ಪರಾರಿಯಾದ ದ್ವಿಚಕ್ರ ವಾಹನಕಳ್ಳ
ಭಟ್ಕಳ:- ನಗರ ಭಾಗಗಳಲ್ಲಿ ಇತ್ತಿಚಿನ ದಿಗಳಲ್ಲಿ ಮೋಟಾರ್ ಬೈಕ್ ಮತ್ತು ಸೈಕಲ್ ಕಳ್ಳತನ ನಡೆಯುತಿದ್ದು ಈ ಸಂಂಬಂಧ ವ್ಯಕ್ತಿಯೋರ್ಯವರು ಕಳೆದು ಕೋಡ ಸೈಕಲ್ ನ ಅವಷೇಶಗಳು ಕೊಟೇಶ್ವರ ನಗರದ ವ್ಯಕ್ತಿಯೊರ್ವನ ಮನೆಯಲ್ಲಿರುವುದನ್ನು ಗಮನಿಸಿ ಶಹರ ಪೋಲಿಸ್ ಠಾಣೆಗೆ ದೂರನ್ನು ಸಲ್ಲಿಸಿದ್ದು ಈ ಸಂಬಂದ ನಿನ್ನೆ ರಾತ್ರಿ ಪೊಲೀಸರ ದಾಳಿ ನಡೆಸಿ 25 ಸೈಕಲ್ 3 ಬೈಕ್ ಜಪ್ತಿ ಮಾಡಿದ ಘಟನೆ ನಡೆದಿದೆ.
ಭಟ್ಕಳ ಪಟ್ಟಣದ ಕೋಟೇಶ್ವರ ರಸ್ತೆಯ ಮಂಜು ಕೊರಗ ಎನ್ನುವ ಆರೋಪಿತನ ಮನೆ ಮೇಲೆ ದಾಳಿ ನಡೆಸಿದ್ದು, ಈತನನ್ನು ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ ಬಟ್ಟೆ ಬದಲಿಸಿ ಬರುವುದಾಗಿ ಹೇಳಿ ಮನೆಯಿಂದ ಆರೋಪಿ ಪರಾರಿಯಾಗಿದ್ದಾನೆ.
ಪೊಲೀಸರು ಆತ ಕದ್ದ ಸೈಕಲ್ ,ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ವಿಷಯ ತಿಳಿಯುತಿದ್ದಂತೆ ಸೈಕಲ್ ,ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ಪರಿಶಿಲಿಸುತ್ತಿದ್ದಾರೆ.