ಕಾಮಗಾರಿಯನ್ನು ತಡೆದು ಜೆ ಸಿ ಬಿ ವಾಪಾಸ್ ಕಳಿಸಿದ ಸಾರ್ವಜನಿಕರು
ಭಟ್ಕಳ: ಮೂಡ್ ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಸಾರ್ವಜನಿಕರು ಪಟ್ಟುಹಿಡಿದಿದ್ದು ಅಂಡರ್ ಪಾಸ್ ನಿರ್ಮಾಣ ಮಾಡದೆ ಕಾಮಗಾರಿ ನಡೆಸಲು ಬಂದ ಐ ಆರ್ ಬಿ ಕಂಪನಿ ಜೆಸಿಬಿಯನ್ನು ಆಕ್ರೋಶಿತ ಸಾರ್ವಜನಿಕರು ಕಾಮಗಾರಿಯನ್ನು ತಡೆದು ವಾಪಾಸ್ ಕಳಿಸಿರುವ ಘಟನೆ ನಡೆದಿದೆ.
ವರ್ಷಗಳಿಂದ ಸಾರ್ವಜನಿಕರು ಮೂಡ್ ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಿ ಇಲ್ಲವಾದಲ್ಲಿ ರಸ್ತೆ ಅಪಘಾತಗಳು ಉಂಟಾಗಿ ಸಾವು ನೋವುಗಳು ಉಂಟಾಗುತ್ತದೆ ಮೂಡ ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡದೆ ಕಾಮಗಾರಿಯನ್ನು ನಡೆಸಲು ನಾವು ಬಿಡಲಾರೆವು ಆದ್ದರಿಂದ ಅಂಡರ್ ಪಾಸ್ ನಿರ್ಮಿಸುವ ಕಾಮಗಾರಿಯನ್ನು ಪ್ರಾರಂಬಿಸಿ ಎಂದು ಬೇಡಿಕೆಯನ್ನು ಇಡುತ್ತಲೆ ಬರುತ್ತಿದ್ದರು ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಮೂಡ ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಡೆಸಲು ಮುಂದಾಗಲಾಗಿತ್ತು
ಶುಕ್ರವಾರ ಬೆಳಿಗ್ಗೆ ಐ ಆರ್ ಬಿ ಕಂಪನಿ ಅಂಡರ್ ಪಾಸ್ ನಿರ್ಮಾಣ ಮಾಡದೆ ಕಾಮಗಾರಿಗ ಮುಂದಾಗಿದ್ದು ಈ ಸಂದರ್ಬದಲ್ಲಿ ಸಾರ್ವಜನಿಕರು ಆಕ್ರೋಶಿತರಾಗಿದ್ದು ಈ ಸಂದರ್ಬದಲ್ಲಿ ಪೊಲಿಸ್ ಇಲಾಖೆಯ ಮೂಲಕ ಸಾರ್ವಜನಿಕರ ಮನವೊಲಿಸುವ ಪ್ರಯತ್ನ ನಡೆಸಲಾಯಿತು ಇದೆ ಸಂದರ್ಬದಲ್ಲಿ ಜೆ ಸಿ ಬಿ ಮೂಲಕ ಕಾಮಗಾರಿಯನ್ನು ಪ್ರಾರಂಬಿಸಲು ಪ್ರಯತ್ನವನ್ನು ಸಹ ಮಾಡಲಾಯಿತು ಸಾರ್ವಜನಿಕರು ಜೆ ಸಿ ಬಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು . ನಂತರ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಕಾಮಗಾರಿಯನ್ನು ನಿಲ್ಲಿಸಲಾಯಿತು .
ಈ ಸಂದರ್ಬದಲ್ಲಿ ಸಮಸ್ಥ ಸಾರ್ವಜನಿಕರು ಪೊಲಿಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಐ ಆರ್ ಬಿ ಕಂಪನಿಯ ಕೆಲವು ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.