ಭ್ರಷ್ಟಾಚಾರಕ್ಕೆ ಇನ್ನೋಂದು ಹೆಸರೇ ಕಾಂಗ್ರೆಸ್‌,

ಭಯೋತ್ಪಾದನೆ ಇನ್ನೋಂದು ಮುಖವೇ ಕಾಂಗ್ರೆಸ್‌

ಭಯೋತ್ಪಾದನೆ ಪ್ರೇರಣಾಶಕ್ತಿ ಡಿಕೆ ಶಿವಕುಮಾರ : ರಾಜ್ಯಾಧ್ಯಕ್ಷ ಕಟೀಲ್

ಭಟ್ಕಳ : 2 ದಿನಗಳ ಕಾಲ ನಡೆಯಲಿರುವ ರಾಜ್ಯ ಪಧಾಧಿಕಾರಿಗಳ ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೊಟಾ ಶ್ರೀನಿವಾಸ ಪೂಜಾರಿಯವರು ಈ ಎರಡು ದಿನಗಳ ಕಾಲ ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಹೊಸತನದೊಂದಿಗೆ ಹಾಗೂ ಹೊಸ ಯೋಚನೆಗಳೊಂದಿಗೆ ಸಂಘಟನಾತ್ಮಕವಾದ ಕೆಲಸಗಳ ಮೇಲೆ ಚರ್ಚೆನಡೆಯಲಿದೆ. ಈ ಮುರುಡೇಶ್ವರನ ಸನ್ನಿಧಾನದಲ್ಲಿ ನಡೆಯಲಿರುವ ಈ ಸಭೆ ಕರ್ನಾಟಕದ ರಾಜಕಾರಣದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು .
ಬಿಜೆಪಿ ನಡೆದು ಬಂದ ದಾರಿ ಮತ್ತು ತಲುಪಿರುವ ಗುರಿ, ಜಗತ್ತಿಗೆ ಬಿಜೆಪಿಯ ನಾಯಕತ್ವ ಪ್ರಚಲಿತದಲ್ಲಿ ನಿತ್ಯ ಚರ್ಚೆಯ ವಿಷಯವಾಗಿದೆ. ಅಮೇರಿಕಾ ರಷ್ಯಾಗಳಂತಹ ರಾಷ್ಟ್ರಗಳು ವಿಶ್ವದ ನಾಯಕತ್ವ ವಹಿಸುತ್ತಿದ್ದವು ಪ್ರಸ್ತುತ ಸಮಯದಲ್ಲಿ ಎಂದರೆ ಇಂದು ಭಾರತ ಮತ್ತು ಭಾರತದ ಪ್ರಧಾನಿಗಳು ವಿಶ್ವದ ನಾಯಕತ್ವ ಎಂಬ ಸತ್ಯವನ್ನು ಪ್ರಪಂಚ ಅರ್ಥ ಮಾಡಿಕೊಂಡಿದೆ. ಸಿಧ್ಧರಾಮ್ಯರವರು ಟಿಪ್ಪುವಿನ ಕುರಿತು ನಿನ್ನೆ ಹೇಳಿದ ಹೇಳಿಕೆಯನ್ನು ಪ್ರಾಸ್ತಪಿಸಿದ ಸಚಿವರು ಬ್ರಿಟಿಷರ ವಿರುಧ್ದ ಹೊರಾಟ ಮಾಡಿದ ಕಾರಣಕ್ಕೆ ಟಿಪ್ಪು ಹಿಂದೂಗಳ ನರಮೇಧ ಮಾಡಿದರೂ ಕ್ಷಮಿಸಿಬಹುದಾ ? ಎಂದು ಪ್ರಶ್ನಿಸಿದರು. ಈ ಜಿಲ್ಲೆಯವರಾಗಿ ಸ್ಪೀಕರ್ ಹುದ್ದೆಯಲ್ಲಿರುವ ಕಾಗೇರಿಯವರು ಬೆಳಗಾವಿಯ ಸುವರ್ಣ ಸೌಧದ ವಿಧಾನ ಸಭೆಯ ಆವರಣದಲ್ಲಿ ಮುಖ್ಯಮಂತ್ರಿಯವರೊಡನೆ ವೀರ ಸಾವರ್ಕರ ಅವರ ಫೊಟೊ ಅನಾವರಣ ಗೊಳಿಸಿದ್ದನ್ನು ಪ್ರಶಂಸಿದರು , ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಸಾಧನೆಗಳನ್ನು ತಿಳಿಸಿದರು

