ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಮಾಜಿ ಶಾಸಕ ಮಂಕಾಳ ವೈದ್ಯ

ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿ ಬಳಗದೊಂದಿಗೆ ನಾಮಪತ್ರ ಸಲ್ಲಿಸಿ ಐತಿಹಾಸಿ ಕ್ಷಣಕ್ಕೆ ಮುನ್ನುಡಿ ಬರೆದ ಮಂಕಾಳು ವೈದ್ಯ

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ 400 ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಗೆಲುವಿಗಾಗಿ ಪೂಜೆ ಸಲ್ಲಿಸಿದ ಮಂಕಾಳ ವೈದ್ಯರ ಅಭಿಮಾನಿ ಬಳಗ

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಂಕಾಳ ವೈದ್ಯರು ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಅಭಿಮಾನಿ ಬಳಗದೊಂದಿಗೆ ತಾಲೂಕ ಸಹಾಯಕ ಆಯುಕ್ತೆ ಮಮತಾ ದೇವಿಯವರಿಗೆ ತಮ್ಮ ನಾಮಪತ್ರ ಸಲ್ಲಿಸಿ ಐತಿಹಾಸಿಕ ಘಟನೆಗೆ ಮುನ್ನುಡಿಯನ್ನು ಬರೆದರು

ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಮಂಕಾಳು ವೈದ್ಯರದ್ದೆ ಚರ್ಚೆ ಅವರ ಅಭಿಮಾನಿ ಬಳಗವು ಇಂದು ಅಂದರೆ ಸೋಮವಾರ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ವಿಧಾನ ಸಭಾ ಕ್ಷೇತ್ರದ ಸುಮಾರು ನಾಲ್ಕು ನೂರು ದೇವಿ ದೇವತೆಗಳ ದೇವಸ್ಥಾನದಲ್ಲಿ ಏಕಕಾಲದಲ್ಲಿ ವೈದ್ಯರ ಗೆಲುವಿಗಾಗಿ ಪ್ರಾರ್ಥಿಸಿ ಪೂಜೆಯನ್ನು ಸಲ್ಲಿಸಲಾಯಿತು. ಇನ್ನೊಂದು ವಿಶೇಷ ಎಂದರೆ ಮಂಕಾಳ ವೈದ್ಯರ ಅಭಿಮಾನಿಗಳು ಹೊರ ಜಿಲ್ಲೆಯಾದ ಮೈಸೂರಿನ ದೇವಸ್ಥಾನದಲ್ಲೂ ವೈದ್ಯರ ಗೆಲುವಿಗಾಗಿ ಪೂಜೆ ಸಲ್ಲಿಸಿದರು ಮಂಕಾಳ ವೈದ್ಯರು ಇಂದು ಬೆಳಿಗ್ಗೆ ಭಟ್ಕಳದ ವಿವಿದ ದೇವಸ್ಥಾಗಳಿಗೆ ಬೇಟಿಕೊಟ್ಟು ಪೂಜೆ ಸಲ್ಲಿಸಿ ತನ್ನ ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳು ಹಾಗು ಕಾರ್ಯಕರ್ತರೊಂದಿಗೆ ಬ್ರಹತ್ ಮೆರವಣಿಗೆಯಲ್ಲಿ ಬಂದು ತಾಲೂಕಿನ ಸಹಾಯಕ ಆಯುಕ್ತರಾದ ಮಮತಾ ದೇವಿ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು

ಈ ಸಂದರ್ಬದಲ್ಲಿ ಅವರು ಮಾತನಾಡಿ ಇಂದು ನಮ್ಮ ಅಭಿಮಾನಿ ಬಳಗದ ಕಾರ್ಯಕರ್ತರ ಅಭಿಮಾನ ಆಶಿರ್ವಾದದಿಂದ ನನ್ನ ಹೃದಯ ತುಂಬಿ ಬಂದಿದೆ ನನಗೆ ಇಷ್ಟು ಸಾಕು ಆ ಭಗವಂತ ನನ್ನ ಜೊತೆಯಲ್ಲಿದ್ದಾನೆ ಎಂದು ತಿಳಿಯಲು ಬೆಳಿಗ್ಗೆ ಇಂದ ನನ್ನ ಕಾರ್ಯಕರ್ತರು ಅಭಿಮಾನಿಗಳು ನನ್ನ ಗೆಲುವಿಗಾಗಿ ವಿವಿದ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ ಇದು ನನ್ನ ಹಿಂದೂತ್ವಕ್ಕೆ ಹಿಡಿದ ಕನ್ನಡಿ ನಾನು ಹಿಂದೂ ವಿರೋದಿ ಎಂದು ಬಣ್ಣಿಸುವವರಿಗೆ ಇದು ಉತ್ತರ ಎಂದು ಹೇಳಿದರು.

WhatsApp
Facebook
Telegram
error: Content is protected !!
Scroll to Top