ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ಪಾರಾದ ಟ್ರಕ್ ಚಾಲಕ
ಭಟ್ಕಳ: ತಾಲೂಕಿನ ಕಾಮಾಕ್ಷಿ ಪೇಟ್ರೋಲ್ ಬಂಕ್ ಮುಂಭಾಗದಲ್ಲಿ ತಾಂತ್ರಿಕ ಕಾರಣದಿಂದ ಹೊನ್ನಾವರ ಕಡೆಯಿಂದ ಬೈಂದೂರು ಕಡೆ ಸರಕು ಸಾಗಿಸುತ್ತಿದ್ದ ಲಾರಿಯೊಂದು ಕ್ಷಣಾರ್ದದಲ್ಲಿ ಹೊತ್ತಿ ಉರಿದುಹೊಗಿದ್ದು ಅದ್ರಷ್ಟವಶಾತ್ ಲಾರಿ ಚಾಲಕ ಪಾರಾಗಿರುವ ಘಟನೆ ನಡೆದಿದೆ.
ತಾಲೂಕಿನಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರ ಕಡೆಯಿಂದ ಬೈಂದೂರಿನ ಕಡೆಗೆ ಸರಕು ಸಾಗಿಸುತ್ರಿದ್ದ ಲಾರಿಯಲ್ಲಿ ತಾಂತ್ರಿಕ ದೋಷದ ಕಾರಣ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿರುವುದು ತಿಳಿದು ಬಂದಿದೆ ಲಾರಿ ಚಾಲಕ ಬೆಂಕಿ ಕಾಣಿಸಿಕೊಂಡ ಲಾರಿಯಿಂದ ಇಳಿದು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದು ಇತನ ಪ್ರಯತ್ನಕ್ಕೆ ಪಕ್ಕದಲ್ಲಿರುವ ಕಾಮಾಕ್ಷಿ ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಕೈ ಜೊಡಿಸಿದ್ದರು ನಂತರ ಅಗ್ನಿ ಶಾಮಕದಳದವರು ಬಂದು ಬೆಂಕಿ ನಂದಿಸಿದರು ಅಷ್ಟರಲ್ಲೆ ಸರಕು ಲಾರಿ ಭಾಗಶಃ ಸುಟ್ಟು ಕರಕಲಾಗಿತ್ತು ಎಂದು ತಿಳಿದು ಬಂದಿದೆ.