ಭಟ್ಕಳ ತಾಲೂಕಿನ ಮೂಡಶಿರಾಲಿ ಗ್ರಾಮದ ನಿಸರ್ಗ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮೇಘನಾ ಕಾಮತ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
ಯೋಜನಾಧಿಕಾರಿಗಳಾದ ಗಣೇಶ ನಾಯ್ಕ ಅವರು ಯೋಜನೆಯ ಕಾರ್ಯಕ್ರಮ ಹಾಗೂ ಬೀದಿ ನಾಟಕ ಪ್ರದರ್ಶನದ ಸದುದ್ಧೇಶದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಮ ಸರ್, ಗ್ರಾಮ್ ಪಂಚಾಯತ್ ಸದಸ್ಯರಾದ ಸತೀಶ್ ನಾಯ್ಕ ಉಪಸ್ಥಿತರಿದ್ದರು ಬೈಂದೂರ್ ತಾಲೂಕಿನ ಶ್ರೀ ವಿನಾಯಕ ಕಲಾತಂಡದ ಅಧ್ಯಕ್ಷರಾದ ಶ್ರೀಮತಿ ಚಂದ್ರಮತಿಯವರು ಉಪಸ್ಥಿತರಿದ್ದರು ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ ಇವರು ಕಾರ್ಯಕ್ರಮ ನಿರೂಪಿಸಿದರು ಸೇವಾ ಪ್ರತಿನಿಧಿ ಶ್ರೀಮತಿ ಸವಿತಾ ರವರು ಸ್ವಾಗತಿಸಿದರು. ಸಂಯೋಜಕಿ ಶ್ರೀಮತಿ ಗೀತಾ ರವರು ಕಾರ್ಯಕ್ರಮಕ್ಕೆ ವಂದಿಸಿದರು. (ವಿಷಯ ನೀರು ಉಳಿಸಿ ಜ್ಞಾನವಿಕಾಸ ಯೂಟ್ಯೂಬ್ ಅಭಿಯಾನ.)
ಮಹಿಳಾ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ನೀರು ಉಳಿಸಿ ಯೂಟ್ಯೂಬ್ ಅಭಿಯಾನ ದ ಬಗ್ಗೆ ಪ್ರದರ್ಶನ ಮಾಡಿದರು. ಅಧ್ಯಕ್ಷತೆಯನ್ನು ಸಮಿತಿ ದುರ್ಗಾಪರಮೇಶ್ವರಿ ಅಳ್ವೆ ಕೊಡಿ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ತಿಮ್ಮಪ್ಪ ಹೊನ್ನಿಮನಿಯವರು ವಹಿಸಿದ್ದರು ಉದ್ಘಾಟನೆಯನ್ನು ಮಾರಿಜಾತ್ರಾ ಸಮಿತಿ ಅಧ್ಯಕ್ಷರಾದ ರಾಮ ಮೋಗೆರ ರವರು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಪೂಜ್ಯರ ಕಾರ್ಯವೈಕರಿ ಬಗ್ಗೆ ಶ್ಲಾಘಿಸಿದರು..
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನಧಿಕಾರಿ ವಿನೋದಾ ಬಾಲಚಂದ್ರ ಅವರು ಪ್ರಾಸ್ತವಿಕ ಮಾತನಾಡಿದರು ಸೇವಾ ಪ್ರತಿನಿಧಿ ಶ್ರೀಮತಿ ಜಯ ರವರು ನಿರೂಪಿಸಿದರು ಸೇವಾ ಪ್ರತಿನಿಧಿ ಶ್ರೀಮತಿ ಶ್ವೇತ ರವರು ಸ್ವಾಗತಿಸಿದರು ಬೈಂದೂರ್ ತಾಲೂಕಿನ ವಿನಾಯಕ ಕಲಾತಂಡದವರಿಂದ ನಾಟಕ ಪ್ರದರ್ಶಿಸಲಾಯಿತು.