ಭಟ್ಕಳ ಜಾಲಿ ಸಾರ್ವಜನಿಕರಿಂದ ಸಚಿವ ಮಂಕಾಳು ವೈದ್ಯರಿಗೆ ಅಭಿನಂದನಾ ಸಮಾರಂಭ

ಜಾಲಿಯ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ: ಸಚಿವ ಮಂಕಾಳು ವೈದ್ಯ

ಭಟ್ಕಳ : ತಾಲೂಕಿನ ಜಾಲಿಯ ಜನತೆ ನನ್ನ ಗೇಲುವಿನಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದಾರೆ ಅವರಿಗೆ ನಾನು ಆಭಾರಿಯಾಗಿದ್ದೆನೆ ನನ್ನ ಗೆಲ್ಲಿಸಿ ಇಂದು ಅಭಿನಂದನಾ ಸಮಾರಂಭದ ಮೂಲಕ ಅಭಿನಂದಿಸಿದ್ದಾರೆ ನಾನು ಇವರ ಅಭಿಮಾನ ಪ್ರೀತಿ ವಿಶ್ವಾಸಕ್ಕೆ ಈ ಜನರ ಸೇವೆಯನ್ನು ಮಾಡುತ್ತೆನೆ ಎಂದು ಹೇಳಿದರು

ಅವರು ತಾಲೂಕಿನ ಜಾಲಿಯ ನಾಮಧಾರಿ ಸಭಾಭವನದಲ್ಲಿ ಊರಿನ ನಾಗರಿಕರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಬದಲ್ಲಿ ಭಾಗವಹಿಸಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತ ಜಾಲಿಯ ನಾಗರಿಕರು ಮೊದಲಿಂದಲೂ ನನ್ನ ಮೇಲೆ ಪ್ರೀತಿ ವಿಶ್ವಾಸವನ್ನು ತೋರಿಸುತ್ತಲೆ ಬಂದಿದ್ದಾರೆ ಚುನಾವಣೆಯಲ್ಲಿ ನನ್ನನ್ನು ಅವರು ಆರಿಸಿದ್ದಾರೆ ಹಾಗೆ ಇಂದು ಅಭಿನಂದನಾ ಸಮಾರಂಬದ ಮೂಲಕ ನನ್ನನ್ನು ಅಭಿನಂದಿಸಿದ್ದಾರೆ ಈ ಜನತೆಯ ಅಭಿಮಾನ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಇಂದು ಇಲ್ಲಿಯ ಸಾರ್ವಜನಿಕರು ಊರಿಗಾಗಿ ಊರ ಅಭಿವೃದ್ದಿಗಾಗಿ ಕೆಲವು ಮನವಿಯನ್ನು ಸಲ್ಲಿಸಿದ್ದಾರೆ ಇವರ ಬೇಡಿಕೆಯನ್ನು ಇಡೆಸಲಾಗುತ್ತದೆ ಊರ ಅಭಿವೃದ್ದಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು

ಸಮಾರಂಭದ ಅಧ್ಯಕ್ಷತೆಯನ್ನು ಪುರಂದರ್‌ ಕೆ ಮೋಗೇರ್ ಅವರು ವಹಿಸಿದರು

ಕಾರ್ಯಕ್ರಮದಲ್ಲಿ ವಕೀಲರಾದ ದತ್ತಾತ್ರೇಯ ಪಿ ಭಟ್ಟ ಅವರು ಸ್ವಾಗತವನ್ನು ಮಾಡಿದರೆ ,ಕಾರ್ಯಕ್ರಮ ನಿರೂಪಣೆ ನಾರಾಯಣ ನಾಯ್ಕ ಮಾಡಿದರೆ ಶಾಂತರಾಮ್‌ ನಾಯ್ಕ ಅವರು ಪ್ರಸ್ತಾವಿಕ ಮಾತನಾಡಿದರು ವಂದನಾರ್ಪಣೆ ಹರೀಶ ನಾಯ್ಕ ಮಾಡಿದರು

ಕಾರ್ಯಕ್ರಮದಲ್ಲಿ ನಾಮದಾರಿ ಸಮಾಜದ ಮುಖಂಡರಾದ ಮಾದೇವ ಡಿ ನಾಯ್ಕ, ಗೊಂಡ ಸಮಾಜದ ಮುಖಂಡರಾದ ಮಾಸ್ತಿಗೊಂಡ, ಗಾಣಿಗ ಸಮಾಜದ ಮುಖಂಡ ಕೇಶವ ಶೇಟ್ಟಿ ,ಮೊಗೇರ್‌ ಸಮಾಜದ ಮುಖಂಡರು ಮಾಸ್ತಪ್ಪ ಮೊಗೇರ್‌ ಜಾಲಿ ಬ್ಯಾಂಕಿ ಅಧ್ಯಕ್ಷ ಮಂಜಪ್ಪ ನಾಯ್ಕ ,ರಾಮರೈ ಕಾಮತ್‌ ಮುಂತಾದವರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top