ಭಟ್ಕಳ: ಅಳ್ವೇಕೊಡಿ ಬಂದರಿನಲ್ಲಿ ಅಳ್ವೇಕೋಡಿ ಮೀನುಗಾರಿಕ ಸಹಕಾರಿ ಸಂಘ ನಿಯಮಿತ ಇದರ ಒಂದು ಕೋಟಿಗೂ ಅಧಿಕ ವೆಚ್ಚದ ಮಂಜುಗಡ್ಡೆ ಸ್ಥಾವರಕ್ಕೆ ಸಚಿವ ಮಂಕಾಳು ವೈದ್ಯರು ಗುದ್ದಲಿ ಪೂಜೆಯನ್ನು ಮಾಡಿದರು
ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ನಾವು ಯಾವತ್ತು ಅಭಿವೃದ್ದಿಯತ್ತ ಗಮನ ಹರಿಸಬೇಕು ಉದ್ಗಾಟನೆ ಸಮಾರಂಬಗಳ ಹೆಸರಲ್ಲಿ ಯಾವತ್ತು ನಾವು ದುಂದು ವೆಚ್ಚವನ್ನು ಮಾಡಬಾರದು ಇಂದು ಮಂಜುಗಡ್ಡೆ ಸ್ಥಾವರಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಇಂತಹ ಅಭಿವೃದ್ದಿ ಕಾರ್ಯಕ್ರಮಗಳು ಇನ್ನು ನಡೆಯಲ್ಲಿದೆ ಬಡವರಿಗೆ ಉಪಯೋಗವಾಗುವಂತ ಕೆಲಸ ಆಗಬೇಕಿದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ವಿಠಲ್ ದೈಮನೆ ಮಾತನಾಡುತ್ತ ಅಭೀವೃದ್ದಿ ಕಾರ್ಯಗಳಿಗೆ ನಮ್ಮ ಸಚಿವರಾದ ಮಂಕಾಳು ವೈದ್ಯರು ಯಾವಗಲು ಬೆನ್ನೆಲುಬಾಗಿ ನಿಂತಿದ್ದರು ಇಂದು ಕೂಡ ತಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯುಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ ಇದು ಕೇವಲ ಇಂದು ಸ್ಯಾಂಪಲ್ ಅಷ್ಟೆ ಇನ್ನು ಅನೇಕ ಅಭಿವೃದ್ದಿ ಕೆಲಸಗಳು ಕ್ಷೇತ್ರದಲ್ಲಿ ನಡೆಯಲಿಕ್ಕಿದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ಬ್ಲಾಕ್ ಕಾಂಗ್ರೇಸ್ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಲ್ಬರ್ಟ ಡಿಕೊಸ್ಟ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು, ರಾಮಾ ಮೊಗೇರ್ ಮತ್ತು ಶಿರಾಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮುಂತಾದವರು ಉಪಸ್ಥಿತರಿದ್ದರು