ಮಾಹಿತಿ ಹಕ್ಕಿನ ಮೊರೆ ಹೋದ ಗ್ರಾಮಸ್ಥರು
ಮಂಕಿ: ಚಿತ್ತಾರ ಗ್ರಾಮ ಪಂಚಾಯತ್ ವ್ಯಾಪ್ರಿಯಲ್ಲಿ ಭ್ರಷ್ಟಾಚಾರದ ವಾಸನೆ ತಾಲೂಕಿನಾಧ್ಯಂತ ಹರಡತ್ತಿದ್ದು ಸ್ಥಳಿಯ ಗ್ರಾಮಸ್ಥರು ಮಾಹಿತಿ ಹಕ್ಕಿನ ಮೊರೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಮಂಕಿ-ಸಿ ಚಿತ್ತಾರದ ಕೆಲವು ಸ್ಥಳೀಯ ಮುಖಂಡರುಗಳು ಪಂಚಾಯಿತಿ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಾಮಗಾರಿ ಗಳಲ್ಲಿ ಬ್ರಷ್ಟಾಚಾರವೆಸಗಿರುವ ಬಗ್ಗೆ ಹಾಗೂ ಇದೀಗ ಉದ್ಘಾಟನೆಗೊಂಡಿರುವ ಹೊಸ ಕಟ್ಟಡದ ನಿಮಾಣದಲ್ಲು ಭ್ರಷ್ಟಾಚಾರ ವಾಗಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಮಟ್ಟದಲ್ಲಿ ಚಚೆ೯ಗಳು ಜೊರಾಗಿದೆ, ಅದಕ್ಕೆ ಪುಷ್ಟಿ ನೀಡುವಂತೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ಹಕ್ಕಿನ ಮೊರೆ ಹೋಗಿದ್ದು ಕೆಲವು ದಿನಗಳಲ್ಲಿ ದಾಖಲೆಗಳು ಅಜಿ೯ದಾರರ ಕೈ ಸೇರಲಿದ್ದು ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಎನೆಂದು ಗ್ರಾಮಸ್ಥರ ಮುಂದೆ ಬರಲಿದೆ,