ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಭಟ್ಕಳ ಕಟ್ಟಡ ಕಾರ್ಮಿಕರ ಅವಹಾಲು ಸಲ್ಲಿಕೆ

ನರ ಸತ್ತ ಕಟ್ಟಡ ಕಾರ್ಮಿಕ ಇಲಾಖಾ ಅಧಿಕಾರಿಗಳನ್ನು ನೀವಾದರು ಬಡಿದೆಚ್ಚರಿಸಿ ಕಾರ್ಮಿಕರಿಂದ ವಿನಂತಿ

ಭಟ್ಕಳ ತಾಲೂಕ ಕಟ್ಟಡ ಕಾರ್ಮಿಕರು ತಮ್ಮ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿ ಮನವಿಯನ್ನು ಸಲ್ಲಿಸಿದರು

ಕಾರವಾರದ ಈ ಕಟ್ಟಡ ಕಾರ್ಮಿಕ ಇಲಾಖೆ ನರಸತ್ತ ನಾರಾಯಣನಂತಾಗಿದೆ ಕಾರ್ಮಿಕ ತನ್ನಗೆ ಸಲ್ಲಬೇಕಾದ ಸವಲತ್ತನ್ನು ತನಗೆ ಒದಗಿಸಿ ಎಂದು ಕೇಳುತ್ತಿದ್ದರೆ ಈ ಕಟ್ಟಡ ಕಾರ್ಮಿಕರ ಇಲಾಖೆ ದಿವ್ಯ ನಿದ್ರೆಗೆ ಜಾರಿದೆ ಮದುವೆ ಸಹಾಯ ಧನ ವೃದ್ದಾಪ್ಯ ವೇತನ ವಿಧ್ಯಾರ್ಥಿ ವೇತನ ಕಾರ್ಮಿಕರ ಟೂಲ್ ಕಿಟ್ ಇವುಗಳಲ್ಲಿ ಯಾವುದು ಕಾರ್ಮಿಕನನ್ನು ತಲುಪುತ್ತಿಲ್ಲಾ ಕಾರ್ಮಿಕರ ಈ ಕಷ್ಟದ ಸಮಯದಲ್ಲೂ ಈ ಲಜ್ಜೆಗೇಡಿ ಕೆಲವು ಜನಪ್ರತಿನಿದಿಗಳು ಕಾರ್ಮಿಕರ ಹಕ್ಕಾದ ಟೂಲ್ ಕಿಟ್ ಅನ್ನು ತಾನೆ ತರಿಸಿಕೊಟ್ಟವರಂತೆ ತನ್ನ ಪರಿಶ್ರಮದಿಂದಲೆ ಟೂಲ್ ಕಿಟ್ ಬಂದಿದೆ ಎಂಬಂತೆ ಇಲಾಖೆಯಿಂದ ಕಾರ್ಮಿಕನಿಗೆ ಸಲ್ಲಬೇಕಾದ ಈ ಹಕ್ಕನ್ನು ಕಾರ್ಮಿಕನಿಗೆ ನ್ಯಾಯ ರೀತಿಯಲ್ಲಿ ಸಲ್ಲಬೇಕಾಗಿರುವುದಕ್ಕೆ ತಡೆ ಒಡ್ಡಿ ತನ್ನ ಕಛೇರಿಯಲ್ಲೆ ಯಾವ ಯಾವ ಕಾರ್ಮಿಕನಿಗೆ ಟೂಲ್ ಕಿಟ್ ನೀಡಬೇಕು ಎಂಬ ಲಿಷ್ಟನ್ನು ತಯಾರು ಮಾಡುತ್ತಿದ್ದಾರೆ ಅಲ್ಲದೆ ಇಲಾಖೆಯ ಕಿಟ್ಟನ್ನು ತನ್ನ ಅನುದಾನದಿಂದಲೆ ಬಂದಿದೆ ಎಂಬುವುದನ್ನು ಬಿಂಬಿಸಲು ಕಾರ್ಮಿಕ ಇಲಾಖೆಗೆ ತಾನೆ ಕಿಟ್ಗಳನ್ನು ವಿತರಿಸುತ್ತೆನೆ ಎಂಬ ನಿರ್ದೇಶನ ನಿಡುತ್ತಾರೆ ಎಂಥ ನಾಚಿಕೆಗೇಡಿಗಳು ಸ್ವಾಮಿ ಇದು ಒ಼ಂದು ಕಡೆಯಾದರೆ ಈ ಕಾರ್ಮಿಕ ಇಲಾಖೆಯ ಅಧಿಕಾರಿಗಳೊ ಶುದ್ದ ಬೆಜವಬ್ದಾರಿಗಳು ಎಂದರೆ ತಪ್ಪಿಲ್ಲ ಯಾವುದೆ ಸೌಲಬ್ಯಗಳು ಕಾರ್ಮಿಕನನ್ನು ಇಂದು ತಲುಪುತ್ತಿಲ್ಲಾ ಎಸ್ ಎಸ್ ಪಿ ಪೊರ್ಟಲ್ಗಳಲ್ಲಿ ಹಿಂದೂ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿದರೆ ಮುಸ್ಲಿಂ ಹೆಸರಿನ ಲೆಬರ್ ಕಾರ್ಡ ಹೊಲ್ಡರ್ ಹೆಸರು ಬರುತ್ತದೆ ಈ ಬಗ್ಗೆ ಅಧಿಕಾರಿಗಳಲ್ಲಿ ಕೆಳಿದರೆ ಈ ಅಧಿಕಾರಿ ಮಿಸ್ ಮ್ಯಾಚ್ ಎಂಬ ನೇಪವನ್ನು ಮುಂದಿಟ್ಟುಕೊಂಡು ಸಿ ಎಸ್ ಸಿ ಸೆಂಟರ್ , ಅಥವಾ ಸೆವಾಕೇಂದ್ರದ ಕಡೆ ಕೈ ತೋರಿಸಿ ಕೈತೊಳೆದುಕೊಂಡು ಬೇಜವಬ್ದಾರಿಯ ಪರಮಾವದಿಯನ್ನು ಪ್ರದರ್ಶಿಸುತ್ತಾರೆ.

