ಬಿಜೆಪಿ ಸಾವಿನ ಮೇಲೆ ರಾಜಕಾರಣ ಮಾಡುತ್ತಿದೆ ಸುದ್ದಿ ಗೊಷ್ಟಿಯಲ್ಲಿ ಐವಾನ್ ಡಿಸೋಜಾ ಹೇಳಿಕೆ
ಭಟ್ಕಳ ಬಿಜೆಪಿ ಸರಕಾರ ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿದೆ ಉದಾಹರಣೆ ಹೊನ್ನಾವರ ಪರೇಶ ಮೆಸ್ತಾ ಸಾವು ಸಂಬವಿಸಿದಾಗ ಆತನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದೆ ಶಾಸಕ ಸುನಿಲ್ ನಾಯ್ಕ ಪರೇಶ ಮೆಸ್ತಾ ಸಾವಿನ ಪಲಾನುಭವಿ ಯಾಗಿದ್ದಾರೆ ಎಂದು ಐವಾನ್ ಡಿಸೋಜ ಹೇಳಿದರು
ಅವರು ಭಟ್ಕಳದ ಖಾಸಗಿ ಹೊಟೆಲ್ ಒಂದರಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತ ಕಾಂಗ್ರೇಸ್ ಪಕ್ಷ ಬಲಿಷ್ಟವಾಗಿದೆ ನಾವು ವಿರೋದ ಪಕ್ಷದಲ್ಲಿದ್ದು ಸಾಕಷ್ಟು ಕೆಲಸವನ್ನು ಮಾಡಿದ್ದೆವೆ ಪಿ ಎಸ್ ಐ ಪ್ರಕರಣ 40℅ ಕಮಿಷನ್ ಹೊನ್ನಾವರ ಪರೇಶ್ ಮೆಸ್ತಾ ಪ್ರಕರಣ ಹೀಗೆ ಅನೇಕ ಬಿಜೆಪಿ ನಡೆದಿರುವ ಗೊಲ್ ಮಾಲಗಳ ವಿರುದ್ದ ಹೊರಾಟ ನಡೆಸಿದ್ದೆವೆ ನಮ್ಮ ಹೊರಾಟದ ಫಲವೆ ಈಶ್ವರಪ್ಪ ರಾಜಿನಾಮೆಯನ್ನು ಕೊಟ್ಟಿದ್ದಾರೆ. ಬಿಜೆಪಿ ಹೊನ್ನಾವರ ಪರೇಶ ಮೆಸ್ತಾ ಅವರ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದೆ ಪರೇಶ ಮೇಸ್ತಾ ಸಾವಿನ ಲಾಭ ಪಡೆದು ಸುನಿಲ್ ನಾಯ್ಕ ಶಾಸಕರಾಗಿದ್ದಾರೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಪರೇಶ ಮೆಸ್ತಾ ಸಾವಿನ ಫಲಾನುಭವಿ ಎಂದು ಹೇಳಿದರು
ಈ ಸಂದರ್ಬದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಅಲ್ಪ ಸಂಖ್ಯಾತ ಮೊರ್ಚಾದ ಮಾಜಿದ್ ಹಾಗೆ ಪಕ್ಷದ ಮುಖಂಡರಾದ ಸುರೇಶ ನಾಯ್ಕ , ಹಾಗು ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.