ಸಿದ್ದಾಪುರ ನಿವೃತ್ತಿ ಹೊಂದಿದ ಶಿಕ್ಷಕಿ ರಾಜಮ್ಮ ನಾಯಕ ರವರ ಬೀಳ್ಕೊಡುಗೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ

ಸಿದ್ದಾಪುರ : ಶಿಕ್ಷಕರಿಗೆ ಸಿಗುವ ಗೌರವ ಬೇರೆ ಯಾವುದೇ ನೌಕರರಿಗೆ ಸಿಗುವುದಿಲ್ಲ ವಿದ್ಯಾರ್ಥಿ ಹಾಗೂ ಪಾಲಕ ಪೋಷಕರಿಂದ ಸಿಗುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕೋಲ್ ಸಿರ್ಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ರಮಣ್ಯ ಹೆಗಡೆ ಅಭಿಪ್ರಾಯಪಟ್ಟರು


ಅವರು ಶುಕ್ರವಾರ ತಾಲೂಕಿನ ಹಲಗಡಿಕೊಪ್ಪದ
ಸ ಹಿ ಪ್ರಾ ಶಾಲೆ ಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ರಾಜಮ್ಮ ನಾಯಕ ರವರ ಬೀಳ್ಕೊಡುಗೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು
ಇದೆ ಶಾಲೆಯಲ್ಲಿ ಸೇವೆ ಆರಂಭಿಸಿ ಮೂವತ್ತು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ರಾಜಮ್ಮ ಎಚ್ ನಾಯಕ ರವರು ವಯೋ ನಿವೃತ್ತಿ ಹೊಂದಿದರು
ಶಿಕ್ಷಕಿ ರಾಜಮ್ಮ ರವರನ್ನು ಡೊಳ್ಳು ಕುಣಿತದ ಮೂಲಕ ಶಾಲೆ ಆವರಣದಿಂದ ಕಾರ್ಯಕ್ರಮಕ್ಕೆ ಸ್ವಾಗತಿಸಿದರು
ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿ ಸಂಘ ರಚಿಸಿ ಈ ಕಾರ್ಯಕ್ರಮವನ್ನು ಸ್ಥಳೀಯರ ಸಹಾಯ ಸಹಕಾರ ಪಡೆದು ಅಚ್ಚುಕಟ್ಟಾಗಿ ಆಯೋಜಿಸಿದ್ದರು
ವಿದ್ಯಾರ್ಥಿಗಳು ಶಾಲಾ ವ್ಯಾಪ್ತಿಯ ಸಾರ್ವಜನಿಕರು ಹಳೆ ವಿದ್ಯಾರ್ಥಿ ಸಂಘದವರು ನಿವೃತ್ತ ಶಿಕ್ಷಕಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹಾಕಿ ಸನ್ಮಾನಿಸಿ ಗೌರವಿಸಿದರು
ಕೋಲ್ ಸಿರ್ಸಿ ಪಂಚಾಯತ್ ಅಧ್ಯಕ್ಷೆ ಮಡಿವಾಳ, ಸದಸ್ಯ ಆನಂದ್ ಮಡಿವಾಳ ಕುಣಜಿ, ಸಿ ಆರ್ ಪಿ ಗಣೇಶ, ಶಾಲಾ ಮುಕ್ಯೋಪಾಧ್ಯಾಯ, ಹಳೆ ವಿದ್ಯಾರ್ಥಿ ಸಂಘದ ಸಂತೋಷ ನಾಯ್ಕ್, ಕೇಶವ ಕುಣಜಿ, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top