ಒಟ್ಟಾರೆ ಈ ಕಾರ್ಮಿಕ ಇಲಾಖಾ ಅಧಿಕಾರಿಗಳು ನರಸತ್ತ ನಾರಾಯಣನಂತೆ ವರ್ತಿಸುತ್ತಿದ್ದಾರೆ ಇದರಿಂದ ರೊಸಿಹೊದ ಭಟ್ಕಳ ತಾಲೂಕ ಕಾರ್ಮಿಕರು ಮುಟ್ಟಳಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ಸಮಸ್ಯೆ ಜಿಲ್ಲಾಧಿಕಾರಿಗಳು ಬಗೆಹರಿಸ ಬಹುದು ಎಂಬ ಆಸೆಗಣ್ಣಿನಿಂದ ನಿರಿಕ್ಷಿಸುತ್ತಿದ್ದಾರೆ.

ಒಟ್ಟಾರೆ ಇಡಿ ಜಿಲ್ಲೆಯಲ್ಲಿ ಈ ಕಟ್ಟಡ ಕಾರ್ಮಿಕನ ಗೋಳನ್ನು ಕೇಳುವವರೆ ಇಲ್ಲವಾಗಿದ್ದಾರೆ ಇತನ ಗೋಳು ಅರಣ್ಯ ರೋದನವಾಗಿ ಹೋಗಿದೆ ಈ ರಾಜಕಾರಣಿಗಳು ಮಾತ್ರ ಇವರ ಗೋಳಿನಲ್ಲೆ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳು ಪ್ರಯತ್ನದಲ್ಲಿರುವುದು ಮಾತ್ರ ಶೋಚನಿಯ

WhatsApp
Facebook
Telegram
error: Content is protected !!
Scroll to Top