ಭಟ್ಕಳ ತಾಲೂಕಿನ ಮಾಜಿ ಶಾಸಕರಾದ ಜೇಡಿ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆ ಕಾಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ಈ ಬಗ್ಗೆ ಮಾಜಿ ಶಾಸಕ ಜೇಡಿ ನಾಯ್ಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ನನಗೆ ಪಕ್ಷ ಈಗ ಪ್ರಚಾರ ಸಮಿತಿಯ ಅಧ್ಯಕ್ಷನನ್ನಾಗಿ ನೇಮಕ ಮಾಡಿದೆ ನಾನು ಈ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷ ಕಟ್ಟುವ ಕೆಲಸಕ್ಕೆ ಮುಂದಾಗುತ್ತೆನೆ ಪಕ್ಷ ಯಾವುದೆ ಜವಾಬ್ದಾರಿ ಕೊಟ್ಟರು ನಾನು ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೆನೆ ಎಂದು ಹೇಳಿದರು
ಮಾಜಿ ಶಾಸಕ ಜೇಡಿ ನಾಯ್ಕ ಅವರಿಗೆ ಪಕ್ಷದಿಂದ ದೊರೆತ ಜವಾಬ್ದಾರಿಗೆ ಪಕ್ಷದ ಕಾರ್ಯಕರ್ತರು ಜೆಡಿ ನಾಯ್ಕ ಅಭಿಮಾನಿ ಬಳಗ ಹರ್ಷವನ್ನು ವ್ಯಕ್ತಪಡಿಸಿತು