ಸಿದ್ದಾಪುರ: ದಿ ತೋಟಗಾರ್ಸ ಕೋ -ಅಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್ (ಉ.ಕ) ಸಿದ್ದಾಪುರ ಶಾಖೆಯ ವಾರ್ಷಿಕ ಸಹಕಾರಿ ಸಭೆ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ಸದಸ್ಯರಾದ ಗಜಾನನ ರಾಮ ಭಟ್ ಹೆಬ್ಕುಳಿ, ತಿಮ್ಮಪ್ಪ ದ್ಯಾವಾ ನಾಯ್ಕ ಹಲ್ಸಗಾರ, ಗಣಪತಿ ಗಣಪತಿ ಹೆಗಡೆ ವರಗದ್ದೆ, ಗಂಗೆ ರಾಮಚಂದ್ರ ಹೆಗಡೆ ವಾಟಗಾರ, ಲಕ್ಷ್ಮೀನಾರಾಯಣ ಇಗ್ಗಪ್ಪ ಹೆಗಡೆ ತಾರಗೋಡ, ಚಂದ್ರಶೇಖರ ಗಂಗಾಧರ ಗೌಡರ ಬಂಧೀಸರ, ಮಹಾಬಲೇಶ್ವರ ಗಣಪತಿ ಹೆಗಡೆ ಸಣ್ಮನೆ, ಸುಬ್ರಾಯ ಶಿವರಾಮ ಭಟ್ಟ ಕುಳಿಬೀಡು, ಕೆರಿಯ ಯಂಕ ಗೌಡ ಶೀಬಳಿ, ಹಾಗೂ ವೆಂಕಟಸುಬ್ಬ ಮಹಾಬಲೇಶ್ವರ ಹೆಗಡೆ ಬಿಜ್ಜಳ, ರವರುಗಳನ್ನು ಸನ್ಮಾನಿಸಲಾಯಿತು.
ಬಿದ್ರಕಾನ, ದೊಡ್ಮನೆ, ಹಾರ್ಸಿಕಟ್ಟಾ, ಲಂಬಾಪುರ, ಶಿರಳಗಿ, ಕ್ಯಾದಗಿ, ಬೇಡ್ಕಣಿ, ಇಟಗಿ, ಬಿಳಗಿ, ಕೋಲಸಿರ್ಸಿ, ಕೋರ್ಲಕೈ, ಹಲಗೇರಿ, ಹೆಮ್ಮನಬೈಲ್, ಸಸರವಳ್ಳಿ, ಹಾಗೂ ನಿಸರಾಣಿ ಸಹಕಾರಿ ಸಂಗದವರಿದೆ ಬಹುಮಾನ ವಿತರಣೆ ನಡೆಯಿತು.
ಸನ್ಮಾನಿತರ ಪರವಾಗಿ ಸುಬ್ರಾಯ ಶಿವರಾಮ ಭಟ್ಟ ಕುಳಿಬೀಡು ಮಾತನಾಡಿದರು.
ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀ ಪಾದ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಇದುವರೆಗೆ ಉತ್ತಮ ಸಹಕಾರ ನೀಡಿದಿರಿ ಮುಂದಯೂ ಒಳ್ಳೆಯ ಸಹಕಾರ ನೀಡಿ ಸಂಘದ ಅಭಿವೃದ್ಧಿ ಗೆ ಕೈಜೋಡಿಸಬೇಕು ಎಂದರು.
ಶಾಖಾ ವ್ಯವಸ್ಥಾಪಕರಾದ ರಾಜೀವ ಹೆಗಡೆ ವರದಿ ವಾಚಿಸಿದರು.
ಶ್ರೀಕಾಂತ ಗಣಪತಿ ಹೆಗಡೆ ನಿರೂಪಿಸಿದರು.
ಬಾಲಚಂದ್ರ ಪ. ಹೆಗಡೆ, ಕೋಡಮೂಡ ವಂದಿಸಿದರು.
,