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಮುಂದಿನ ಚಿನಾವಣೆಯಲ್ಲಿ 150 ಸ್ಥಾನಗಳ ಗೆಲುವನ್ನು ಪಡಯುವುದೇ ಈ ಸಭೆಯ ಸಂಕಲ್ಪ ಈ ಸಂಕಲ್ಪ ಮುರುಡೇಶ್ವರ ಸನ್ನಿಧಾನದಿಂದ ಆರಂಭವಾಗಿದ್ದು ಗೆಲುವು ನಿಶ್ಚಿತ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ವೀರ ಸಾವರ್ಕರ್‌ ಅಲ್ಲದೇ ಅವರ ಸಂಪೂರ್ಣ ಕುಟುಂಬ ಸ್ವಾತಂತ್ಯ ಚಳುವಳಿಯಲ್ಲಿ ಭಾಗವಹಿತ್ತು. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಜೈಲುವಾಸ ಅನುಭಿಸದವೆಂದರೆ ಅದು ಸಾವರ್ಕರ ಮಾತ್ರ . ವಂಶ ಪಾರಂಪರ್ಯ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಯಾವುದೋ ಒಂದು ಕುಟುಂಬವೇ ಸ್ವಾತಂತ್ರಯ ಎಂದು ಕೊಂಡಿರುವ ಗುಲಾಮಗಿರಿಯ ಪ್ರಾತಿನಿಧ್ಯತೆ ನೀಡುತ್ತಿರುವ ಕಾಂಗ್ರೆಸ್‌ ಗೆ ಭಗತಸಿಂಗ ಸೇರಿದಂತೆ ಬೇರೆ ಅನೇಕ ಸ್ವಾತಂತ್ರಯ ಹೊರಾಟಗಾರರ ಬಗ್ಗೆ ಕಲ್ಪನೆಯೇ ಇಲ್ಲ.

