂದ ಬದುಕುವುದು ಕರಾವಳಿ ಕ್ಷೇತ್ರದಲ್ಲಿ ಯಾವೊಬ್ಬ ಮೀನುಗಾರನು ತೊಂದರೆಯನ್ನು ಅನುಭವಿಸಬಾರದು.ಎಂದು ಸಚಿವ ಮಂಕಾಳು ವೈದ್ಯ ರಿಯಾಯಿತಿ ದರದಲ್ಲಿ ಸಾಂಪ್ರದಾಯಿಕ ಮೋಟರಿಕೃತ ಮೀನುಗಾರಿಕೆ ದೋಣಿ ಮಾಲೀಕರಿಗೆ ಕೈಗಾರಿಕೆ ಸೀಮೆಎಣ್ಣೆ ವಿತರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಹೇಳಿದರು
ಅವರು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತ ನಾಲ್ಕು ವರ್ಷಗಳಿಂದ ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ಕನಸಿನ ಮಾತಾಗಿತ್ತು ಮಿನುಗಾರರು ಹೈರಾಣಾಗಿ ಹೊಗಿದ್ದಾರೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಾಲ್ಕೆ ತಿಂಗಳುಗಳಲ್ಲಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ನಾವು ಒದಗಿಸುತ್ತಿದ್ದೇವೆ ನೀವು ನಮಗೆ ಆಶಿರ್ವಾದವನ್ನು ಮಾಡಿದ್ದಿರಿ ನಿಮ್ಮ ಸಹಾಯವನ್ನು ನಾವು ಯಾವತ್ತು ಮರೆಯಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿ ಇನ್ನು ಅನೇಕ ಅಭಿವೃದ್ದಿ ಕಾರ್ಯಗಳನ್ನು ನಾವು ಮಾಡುವವರಿದ್ದೇವೆ ಬಡವರ ಸೇವೆಯೆ ನಮ್ಮ ಗುರಿ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯರಿಗೆ ಮೀನುಗಾರಿಕಾ ಮುಖಂಡರು ಇತರ ಗಣ್ಯರು ಸನ್ಮಾನಿಸಿ ಗೌರವಿಸಿದರು
ವೇದಿಕೆಯಲ್ಲಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು