ನಾಯಕ ಬಿ ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ಸಿದ್ದಾಪುರ: ಈಡಿಗ ನಾಮಧಾರಿ ರಾಷ್ಟ್ರೀಯ ಮಂಡಳಿ ತಾಲೂಕು ಘಟಕದವರು ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.


ನಿರ್ಮಲಾ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಅಧ್ಯಕ್ಷ ರಾಜೇಶ ನಾರಾಯಣ ಕತ್ತಿ ಕೋಲಸಿರ್ಸಿ ಮಾತನಾಡಿ ಹರಿ ಪ್ರಸಾದ್ ಪಕ್ಷ ಕ್ಕಾಗಿ ಹಲವು ದಸಕಗಳಿಂದ ದುಡಿದಿದ್ದಾರೆ, ಅನುಭವ ಇರುವವರು ಇವರಿಗೆ ರಾಜ್ಯ ಸರ್ಕಾರ ದಲ್ಲಿ ಸಚಿವ ಸ್ಥಾನ ನೀಡಬೇಕು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅವರಿಗೆ ಸಚಿವ ಸ್ಥಾನ ದಿಂದ ವಂಚಿಸಿರುವುದು ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ವಾಗಿದೆ ಅದರಲ್ಲೂ ಈಡಿಗ ನಾಮಧಾರಿ ಸಮುದಾಯಕ್ಕೆ ವಂಚಿಸಿದಂತಾಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಎಚ್ಚೇತ್ತುಕೊಂಡು ಅವರಿಗೆ ಸೂಕ್ತ ಸ್ಥಾನ ನೀಡಬೇಕು ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಮಧಾರಿ ಸಮಾಜ ದವರು ತಕ್ಕ ಉತ್ತರ ನೀಡಲಿದ್ದಾರೆ.ಈ ಕುರಿತು ತಕ್ಷಣ ನಿರ್ಧಾರ ಕೈಗೊಳ್ಲದಿದ್ದರೇ ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ ಹಾಗೂ ಪ್ರಣವಾನಂದ ಸ್ವಾಮೀಜಿಗಳವರ ನೇತೃತ್ವದಲ್ಲಿ ಜಿಲ್ಲೆಯ ನಾಮಧಾರಿ ಮುಖಂಡರೆಲ್ಲ ಸೇರಿ ಬೆಂಗಳೂರಿಗೆ ಬಂದು ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿ ಯಲ್ಲಿ ತಾಲೂಕು ಕಾರ್ಯ ದರ್ಶಿ ಬಾಬು ನಾಯ್ಕ ಕಡಕೇರಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಶಿರಳಗಿ, ಯುವ ಘಟಕದ ಅನಿಲ ಕೊಠಾರಿ, ಸದಸ್ಯರಾದ ಪಾಂಡುರಂಗ ಕೋಲಸಿರ್ಸಿ, ರವಿ ಕೊಠಾರಿ, ಮಹಾತ್ಮ ಹೆಗ್ಗೋಡಿಮನೆ ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top