ವಿಧಾನಸೌಧದಲ್ಲಿ ಸಚಿವ ಮಂಕಾಳ ವೈದ್ಯರ ನೂತನ ಕಚೇರಿ ಉದ್ಘಾಟನೆ

ಭಟ್ಕಳ: ವಿಧಾನ ಸೌಧದ ಎರಡನೇ ಮಹಡಿಯಲ್ಲಿನ 257ಎ ಹಾಗೂ 258ಕೊಠಡಿಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನೂತನ ಕಚೇರಿಯಲ್ಲಿ ಹಿರಿಯ ಧುರೀಣರೂ ಮಾಜಿ ಸಚಿವರೂ ಹಾಗೂ ಹಳಿಯಾಳ ಕ್ಷೇತ್ರದ ಶಾಸಕರಾದ ಆ‌.ವಿ.ದೇಶಪಾಂಡೆಯವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಉದ್ಘಾಟನೆಗೂ ಪೂರ್ವ ಮುರ್ಡೇಶ್ವರದಿಂದ ಬಂದಿದ್ದ ಅರ್ಚಕ ವೇ.ಮೂ. ವಿಶ್ವನಾಥ ಭಟ್ಟ ಅವರು ಲಕ್ಷ್ಮೀ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಮಂಕಾಳ ವೈದ್ಯ ದಂಪತಿಗೆ ಪ್ರಸಾದ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಪತ್ನಿ ಪುಷ್ಪಲತಾ ವೈದ್ಯ, ಭಟ್ಕಳ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ವಾಮನ ನಾಯ್ಕ ಮಂಕಿ, ನಾಗಪ್ಪ ನಾಯ್ಕ ಬೆಳಕೆ,

ಗೋಪಾಲ ನಾಯ್ಕ ಬೈಲೂರು, ಮಂಕಿ ಬ್ಲಾಕ್‌ ಅಧ್ಯಕ್ಷ ಗೋವಿಂದ ನಾಯ್ಕ, ರಾಜು ನಾಯ್ಕ ಮಂಕಿ, ಹಿರಿಯ ಮೀನುಗಾರರ ಮುಖಂಡ ವಸಂತ ಖಾರ್ವಿ, ರತ್ನಾಕರ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top