ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲನೆ ಆಗಮಿಸಿದ್ದ ಆರೋಗ್ಯ ಸಚಿವ ಸುದಾಕರ್ ಅವರು ಭಟ್ಕಳ ಹೊನ್ನಾವರ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಯಕ್ಷಗಾನ ವೇಷ ಹಾಕಿ ಸಂಬ್ರಮಿಸಿದ ಘಟನೆ ನಡೆದಿದೆ.
ಯಕ್ಷಗಾನ ವೇಷದಲ್ಲಿ ರಂಗವೇರಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಪರಿಶೀಲನೆ ಮತ್ತು ಇತರ ವಿಚಾರಗಳ ಚರ್ಚೆಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಸುನಿಲ್ ನಾಯ್ಕ ಅವರು ಭಟ್ಕಳದ ಮನೆಯಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಡಾ. ಸುಧಾಕರ್ ಅವರು ಅಲ್ಲಿಗೆ ಭೇಟಿ ನೀಡಿದ್ದರು. ತುಂಬ ಹೊತ್ತು ಕುಳಿತು ಯಕ್ಷಗಾನವನ್ನು ಆಸ್ವಾದಿಸಿದ ಸಚಿವರು ಬಳಿಕ ವೇಷಧಾರಿಯಾಗಲು ಸಮ್ಮತಿಸಿದರು ವೇಷ ಧರಿಸಿ ಕಿರೀಟ ತೊಟ್ಟು ವೇದಿಕೆಗೆ ಬಂದಾಗ ಚಪ್ಪಾಳೆಗಳ ಸುರಿಮಳೆಯೇ ಆಯಿತು.ಇತರ ವೇಷಧಾರಿಗಳು ಕೂಡಾ ಬಂದು ಫೋಟೊ ತೆಗೆಸಿಕೊಂಡರು. ಯಕ್ಷಗಾನ ವೇಷಧಾರಿಯಾದ ಸುಧಾಕರ ಅವರನ್ನು ಸನ್ಮಾನ ಕೂಡಾ ಮಾಡಲಾಯಿತು.