ಆದರೆ 2014 ರ ನಂತರ ಈ ಪರಿಸ್ಥಿತಿ ಬದಲಾಗಿದೆ ಅನೇಕ ಬಲಿದಾನಿಗಳನ್ನು ಸ್ಮರಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಅಂಬೆಡ್ಕರ್‌ ಅವರನ್ನು ಸಂಸತ್ತಿಗೆ ಬರಲು ಬಿಡಲಿಲ್ಲ ಹಾಗೇಯೆ ಮರಣಾ ನಂತರ ಅವರ ಅಂತಿಮ ಸಂಸ್ಕಾರಕ್ಕೂ ದೆಹಲಿಯಲ್ಲಿ ಮಾಡಲು ಅವಕಾಶ ನೀಡದ ರೀತಿಯಲ್ಲಿ ಕಾಂಗ್ರೆಸ್ ವರ್ತಿಸಿತ್ತು.‌ ಸಿದ್ರಾಮಯ್ಯ ಸಾವರ್ಕರ್‌ ಮತ್ತು ಟಿಪ್ಪುವಿನ ಇತಿಹಾಸ ಒದಬೇಕು ಕೇವಲ ವೊಟ್‌ ಬ್ಯಾಂಕ್‌ ಗೊಸ್ಕರ ಸಮಾಜವನ್ನು ರಾಷ್ಟ್ರವನ್ನು ಒಡೆಯುವಂತಹ ಕಾರ್ಯ ಮಾಡಿತ್ತಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರಕ್ಕೆ ಇನ್ನಂದು ಹೆಸರೇ ಕಾಂಗ್ರೆಸ್‌, ಭಯೋತ್ಪಾದನೆ ಇನ್ನೋದು ಮುಖವೇ ಕಾಂಗ್ರೆಸ್‌, ಭಯೋತ್ಪಾದನೆ ಪ್ರೇರಣಾಶಕ್ತಿ ಡಿಕೆ ಶಿವಕುಮಾರ ಕರ್ನಾಟಕದಲ್ಲಿ ಭಯೊತ್ಪಾದಕರಿಗೆ ಬೆಂಗಾವಲು ಡಿಕೆಶಿವಕುಮಾರ ರೌಡಿಜಂ ರಾಜಕಾರಣದಿಂದ ಹೊರಬಂದು ಭಯೋತ್ಪಾದನಾ ರಾಜಕಾರಣ ಪ್ರಾರಂಭ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ಡಿಕೆ ಶಿವಕುಕುಮಾರ ಅವರನ್ನು ಕುಟುಕಿದರು. ಕಾಂಗ್ರೆಸ್ ನ ನೀಚ ಮತ್ತು ಹೀನ ರಾಜಕಾರಣದಿಂದಾಗಿ ಕಾಂಗ್ರೆಸನ್ನು ನ ಇಂದು ತಿರಸ್ಕರಿಸುತ್ತಿದ್ದಾರೆ. ರಾಷ್ಟ ಭಕ್ತರು ಭಯೋತ್ಪಾದಕರನ್ನು ಭೃಷ್ಟರನ್ನು ವಿರೋಧಿಸುತ್ತಾರೊ ಹಾಗೇ ಜನ ಕಾಂಗ್ರಸನ್ನು ಹೊರಗೆ ಇಟ್ಟಿದ್ದಾರೆ. ಅದರ ಪರಿಣಾಮವಾಗಿ ಇಂದು ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ವಾಗುತ್ತಿದೆ ಎಂದರು. ನಾನು ರಾಜ್ಯಾಧ್ಯಕ್ಷನಾದ ಬಳಿಕ ರಾಜ್ಯದ ಪಧಾಧಿಕಾರಿಗಳ ಸಭೆ ಮೂರುವರೇ ವರ್ಷಗಳಲ್ಲಿ ಇದು ಪ್ರಥಮ ಸಭೆ, ಅಚ್ಚುಕಟ್ಟಾಗಿ ಕಾರ್ಯಕ್ರಮದ ಸಿದ್ದತೆಯನ್ನು ನಡೆಸಿ ಸಭೆ ನಡೆಯಲು ಅನೂಕೂಲ ಮಾಡಿಕೊಟ್ಟ ಜಿಲ್ಲೆ ಯಪಧಾಧಿಕಾರಿಗಳಿಗೆ ಹಾಗೂ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕರಿಗೆ ಅಭಿನಂದನೆ
ವ್ಯಕ್ತಪಡಿಸಿದರು.
ವಂದೇಮಾತರಂ ಗೀತೆ ಯೋದಿಗೆ ಕಾರ್ಯಕ್ರಮ ಆರಂಭವಾಯಿತು. ಜಲ್ಲಾ ಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಅಡಿಕೆ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಭಾರತ ಮಾತೆಯ ಚಿತ್ರಪಟಕ್ಕೆ ಪೂಷ್ಪಾರ್ಚನೆ ಮಾಡಲಾಯಿತು ಈ ಸಂಧರ್ಭದಲ್ಲಿ ವೇದಿಕೆ ಮೇಲೆ ಕುಮಟಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ್ ಶೆಟ್ಟಿ , ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ , ಭಟ್ಕಳ ಶಾಸಕ ಸುನಿಲ್‌ ನಾಯ್ಕ ಉತ್ತರ ಕನ್ನಡ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ನಾಯಕ್ ಅವರು ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top