ಶಿಕಾರಿಪುರಲ್ಲಿ 100 ಅಡಿಗಳ ರೈಲ್ವೆ ಜಾಗಕ್ಕೆ 1000 ಅಡಿಗಳಿಗಿಂತ ಹೆಚ್ಚು ಭೂಮಿ ವಶಪಡಿಸಿಕೊಳ್ಳುತ್ತಿರುವುದನ್ನು ವಿರೋದಿಸಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ, ಶಿಕಾರಿಪುರ ಇವರ ನೇತೃತ್ವದಲ್ಲಿ ಅಕ್ರಮ ಅವೈಜ್ಞಾನಿಕ ಯೋಜನೆಗಳ ಭೂಸ್ವಾಧೀನದ ವಿರುದ್ಧ ಶಿಕಾರಿಪುರ ಬಗನಕಟ್ಟೆ ರೈತರು ಮಹಾಸತಿ ವೃತ್ತದಿಂದ ತಾಲ್ಲೂಕು ಕಛೇರಿಯವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು
ಪ್ರತಿಭಟನೆ ನೆಡೆಸಿ ತಾಲ್ಲೂಕು ಕಛೇರಿ ಮುಂಭಾಗ ತಹಶೀಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿ ರವರಿಗೆ ಈ ಯೋಜನೆ ಕೈ ಬಿಡುವಂತೆ ಮನವಿ ಸಲ್ಲಿಸಲಾಯಿತು.ಈ ಪ್ರತಿಭಟನೆಯಲ್ಲಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರು ಡಿ.ಎಸ್ ಈಶ್ವರಪ್ಪ ಹಾಗೂ ಎಸ್.ಪಿ ನಾಗರಾಜ್ ಗೌಡ 2023 ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ರಾಘವೇಂದ್ರ ನಾಯ್ಕ ಹಾಗೂ ಸಾಕಷ್ಟು ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು